16 October 2010

ನೀನಿಲ್ಲ...

ಊರೆಲ್ಲ ಹಬ್ಬದ ಗದ್ದಲ,
ನನ್ನೊಳಗೆ ನೀ ಮರಳಿ ಬಾರದ ನಿರಾಶ ಮೌನ/
ಮಾತೆಲ್ಲ ಮಡುಗಟ್ಟಿ ನಿಂತ ಕ್ಷಣ,
ಕದಡದ ಹೊರಗಣ ಕತ್ತಲನ್ನೂ ಅಣಗಿಸುತಿದೆ...
ಲಯ ಮರೆತು ಹೋದ ಭಗ್ನಮನದ ಒಡಕುಗಾನ//

ಹರಿದ ಮನದ ಮುಂದೆ...ಮೈ ಮೇಲಿರುವ ಹರಕು ಬಟ್ಟೆಯದೇನು ಹೆಚ್ಚುಗಾರಿಕೆ?.
ಮನವೆ ಮುರಿದಿರುವಾಗ....ಹರಕು ಮುರುಕು ಮನೆಯದೇನು ಸುಳ್ಳು ತೋರಿಕೆ?/
ಒಳಗಡೆಯ ಗಾಯ ಮಾಯಲಾಗದೆ ಕೊಳೆಯುತಿರುವಾಗ...
ಹೊರಗಡೆ ಮುಚ್ಚಿ ಮರೆಯಾಗಿಸುವ ಆಷಾಡಭೂತಿ ನಾನಲ್ಲ,
ಮುಚ್ಚಿಟ್ಟು ಸಾಧಿಸುವುದಾದರೂ ಎನುಳಿದಿದೆ ಈಗ...
ನೀನೆ ನನ್ನ ಜೋತೆಯಲಿಲ್ಲ//

1 comment:

ನಾಗರಾಜ್ .ಕೆ (NRK) said...

aaha . . . Beautiful
"Habbada shubhashayagalu"