22 July 2011

ಕೃತಜ್ಞತೆ....

ಈ ದೇಶಕ್ಕೆ ರಾಜಕೀಯ ಸ್ವಾತಂತ್ರದ ಸುಳಿಗಾಳಿ ಬೀಸಿದ್ದು ಕೇವಲ ಕೆಲವರಿಂದಷ್ಟೇ ಎಂಬ ಭ್ರಮೆ ಹಲವು ಭ್ರಮಾಧೀನರದ್ದು.ಹೀಗಿರುವಾಗಲೆ ಮೊ ಕ ಗಾಂಧಿ,ಜ ಲಾ ನೆಹರುಗಳನ್ನ ನಿರಂತರ ಜಪಿಸುತ್ತ ಅವರ ಉತ್ಸವಮೂರ್ತಿ ಹೊತ್ತು ಹೊತ್ತಲ್ಲದ ಹೊತ್ತಲ್ಲಿ ಕರಗ ಕುಣಿಯುವ ಜನ ( ಈ ಜಪದ ಹಿಂದೆ ಇಹದ ಸುಖ ಹಾಗು ಅಧಿಕಾರಗಳ ಅಪೇಕ್ಷೆ ಇರುತ್ತದೆ ಅನ್ನೋದು ಬೇರೆ ಮಾತು!) ಬಾಲಗಂಗಾಧರ ತಿಲಕ್(೨೩ ಜುಲೈ ೧೮೫೬-೧ ಆಗೋಸ್ಟ್ ೧೯೨೦),ಚಂದ್ರಶೇಖರ ಆಜಾದ್ ರನ್ನ (೨೩ ಜುಲೈ ೧೯೦೬-೨೭ ಫೆಬ್ರವರಿ ೧೯೩೧) ಜಾಣತನದಿಂದ ಮರೆಯುತ್ತಾರೆ.ಅಷ್ಟಲ್ಲದೇ ಇವರೆಲ್ಲರ ನಿತ್ಯ ಸ್ಮರಣೆಯಿಂದ ಯಾವುದೆ ರಾಜಕೀಯ ಲಾಭವೂ ಇಲ್ಲವಲ್ಲ?!
ಇಂದು ಭಾವಕ್ಯತೆಯ ನಿಜವಾದ ಪಾಠ ಕಳಿಸಿದ ತಿಲಕರ,ಸ್ವಾತಂತ್ರಕ್ಕಾಗಿ ಹಂಬಲಿಸಿ ಪ್ರಾಣ ತೆತ್ತ ಆಜಾದರ ಜನ್ಮದಿನ...ಕನಿಷ್ಠ ಇವತ್ತಾದರೂ ಅವರನ್ನ ತಂಪುಹೊತ್ತಿನಲ್ಲಿ ನೆನೆಯಬೇಕಲ್ಲ? ಅಷ್ಟೂ ಕೃತಜ್ಞತೆ ನಮ್ಮೊಳಗಿರದಿದ್ದರೆ ಹೇಗೆ?

1 comment:

Anonymous said...

225% correct :)