tag:blogger.com,1999:blog-3647359896003532739.post1529664499115306954..comments2023-06-17T05:27:12.787-07:00Comments on maretha maathugalu: ಭಾರತದ ನೆಲದಲ್ಲಿ ಇಸ್ಲಾಂ... Unknownnoreply@blogger.comBlogger1125tag:blogger.com,1999:blog-3647359896003532739.post-40953650595038274652012-09-23T10:09:37.945-07:002012-09-23T10:09:37.945-07:00ಭಾರತದ ಈಶಾನ್ಯ ಗುಡ್ಡಗಾಡಿನ ನಾಗಾಲ್ಯಾಂಡಿಗೆ ದೇಶ ಭ್ರಷ್ಟ ಯ...ಭಾರತದ ಈಶಾನ್ಯ ಗುಡ್ಡಗಾಡಿನ ನಾಗಾಲ್ಯಾಂಡಿಗೆ ದೇಶ ಭ್ರಷ್ಟ ಯಹೂದ್ಯರು ಮುಟ್ಟಿದ್ದು ಹೇಗೆ ಅಂತ ಹಿರಿಯರಾದ ಲೇಖಕ-ರೈತ ಮಧುಸೂದನ ಪೆಜತ್ತಾಯರು ಪ್ರಶ್ನೆ ಎತ್ತಿದ್ದರು ಅದಕ್ಕೆ ನಾನು ನೀಡಿದ ಉತ್ತರವಿದು. ಈ ಬಗ್ಗೆ ಮುಂದೆ ಇಲ್ಲಿಯೆ ಬರೆಯುತ್ತೇನೆ ಖಂಡಿತಾ.<br /><br /><br />ಸಾರ್ ಇಲ್ಲಿ ಒಂದು ಅದ್ಭುತ ಪಯಣದ ಕಥೆ ಅಡಗಿದೆ. ಯಹೋವನ ಆದೇಶದಂತೆ "ಯಾಂ ವಶೇಮ್" ( ದೇವರು ಕರುಣಿಸಿದ ಭೂಮಿ ಅಂದರೆ ಇಂದಿನ ಗಾಜಾಪಟ್ಟಿ, ಪಶ್ಚಿಮ ದಂಡೆಗಳು ಹಾಗೂ ಇಸ್ರೇಲಿನಿಂದ ಆಚೆಗೂ ಅಂದರೆ ಈಜಿಪ್ತ, ಸಿರಿಯಾ ಸಾರ್ಥ ಮಾರ್ಗಗಳನ್ನ ಅನುಸರಿಸಿ ಯಹೂದ್ಯರು ಅರೇಬಿಯಾದಾದ್ಯಂತ ಹರಡಿ ಹಂಚಿ ಹೋಗಿದ್ದರು. ಅವರ ಅನೇಕ ಬುಡಕಟ್ಟುಗಳು ಅಲ್ಲಿನ ಒಯಸಿಸ್ಸುಗಳಲ್ಲಿ ನೆಲೆ ಕಂಡು ಕೊಂಡಿದ್ದವು. ಸ್ವತಃ ಮಹಮದ್ ಹುಟ್ಟಿದ್ದ ಖುರೈಷಿ ಬುಡಕಟ್ಟಿನ ಆಚರಣೆಗಳೂ ಕೂಡ ಯಹೂದಿ ಮೂಲದವೇ ಆಗಿದ್ದವು. ಕಾಬಾ ಯಹೂದ್ಯರನ್ನೂ ಸೇರಿಸಿ ಎಲ್ಲರ ಆರಾಧ್ಯ ಪುಣ್ಯ ಕ್ಷೇತ್ರವಾಗಿತ್ತು.<br /><br /><br />ಆದರೆ ಇಸ್ಲಾಂ ಅರೇಬಿಯನ್ ಮರುಭೂಮಿಯಲ್ಲಿ ಪ್ರಬಲವಾದಂತೆ ಪರಮತ ಸಹಿಷ್ಣತೆ ಕಡಿಮೆಯಾಗಿ ಎಲ್ಲರನ್ನೂ ಕತ್ತಿಯ ಮಾರ್ಗದಿಂದಲಾದರೂ ಸರಿ ಇಸ್ಲಾಮಿಗೆ ನಿಷ್ಠೆಯನ್ನ ಒಪ್ಪಿಸುವುದೇ ಮಹಮದ್ ಹಾಗು ಆತನ ಅನುಯಾಯಿಗಳ ಗುರಿಯಾದಾಗ ಧರ್ಮ ಉಳಿಸಿಕೊಳ್ಳುವುದು ಅನಿವಾರ್ಯವಾಗಿ ವಿವಿಧ ನೌಕೆ ಗಳನ್ನೇರಿ ಯಹೂದ್ಯರ ಅನೇಕ ಬುಡಕಟ್ಟುಗಳು ಆಸರೆ ಬಯಸಿ ಹೊಸ ನೆಲ ಅರಸಿ ಹೊರಟವು. ದಿಕ್ಕಿಲ್ಲದ ಪಯಣವನ್ನ ಆರಂಭಿಸಿ ಎಲ್ಲೆಲ್ಲೋ ಹೋಗಿ ದಡ ಮುಟ್ಟಿದ್ದವು. ಅಂತಹ ಒಂದುಗುಂಪು ಕೇರಳದ ಗಡಿಗೂ, ಇನ್ನೊಂದು ಗುಂಪು ಇಂಡೋನೇಶಿಯಕ್ಕೂ , ಒಂದು ಶ್ರೀಲಂಕೆಗೂ, ಮತ್ತೊಂದು ಬರ್ಮಾಕ್ಕೂ, ದೂರದ ಫಿಲಿಫೈನ್ಸ್'ಗೂ ಹೋಗಿ ಮುತ್ತಿದವಂತೆ. ಅಂತೆಯೇ ನೆಲಮಾರ್ಗವಾಗಿ ಹೊರಟ ಅನೇಕ ಗುಪುಗಳಲ್ಲಿ ಒಂದೆರಡು ಗುಪುಗಳು ಕಾಬೂಲ್- ಕ್ಷಿಯೊಪೆಂಗ್- ಲಾಸಾ ಇಲ್ಲೆಲ್ಲೂ ಸಾಗಿದರೂ ಖಚಿತ ಆಸರೆಯ ಭರವಸೆ ಸಿಕ್ಕದೆ ಆನಂತರ ಉತ್ತರದ ಸಿಕ್ಕಿಂ ಮಾರ್ಗವಾಗಿ ನಾಗಾಲ್ಯಾಂಡ್ ತ್ರಿಪುರಾದವರೆಗೂ ಹಬ್ಬಿ ಕಡೆಗೆ ನೆಲೆ ನಿಂತರಂತೆ. ಅಲ್ಲಿ ಅವರದ್ದೆ ಬುಡಕಟ್ಟಿನ ನೋವ್ಕಾಯಾನಿಗಳ ಗುಂಪೊಂದು ಬಂಗಾಳಕೊಲ್ಲಿ ದಾಟಿ ಅಲ್ಲಿಗೆ ಬಂದು ಸೇರಿದ್ದನ್ನ ಕಂಡು ಅವರಿಗೆ ಅತೀವ ಅಚ್ಚರಿ ಆಯಿತಂತೆ. ಈ ಅತಿ ದೂರದ ವಲಸೆಯಲ್ಲಿ ಅವರ ಅಪಾರ ಮಾನ- ಧನ ಲೂಟಿಗೆ ಒಳಗಾಗಿದ್ದರೂ ಧರ್ಮವನ್ನವರು ಉಳಿಸಿ ಕೊಂಡಿದ್ದರು. <br /><br /><br />ಇವರೆಲ್ಲರಿಗೂ ರಲ್ಲಿ ಇಸ್ರೇಲಿನ ರಚನೆಯಾದಾಗ ಸ್ವದೇಶಕ್ಕೆ ಮರಳಲು ಅವಕಾಶ ನೀಡಲಾಯಿತು. ಅವರ ವಶ ಮೂಲದ ಸತ್ಯಾಸತ್ಯತೆಗಳನ್ನ ಇಸ್ರೇಲ್ ಸರಕಾರ ಪರಿಶೀಲಿಸುವಾಗ ಈ ಎಲ್ಲಾ ಅಚ್ಚರಿಯ ಸಂಗತಿಗಳು ಬೆಳಕಿವೆ ಬಂದವು! ಅವರಲ್ಲಿ ನೂರಕ್ಕೆ ತೊಂಬತ್ತು ಮಂದಿ ಹೀಬ್ರೂ ಮಾತೃಭಾಷೆಯನ್ನ ಮತ್ತೆ ಕಲಿತು ಅಲ್ಲಿನ ಮುಖ್ಯ ವಾಹಿನಿಯಲ್ಲಿ ಮರಳಿ ಬೆರೆತು ಹೋಗಿದ್ದಾರೆ. ಅವರಲ್ಲಿ ನಮ್ಮ ಕೇರಳ -ತ್ರಿಪುರಾ -ನಾಗಾಲ್ಯಾಂಡ್ ಹಾಗೂ ಗುಜರಾತಿನಿಂದ ಇಸ್ರೇಲಿಗೆ ಮರು ವಲಸೆ ಹೋದವರೇ ಆಗಿದ್ದಾರೆ ಅಂದರೆ ನಿಮಗೆ ಆಶ್ಚರ್ಯವಾದೀತು.<br /><br /><br />Anagha Kirana ಅನಘ ಕಿರಣhttps://www.blogger.com/profile/09587762117139340360noreply@blogger.com