12 November 2012

ನಾನೂ ನನ್ನಾ ಕ(ನ)ಸಾ..........!


"ಕರುನಾಡ ಕಸಾ ಕಣೆ...." ಅಂತ ಬೆಂಗಳೂರಿಗ ಮೂರು ರಸ್ತೆ ಸೇರುವಲ್ಲಿ ತನ್ನ ಆಸನ(?) ಊರಿ ಗಂಟಲು ಹರಿದು ಹೋಗುವಷ್ಟು ಎತ್ತರದ ಧ್ವನಿಯಲ್ಲಿ ಇನ್ನು ಮುಂದೆ ನಿರಾತಂಕವಾಗಿ ಊಳಿಡಬಹುದು. "ಕ...." ಅನ್ನುವ ಮಾತು ಸುದ್ದಿ ಸುಬ್ಬಪ್ಪಗಳ ನಾಲಿಗೆ ತುದಿಯಲ್ಲಿ ಹುಟ್ಟುವ ಮೊದಲೆ ಎಲ್ಲಿ "....ಸಾ!" ಎಂದು ಅಮಾಯಕ ಮಗುವಿನಂತೆ ಮುಗ್ಧತೆ ನಟಿಸಿ, ಯಾವುದೋ ಕೇಳ ಬಾರದ ಕೇಳಿಸಿಕೊಂಡವರಂತೆ ಇಂತಹ ಘಾತುಕ ಪ್ರಶ್ನೆ ಕೇಳಿದ ಬದ್ಮಾಶರನ್ನು ಕೇವಲ ಕಣ್ಣೋಟದಲ್ಲಿಯೆ ಸುಟ್ಟು ಬಿಡುವ ದೂರ್ವಾಸರಂತೆ ದಿಟ್ಟಿಸುತ್ತಾ ಬಾಯಲ್ಲಿ ಮಾತ್ರ ಮೇಲಿನಂತೆ ಕೇಳುವ ಮಾನ್ಯ ಮುನ್ಸಿಪಾಲ್ಟಿ ಕಮೀಶನರ್ರನ್ನೂ, ಪೂಜ್ಯ ಮೇಯುವವರನ್ನೂ ಮೂಗಿದ್ದವರಿಗೆ ಖಡ್ಡಾಯ ನಿಷೇಧ ಹೇರಲೆ ಬೇಕಿರುವ "ಕಸ ಪೀಡಿತ" ಬೆಂದಕಾಳೂರಿನ ಬಿಟ್ಟಿ ದರ್ಶನ ಮಾಡಿಸಿ ಆದಷ್ಟು ಅವರ ಅಂತಃಚಕ್ಷುಗಳನ್ನ ತೆರೆಸುವ ಪ್ರಯತ್ನ ಮಾಡೋಣ ಅಂತಿದೀನಿ. ನಿಮ್ಮ ನಿಮ್ಮ "ಅತಿ ಸ್ವಚ್ಛ ಬಡಾವಣೆ"ಗಳ ನಾರುವ ಕಟ್ಟಕಡೆಯ ಕಸದ ರಾಶಿಯ ಛಾಯಾಚಿತ್ರವನ್ನ ನೀವೂ ಇಲ್ಲಿನ ಗೋಡೆಯ ಮೇಲೇರಿಸಿ. ಈ ಪವಿತ್ರ ಕಾರ್ಯದಲ್ಲಿ ನಿಮ್ಮ ಕಿಂಚಿತ್ ಸೇವೆಯನ್ನು ಮನಸ್ಸಿದ್ದಲ್ಲಿ ನೀವು ಸಲ್ಲಿಸಬಹುದು. ಕಮೀಶನ್ ವಸೂಲಿ ಸುಗ್ಗಿಯಲ್ಲಿ ಬೆದೆಗೆ ಬಂದ ಕುದುರೆಗಳಂತಾಗಿರುವ ಜನಪ್ರತಿ"ನಿಧಿ"ಗಳಿಗೆ ಕಸದವರೆಗೂ ಹೋಗೊ ಪುರುಸೊತ್ತಿಲ್ಲ ಪಾಪ! ನಾವೆ ಯಾಕೆ ಅವರಿದ್ದಲ್ಲಿಗೆ ಕಸವನ್ನ ಕೊಂಡೊಯ್ಯಬಾರದು?!

No comments: