10 December 2025

"ನ-ಮೋ ಸ್ತುತಿ."😎

"ನ-ಮೋ ಸ್ತುತಿ."😎


ಈ ತನಕ ವಾಟ್ಸಪ್ಪನ ಫಾರ್ವರ್ಡುಗಳಲ್ಲಿ ಮಾತ್ರ
ಗೋಬರ ಲೀಡರನಾಗಿ ನಾತ ಹೊಡೆಯುತ್ತಿದ್ದˌ
ವಿಶ್ವ"ಕುರು"ವಾಗಿ 
ಮೈ-ಮನಸಿನ ತುಂಬಾ
ದ್ವೇಷದ ಕೀವು ಕಟ್ಟಿಕೊಂಡು
ಕೊಳೆಯುತ್ತಾ ನಾರುತ್ತಿದ್ದ.
ಈಗ ಸಗಣೀಂದ್ರ ಧೂರ್ತನ಼಼
ನವನವೀನ ಭಾರತ ಭಾಗ್ಯ ವಿಧಾತನಾಗಿರುವ
ಭಕ್ತರ ನಾನ್ಬಯಾ"ಲಾಜಿಕಲ್" ಕಬೋದಿಯ
ಮಹಿಮೆಯನ್ನ ಏನೆಂದು ಬಣ್ಣಿಸಲಿ?


ಮಾರಿಕೊಂಡ "ಮಧ್ಯಮ"ಗಳಿಗೆ
ಚೀಪಲಷ್ಟು ಮೂಳೆಗಳನ್ನ
ಕಾಲಕಾಲಕ್ಕೆ ಕಾಲಡಿಗೆ ಎಸೆದೆಸೆದು
ಅ-ನಿಗಳೆಂಬ ದೇಶಕ್ಕಂಟಿರೋ ಅವಳಿ ಶನಿಗಳು
ಸುಣ್ಣಾ ಹರಾಜೆಯೊಬ್ಬನನ್ನ ಛೂ ಬಿಟ್ಟು
ಸಿಂಗಳೀಕನೊಬ್ಬನನ್ನ ಸಿಂಹವಾಗಿಸಿ
ಕಟ್ಟಿರುವ ಜೀಯವರ ಮಹಿಮೆಗಳನ್ನ
ನಾನೇನೆಂದು ವಿವರಿಸಲಿ?


ಕೂಗುಮಾರಿ ಚೂಲುಬಲೆಯಿಂದ ಹಿಡಿದು
ಸಂಘಕಟುಕರ ವಿದ್ವಾಂಸದ್ವಯರಾಗಿರೋ
ಬೋಳೂರು ಕುದರ್ಶನ - ರೋಗಿತಾ ಚಕ್ಕಧೂರ್ತ
ಬಲು ಬಣ್ಣಿಸಿ ವಿವರಿಸುವ
ಐವತ್ತಾರಿಂಚಿನ ಡೊಳ್ಳು ಹೊಟ್ಟೆಯ
ನರಿ ಮುಖದ ಮೋರಿಯ 
ಸಹಸ್ರನಾಮಾವಳಿಯ 
ಅದು ಹೇಗೆ ತಾನೆ ಹಾಡಿ ನಲಿಯಲಿ?


ಇದ್ದಿರದ ರೈಲು ನಿಲ್ದಾಣದಲ್ಲಿ 
ಮಾಡಿರದ ಚಹಾವನ್ನ 
ನಿಂತೆ ಇರದ ರೈಲಿನ ಯಾತ್ರಿಕರಿಗೆ
ನಿಂತ ನಿಂತಲ್ಲೆ ತೊಲ ಚಿನ್ನಕ್ಕೆ 
ಮೂರು ರೂಪಾಯಿ ಇದ್ದ 
"ಬುರೆ ದಿನ"ಗಳಲ್ಲೆ ಕಪ್ಪಿಗೆರಡು ರೂಪಾಯಿ
ದರದಲ್ಲಿ ಮಾರಿದ ಸೋಜಿಗಕ್ಕೆ ಬೆರಗಾಗಲೆ?


ಇನ್ನೂ ತಯಾರಾಗಿರದ ಡಿಜಿಕ್ಯಾಮರಾದಲ್ಲಿ
ಮೂರು ವರ್ಷ ಮೊದಲೆ ತೆಗೆದ ಚಿತ್ರವˌ
ಚಾಲ್ತಿಗೆ ಬಂದಿರದ ಅಂತರ್ಜಾಲದಲ್ಲಿ
ಹತ್ತು ವರ್ಷಗಳ ಹಿಂದೆಯೆ ಕ್ಷಣಾರ್ಧದಲ್ಲಿ
ಸಂಪರ್ಕ ಜಾಲವೆ ಇದ್ದಿರದ ಹಳ್ಳಿಯಿಂದ ದೆಲ್ಲಿಗೆ ಕಳಿಸಿˌ
ಮರುದಿನವೆˌ ಆಗಿನ್ನೂ ಕಪ್ಪು ಬಿಳುಪಿನ ಓಬಿ ರಾಯನ ಕಾಲದಲ್ಲಿದ್ದ
ರಾಜಧಾನಿಯ ಮುಖ್ಯದಿನಪತ್ರಿಕೆಗಳ ಮುಖಪುಟದಲ್ಲಿ
ಬಹುವರ್ಣದಲ್ಲಿ ಅದೆ ಚಿತ್ರವನ್ನ ಅಚ್ಚುಹಾಕಿಸಿದ್ದ
ಪವಾಡವನ್ನ ನೆನೆದು ಪಾವನವಾಗಲೆ?


ನೆಟ್ಟಗೆ ಶಾಲೆಗೆ ಒಂದೆ ಒಂದು ದಿನ ಹೋಗದಿದ್ದರೂ
ಎದೆ ಬಗೆದರೆ ನಾಲ್ಕಕ್ಷರದ ಜ್ಞಾನವಿಲ್ಲದಿದ್ದರೂ
ಸಕಲ ಸಂಗತಿಗಳಲ್ಲೂ ಸರ್ವಜ್ಞನಾಗಿರುವ
ಕಲೆಗಾರಿಕೆಗೆ ಬೆರಗಾಗಲೆ?
ಈಜಲು ತಿಳಿದಿರದಿದ್ದರೂ
ಕೆರೆಗೆ ಹಾರಿ ಮೊಸಳೆ ಮರಿ 
ಹಿಡಿದು ತಂದು ಸಾಕಿದ ಸಾಹಸಕ್ಕೆ ಸೈ ಎನ್ನಲೆ?
ಮೋಡದ ಮರೆಯಲ್ಲಿ ರಾಡರ್ ಕಣ್ಣು ತಪ್ಪಿಸುವ
ಮಹಾನ್ ಸಲಹೆಗೆ ಪೊಡಮೊಡಲೆ?
ಗಠಾರಿನಿಂದ ಗ್ಯಾಸ್ ತೆಗೆದ ತಂತ್ರಜ್ಞಾನಕ್ಕೆ
ತಲೆಬಾಗಲೆ?



ಕ್ಯಾಮರಾಗಳಿಲ್ಲದೆ ಹೆತ್ತ ತಾಯನ್ನೂ ಕಾಣಲು ಹೋಗದ
ಮಾತೃಪ್ರೇಮಕ್ಕೆ ಕರಗಲೆ?
ಛಾಯಾಗ್ರಾಹಕರು ಬಾರದೆ
ಕೇದಾರದ ಗುಹೆಯೊಳಗೆ ಹೂತೋ
ಇಲ್ಲಾ ಕನ್ಯಾಕುಮಾರಿಯ ಬಂಡೆಯ ಮೇಲೆ ಕೂತೋ
ಧ್ಯಾನ ಮಾಡುವ ಪವಾಡಕ್ಕೆ ಮಾರು ಹೋಗಲೆ?
ಬಾಳಿಸಲಾಗದ ತನ್ನ ಷಂಡತನ ಮುಚ್ಚಿಕೊಳ್ಳಲು
ಕಟ್ಟಿಕೊಂಡ ಹೆಂಡತಿಯಿಂದ ದೂರ
ಮನೆ ಬಿಟ್ಟು ಓಡಿ ಬಂದಿದ್ದರೂˌ
ಮದುವೆಯೆ ಆಗಿಲ್ಲ ಇನ್ನೂ ಅಂದಿದ್ದ
ಇಪ್ಪತ್ನಾಕ್ಕು ಕ್ಯಾರೆಟ್ ಸುಳ್ಳಿಗೆ ಮನ ಸೋಲಲೆ?


ಬಡತನ ಇದ್ದ ಕುಟುಂಬದಲ್ಲಿ ಹುಟ್ಟಿ
ಬಾಲ್ಯದಲ್ಲಿ ಈಡೇರಿಸಿಕೊಳ್ಳಲಾಗದ
ಮನದಾಸೆಗಳನ್ನೆಲ್ಲ
ಈಗ ಅಧಿಕಾರ ಪುಗಸಟ್ಟೆ ದಕ್ಕಿರೋವಾಗ
ಕಂಡವರ ಕಾಸಿನ ಖರ್ಚಿನಲ್ಲಿˌ
ದಿನಕ್ಕೊಂದು ಛದ್ಮವೇಷ
ಕ್ಷಣಕ್ಕೊಮ್ಮೆ ಮೇಕಪ್ಪು ಮಾಡಿಕೊಂಡು 
ಆತ್ಮರತಿಯ ಬಹಿರಂಗ ಪ್ರದರ್ಶನವನ್ನ 
ಮಾನಗೆಟ್ಟು ಮಾಡಿ ನಲಿಯುವ 
ತಿರುಪೆ ಶೋಕಿಗೆ ಭೇಷ್ ಅನ್ನಲೆ?



ದಿನ ಬೆಳಗಾದರೆ
ನೆಹರೂ ನಾಮಜಪ ಮಾಡುತ್ತಾˌ
ತನ್ನ ವೈಫಲ್ಯಗಳನ್ನೆಲ್ಲ ಆ ಧೀಮಂತನ
ಬಾಯಿಗೊರಸಿˌ
ಕೇವಲ ಐಟಿ"ಸುಳ್ಳ"ನ್ನೆ ನಂಬಿ
ವಾಟ್ಸಪ್ಪಿನ ಆಸರೆಯಲ್ಲೆ ಉಳಿದು 
ಜೀವಿತಾವಧಿಯ ಕಾಲ ಹಾಕುತ್ತಿರುವˌ
ಅದೆ ನೆಹರು ಕಟ್ಟಿದ್ಧ ಶಿಕ್ಷಣ ಸಂಸ್ಥೆಗಳಲ್ಲಿ ಓದಿ
ಅದೆ ನೆಹರು ಸ್ಥಾಪಿಸಿದ್ಢ ಕಾರ್ಖಾನೆ 
ಸಂಸ್ಥೆ ಬ್ಯಾಂಕುಗಳಲ್ಲಿ ದುಡಿದು
ಅದೆ ನೆಹರು ರೂಪಿಸಿದ್ದ ಪಿಂಚಣಿಯಲ್ಲಿ ಈಗ 
ಕಾಲ ಹಾಕುತ್ತಾˌ
ಮತ್ತದೆ ನೆಹರೂವನ್ನ ವಾಚಾಮಗೋಚರ ಬೈದು
ಉಗಿದು ಉಪ್ಪಿನಕಾಯಿ ಹಾಕುವ ಹುಟ್ಟಾ ಕೃತಘ್ನ
ನಿವೃತ್ತ ತಲೆಮಾಸಿದ ಅಯೋಗ್ಯರ ತಲೆಯೊಳಗಿನ
ಮಾನಸಿಕ ವಿಕೃತಿ ಪ್ರದರ್ಶಿಸುವ ಧೈರ್ಯಕ್ಕೆ
ತಿದಿಯೊತ್ತಿ ತಾನವರ ಹೃದಯದಲ್ಲಿ
ದಿನಕ್ಕೊಂದು ವೇಷ ಹಾಕಿಕೊಂಡು
ಕ್ಷಣಕ್ಕೊಂದು ಮೋಸ ಮಾಡಿಕೊಂಡು
ಮೆರೆಯುವ ಚಾಕಚಾಕ್ಯತೆಗೆ ಮೂಗಿನ ಮೇಲೆ ಬೆರಳಿಡಲೆ?


ನಾನೂ ಪೊಡಮೊಟ್ಟು ಟೆಲಿಪ್ರಾಂಪ್ಟರಿನ
ಪ್ರಾಂಟ್ ಇಲ್ಲದೆ ನೆಹರೂ ಹೊರತು
ಬೇರೊಂದು ಪದ ಉಚ್ಛರಿಸಲರಿಯದ
ಅಸಾಧ್ಯ ಪಾಂಡಿತ್ಯಕ್ಕೆ ಶರಣಾಗಲೆ?
ನಾನೂ "ನ-ಮೋ ನ--ಮೋ ಪ್ರಭು
ವಾಕ್ಯಮನಾತೀತ" ಎಂದು ಎದ್ದಲ್ಲಿ ಬಿದ್ದಲ್ಲಿ
ಸ್ತುತಿಸಿಕೊಂಡಿರುವ ಜೋ಼ಂಬಿಯಾಗಲೆ?
ಆಗಲೆ? ಆಗಲೆ? ಆಗಲೆ?
ಬಾಳಲ್ಲಿ ಅಡ್ಡದಾರಿ ಹಿಡಿದಾದರೂ ಸರಿ
ಭಕ್ತರ ಆರಾಧ್ಯ ದೆವ್ವ ಕಬೋದಿಯಂತೆ ಮುಂದೆ ಸಾಗಲೆ?


- 🙂

"ವಂದೆ ಮಾತರಂ" ಅನ್ನುವ ನಾಟಕದ ದಗಲುಬಾಜಿ.....

"ವಂದೆ ಮಾತರಂ" ಅನ್ನುವ ನಾಟಕದ ದಗಲುಬಾಜಿ.....

ಖೂಳರ ಕಾರಸ್ಥಾನವಾಗುತ್ತಿದೆ ದಿನ ನಿತ್ಯದ ಬಾಳು,
ಯಾರು ತಾನೆ ಕೇಳಿಯಾರು ಹೇಳಿ?
ಪ್ರತಿದಿನ ಸತ್ತು ಸುಣ್ಣವಾಗುವವರ ಗೋಳು!


ಧರ್ಮದ ಹೆಸರಿನಲ್ಲಿ ಉದ್ದಿಮೆ ನಡೆಸುವ
ಕಾಣಿಕೆಯ ಕೋಟಿ ರೂಪಾಯಿಗಳ ಕಾಸಿನಲ್ಲೆ
ಸಾಮ್ರಾಜ್ಯ ಕಟ್ಟಿ ಮೆರೆಯುವ 
ತನ್ನನ್ನ ತಾನೆ ಧರ್ಮಕ್ಕೆ ಅಧಿಕಾರಿಯಾಗಿ
ಸ್ವಘೋಷಿತ ಪ್ರವಾದಿಯಂತೆ ಉದ್ಭವಿಸಿರುವ ನೀಚ
ಕಾಮಾಂಧರ ಪಡೆಯ ಕಮಾಂಡರನಾಗಿದ್ದರೂ
ಖಾವಂದನೆಂದು ಪೊಡಮಡುವ ಮೂಢರು.


ಧರ್ಮವನ್ನೆ ತನ್ನ ಅಸ್ತಿತ್ವಕ್ಕೆ ನೆಲೆಯಾಗಿಸಿಕೊಂಡು
ಯಾರೂ ಒಪ್ಪಿಸಿರದಿದ್ದರೂ ತನಗೆ ತಾನೆ
ಅದರ ಗುತ್ತಿಗೆ ಪಡೆದುಕೊಂಡುˌ
ದೇಶ ಮುನ್ನಡೆಸುವ ಬದಲು
ದೇಶವಾಸಿಗಳ ನಡುವೆಯೆ
ತಂದಿಟ್ಟು ಅವರರವರೆ ಹೊಡೆದಾಡಿಕೊಂಡು
ಸಾಯಲು ಪುಸಲಾಯಿಸುವ ತಿದಿಯೊತ್ತಿ.
ಹಾಗೆ ಸತ್ತವರ ಚಿತೆಯ ಉರಿಯಲ್ಲಿ 
ತನ್ನ ಮೋಟು ಬೀಡಿ ಹೊತ್ತಿಸಿಕೊಳ್ಳುವ
ನಿಷ್ಕೃಷ್ಟನ "ಭಾರತ ಭಾಗ್ಯ ವಿಧಾತ"
ಎಂದೆ ನಂಬಿ ಆ ಅಧಮನ
ಮಹಿಮೆಯ ಕೂತಲ್ಲಿ-ನಿಂತಲ್ಲಿ ಕೊಂಡಾಡುವರು.



ರಾಜಕೀಯವೆಂಬುದು ಕಾಸು ಕೊಳ್ಳೆ ಹೊಡೆವ ಉದ್ಯಮ
ವ್ಯಥೆಯ ಧ್ವನಿಯಲ್ಲಿ "ಅದು ಹಾಗಲ್ಲಣ್ಣ" ಅನ್ನುವವರೆ 
ಈಗಿಲ್ಲಿ ಇಂತವರ ನಡುವಿನ ಅಧಮˌ
ಹಸಿದು ಹೊಟ್ಟೆ ಪಾಡಿಗೆ ಕೈಯೊಡ್ಡುವವನ
ಹಂಗಿಸಿ ಬೆರೆಸಾಡುವ ಮಂದಿ.
ಅದೆˌ ಸರಕಾರಿ ಖಜಾನೆಗೆ ಕನ್ನ ಕೊರೆದು ಕೊಬ್ಬುವವನ
ಧರ್ಮದ ಮಂಕುಬೂದಿ ಎರಚಿ
ಮೈ ಬಗ್ಗಿಸಿ ದುಡಿಯಲೊಲ್ಲದೆ ಕೂತಲ್ಲೆ 
ಪರಪುಟ್ಟನಾಗಿ ತನ್ನ ತಿಕದ ಛರ್ಬಿ ಹೆಚ್ಚಿಸಿಕೊಳ್ಳುವವನ ಉಧೋ ಉಧೋ ಎಂದು ಬಹುಪರಾಕು ಊಳಿಡುವ
ಮತಿಸತ್ತವರ ನೇರ ಮೆದುಳಿಗೇನೆ ಲಕ್ವಾ ಹೊಡೆದಿರುವ
ಮಾನಸಿಕ ಪಾರ್ಶ್ವವಾಯು ಪೀಡಿತರ ಮಂದೆ.



ಕೇವಲ ಬೆವರಲ್ಲ ರಕ್ತ ಸುರಿಸಿ 
ಗೇಯ್ದು ಪೈಸೆ ಪೈಸೆ ತೆರಿಗೆ ಕಟ್ಟುವ ಶ್ರಮಜೀವಿಯ
ಕಡು ಕಷ್ಟದ ದುಡಿಮೆಯ ದುಡ್ಡಲ್ಲಿ 
ಸಂಸತ್ತಿನಲ್ಲಿ ತಿರುಪೆ ಶೋಕಿ ಮಾಡಿಕೊಂಡು
ಪ್ರಭುಗಳು ಮತ್ತವರ ಪಟಾಲಂ 
"ವಂದೆ ಮಾತರಂ" ಗೀತೆಯ ಮೇಲೆ
ದಿನಗಟ್ಟಲೆ ಹಣ-ಸಮಯ 
ವ್ಯರ್ಥಗೊಳಿಸಿ ಅನಗತ್ಯ ಒಣಚರ್ಚೆ ಅಲ್ಲ ಕಣ್ರಪ್ಪ
ನಡೆಸ ಬೇಕಿರೋದು ಈ ಹೊತ್ತಿಗೆ,
ಅತ್ತ ಹಸಿದು ಸಾಯದಂತೆ
ಇತ್ತ ಅದನ್ನೊಂದನ್ನೆ ನಂಬಿ 
ಬದುಕಲೂ ಆಗದಂತೆ
ಕುಟುಂಬಕ್ಕೆ ಐದು ಕಿಲೋ ಸೊಸೈಟಿ ಅಕ್ಕಿಯ
ಭಿಕ್ಷೆ ಎಸೆದು ಅಂಟದಂತೆ ತಡೆಯಲಾಗಿದೆ
ಬಡವರ ಬೆನ್ನು ಹೊಟ್ಟೆಗೆ.



ಪ್ರಜೆಗಳೆಂಬ ಜೀವಂತ ನಡೆದಾಡುವ ಶವಗಳˌ
ಜ್ವಲಂತ ಸಮಸ್ಯೆಗಳ ನೈಜ ಬದುಕು
ನೀನು-ನಾನೆನ್ನದೆ ನಮ್ಮೆಲ್ಲರನ್ನೂ
ಹಿಂಡಿ ಹಿಪ್ಪೆ ಮಾಡಿ ಹೈರಾಣಾಗಿಸಿರೋವಾಗ
ಒಂದಾಗಿ ಭ್ರಾತೃತ್ವ ಬೆಳೆಸಿ ಕೊಂಡು
ನಮ್ಮ-ನಿಮ್ಮ ಹಿರಿಯರಂದು ಕಟ್ಟಿ ಕೊಟ್ಟಿರುವ
ಈ ದೇಶವನ್ನ ಉಳಿಸಿ-ಬೆಳೆಸಿಕೊಂಡು
ಹೋಗುವುದು ಇಂದಿನ ತುರ್ತು ಅಗತ್ಯ.
"ದ್ವೇಷ"ಪ್ರೇಮವಲ್ಲ ಕಾಣಿರೋ
ದೇಶಪ್ರೇಮವಷ್ಟೆ ಅಂತಿಮ ಸತ್ಯ.


ಖೂಳರ ಕಾರಸ್ಥಾನವಾಗುತ್ತಿದೆ ದಿನ ನಿತ್ಯದ ಬಾಳು,
ಯಾರು ತಾನೆ ಕೇಳಿಯಾರು ಹೇಳಿ?
ಪ್ರತಿದಿನ ಸತ್ತು ಸುಣ್ಣವಾಗುವವರ ಗೋಳು!


- 🙂