14 September 2011

"ಕರಿ"ಕರಪತ್ರಿಕೆಯ ಕರಡಿ ಸಂಪಾದಕನೂ.... ರೆಡ್ಡಿಯಿಟ್ಟ ಸ'ಗಣಿ'ಯನ್ನ ತಿಂದ ಅವನ ಕಪ್ಪು ಸಂಪಾದನೆಯೂ....

ತಾವು ಮಾತ್ರ ಪರಮ ಸಾಚಾಗಳಂತೆ ಸೋಗು ಹಾಕಿಕೊಂಡು ವಾರವಾರ ಕಂಡವರನ್ನ ಬಿಟ್ಟಿ ಬೆಂಡೆತ್ತುವ ಕೆಲವರ ಸ್ವಂತ ಅಂಡು ಕೊಳೆತು ಬಹಿರಂಗವಾಗಿ ನಾರುತ್ತಿರೋದು ಅಸಹ್ಯ ಹುಟ್ಟಿಸುತ್ತಿದೆ.ಉಪ್ಪು ತಿಂದವ ಹೇಗೆ ನೀರು ಕುಡಿಯಬೇಕೊ ಹಾಗೇನೆ ಸ'ಗಣಿ' ಕಪ್ಪ ತಿಂದವರೂ ಅದನ್ನ ಕಾರಲೆಬೇಕು.ಅಥವಾ ಒತ್ತಾಯದಿಂದಲಾದರೂ ಅದನ್ನ ಕಾರಿಸುವ ಹೊಣೆ ನಾವು ನಂಬಿರುವ ( ಆಗಾಗ ಈ ನಂಬಿಕೆಗೆ ಭರಪೂರ ದ್ರೋಹ ಆಗುತ್ತಿದ್ದರೂ ಸಹ!) ವ್ಯವಸ್ಥೆಯ ಮೇಲಿದೆ.ಲೋಕಾಯುಕ್ತರ ವರದಿ ಸರಕಾರದ ಕೈಸೇರಿ ತಿಂಗಳೆರಡು ಕಳೆದಿದೆ.ಅದೆಷ್ಟೆ ವಿಸ್ತಾರವಾಗಿದ್ದರೂ ನಮ್ಮಂತ ಹುಲುಮಾನವರಿಗೆ ಅದನ್ನ ಓದಿ ಅರಗಿಸಿಕೊಳ್ಳಲು ಈ ಕಿರುಅವಧಿ ಧಾರಾಳವಾಗಿ ಸಾಕಾಗಿರೋವಾಗ ನಮ್ಮನ್ನಾಳುವ ಸರಕಾರವೇನು ಕತ್ತೆ ಕಾಯುತ್ತಿದೆಯ? ಎಂದು ನೀವು 'ಖಾರ'ವಾಗಿ ಪ್ರಶ್ನಿಸುವುದರಲ್ಲೂ ಅರ್ಥವಿದೆ.( ಆಗಾಗ ಶಾಸಕರು ಚಪಲಕ್ಕೆ 'ಗಂಟು' ಬಿದ್ದವರಂತೆ ಜೊಲ್ಲು ಸುರಿಸುತ್ತ ರೆಸಾರ್ಟ್'ಗಳಿಗೆ 'ತೀರ್ಥ'ಯಾತ್ರೆ ಹೋಗೋದನ್ನ ನೋಡಿದರೆ ಸರಕಾರ ಅಕ್ಷರಶಃ ಈ 'ಕತ್ತೆಗಳನ್ನ' ಕಾಯೋದರಲ್ಲಿಯೆ ಹೈರಾಣಾಗಿ ಹೋಗಿದೆ ಅನ್ನೋದರಲ್ಲೇನೂ ಸಂಶಯವಿಲ್ಲ!) ಇಂತಹ ವಿಪರೀತ ಪರಿಸ್ಥಿತಿಯಲ್ಲಿ ಕಡೆಗೂ ನಿಜವಾಗಿ ನೊಂದಿರುವವರ ಕೈ ಹಿಡಿದಿರೋದು ಘನ ಸರ್ವೋಚ್ಛ ನ್ಯಾಯಾಲಯ.ಮೊನ್ನೆ ಅದು ಬಳ್ಳಾರಿಯಲ್ಲಿ ಬೇಟೆಗೆ ನುಗ್ಗಿಸಿದ ಸಿಬಿಐ ಸೀಳುನಾಯಿಗಳ ಶಿಕಾರಿ ಪಿಪಾಸೆ ನೋಡಿದ ಮೇಲೆ ಅವುಗಳ ಮುಂದಿನ ಸಂಭವನೀಯ ರಕ್ತಪಿಪಾಸುತನಕ್ಕೆ ಬಲಿಯಾಗಲಿಕ್ಕಿರುವ 'ಕನ್ನಡ'ದ ಕೆಲವು 'ಖಾಸ್' ಖದೀಮ ಕಳ್ಳರ ನೆಮ್ಮದಿಗೆ ಕಿಚ್ಚು ಬಿದ್ದಿದ್ದರೆ,ನಮ್ಮಂತಹ 'ಕನ್ನಡ'ನಾಡಿನ ನಿಸ್ಪೃಹ ಪ್ರಜೆಗಳ ನೋವಿನ ನಡುಕಕ್ಕೆ ಕೊಂಚ ಬೆಚ್ಚಗಿನ ಶಾಖ ಸಿಕ್ಕಂತಾಗಿ ನಿಜವಾಗಿಯೂ 'ಹಾಯ್' ಎನಿಸುತ್ತಿದೆ!



ಸಂತೋಷ ಹೆಗ್ದೇರು ತಮ್ಮ ಅಧಿಕಾರದ ಚಾರ್ಜನ್ನು ಹೊಸ ಲೋಕಾಯುಕ್ತರಾಗಿದ್ದ ಶಿವರಾಜಪಾಟೀಲರಿಗೆ ವಹಿಸಿಕೊಟ್ಟು ತಮ್ಮ ಕಚೇರಿಯಿಂದ ಹೊರ ಬರುತ್ತಿದ್ದಂತೆಯೆ ಕೆಲವು ಮಸಿಮುಖದ ಕರ'ಪತ್ರಿಕೆ' ಹೊರತರುವ ಮಂದಿ ತೆಗೆದ ಸಮಯಸಾಧಕ ಉದ್ಗಾರಗಳನ್ನ ನೀವು ಖಂಡಿತವಾಗಿಯೂ ಗಮನಿಸಿಯೆ ಇರುತ್ತೀರಿ.ಮೊದಲಿಗೆ ಅದೆಲ್ಲಿಂದ ಆರೋಪಗಳ ವ್ಯಥಾಲಾಪಗಳನ್ನು ಆರಂಭಿಸುವುದೊ ತಿಳಿಯದೆ "ಇಷ್ಟೊಂದನ್ನ ಬರೀಲಿಕ್ಕೆ ನಿದ್ದೆಯಿಲ್ಲದ ರಾತ್ರಿಗಳನ್ನ ಕಳೆದಿದೀನಿ ಅಂತಾರೆ ಲೋಕಾಯುಕ್ತರು! ಆದರೆ ಅದನ್ನ ನಿಜವಾಗಿಯೂ ಅವರು ಬರೆದೆ ಇಲ್ಲಾ!!.ಅದೇನಿದ್ದರೂ ಯು ವಿ ಸಿಂಗ್'ರ ಬರಹ" ಅಂತ ಮೊದಲ ಬಟ್ಟೆ ಹಾವನ್ನ ಹೊರಬಿಟ್ಟರು.ಅಷ್ಟಕ್ಕೂ ಲೋಕಾಯುಕ್ತರು "ನನಗೆ ಕೂತು ಬರೆಯೋದು ಕಷ್ಟದ ಕೆಲಸ.ಆದರೆ ಉಕ್ತ ಲೇಖನವನ್ನ ಬರಿಸ್ತೇನೆ,ನ್ಯಾಯಾಧೀಶನಾದಂದಿನಿಂದಲೂ ಹೀಗೇನೆ" ಅಂತ ಈ ಹಿಂದೆಯೆ ಅನೇಕ ಭಾರಿ ಬಹಿರಂಗವಾಗಿ ಹೇಳಿರೋದರಿಂದ ಇದರಲ್ಲಿ ಯಾವ ಹೊಸ ಸಂಗತಿಯೂ ಹೊರಬರಲಿಲ್ಲ.ಬಹುಷಃ ಇಂಟರ್ನೆಟ್'ನಿಂದೆಲ್ಲ ಲಜ್ಜೆಗೆಟ್ಟು (ಕದ್ದ ನಂತರವೂ ಮೂಲಕ್ಕೆ ಕ್ರೆಡಿಟ್ ಕೊಡದ ಖದೀಮರನ್ನ ಇನ್ನು ಹೇಗೆ ತಾನೇ ಕರಿಯೋದು ಹೇಳಿ?) ಕದ್ದು ಮತ್ತದನ್ನ ಬೇರೆಯವರಿಂದ ಬರೆಸಿ ತಮ್ಮ ಹೆಸರಿನಲ್ಲಿ ಪತ್ರಿಕೆ ಹಾಗು ಪುಸ್ತಕಗಳಲ್ಲಿ ಪ್ರಕಟಿಸಿಕೊಂಡು ಬೀಗುವ ಅವರು ಹೆಗ್ಡೇರ ವಿಷಯದಲ್ಲೂ "ತನ್ನಂತೆ ಪರರು" ಎಂಬ ಭಾವಕ್ಕೆ ಪಕ್ಕಾಗಿರುವ ಸಕಲ ಸಾಧ್ಯತೆಗಳೂ ಇವೆ.ಆಮೇಲೆ ಒಂದಿಡೀ ಸಂಚಿಕೆಯಲ್ಲಿ ಹೆಗ್ಡೇರನ್ನ ತನ್ನ ಕೈಲಾದಷ್ಟು ತೆಗಳಿ ಈಗಾಗಲೆ ಕದ್ದು ಕಪ್ಪ ತಿಂದು ಕಾನೂನಿನಡಿ ತಗಲು ಹಾಕಿಕೊಂಡಿರುವ ತಮ್ಮ ಹತಾಶೆಯನ್ನ ಓತಪ್ರೋತವಾಗಿ ಹರಿಯಬಿಟ್ಟು ಮೈಪರಚಿಕೊಂಡರು.ಮರುವಾರ ಇನ್ನಷ್ಟು ಸುಳ್ಳು ಸಮಾಧಾನಗಳನ್ನ ತಮಗೆ ತಾವೆ ಹೇಳಿಕೊಂಡು ಯಾರು ಕೇಳದಿದ್ದರೂ ಇನ್ನೊಂದಷ್ಟು ಸ್ವಪರ ಸಫಾಯಿಗಳನ್ನ ;ಅದು ಸುಳ್ಳೆಂದು ಎಲ್ಲರಿಗೂ ಗೊತ್ತಿದ್ದರೂ ತಮ್ಮ ಅಭ್ಯಾಸ ಬಲದಂತೆ ಹೇಳಿಕೊಂಡರು.ಆದರೇನು ಮಾಡುವುದು ಆ 'ಜನಾರ್ಧನ'ನಿಗೆ ಚೂರೂ ಕರುಣೆಯಿಲ್ಲ ನೋಡಿ! ಕಡೆಗೂ ಆ ಅತಿಕೆಟ್ಟ ಘಳಿಗೆ ಬಂದು ವಕ್ಕರಿಸಿಕೊಂಡೆ ಬಿಟ್ಟಿತು.ಸ್ವತಹ ಜನಾರ್ಧನನೆ ಹಗ್ಗ ಕಡೀತಿರೋವಾಗ ಈ ಕರಿಮುಖದ ಕೆಟ್ಟಹುಳಗಳು ಈಗ ಮತ್ತೆ ಶಾವಿಗೆ ಬೇಡುತ್ತಿವೆ 'ಓದುಗ ಪ್ರಭು'ಗಳಲ್ಲಿ.


ಸಂತೋಷ ಹೆಗ್ದೇರು ಪತ್ರಿಕಾಗೋಷ್ಠಿ ನಡೆಸಿದ್ದಕ್ಕೊಂದು ಕೊಂಕು.( ಯಾವ ಹೈಕೋರ್ಟ್ ನ್ಯಾಯಮೂರ್ತಿಗಳೂ ಹಾಗೆ ಮಾಡೋದಿಲ್ಲ ಅಂದ ಮಾತ್ರಕ್ಕೆ ಅದು ನಿಯಮ ಬಾಹಿರವೇನಲ್ಲ.ಸಂವಿಧಾನದಲ್ಲೆ ವಾಕ್ ಸ್ವಾತಂತ್ರ ಪ್ರತಿಯೊಬ್ಬ ಭಾರತೀಯನಿಗೂ ಕೊಡಲಾಗಿದೆ ಹಾಗು ತನ್ನ ಹಿತಾಸಕ್ತಿಗಳ ಕುರಿತು ನಡೆಯುವ ಯಾವುದೆ ಚಟುವಟಿಕೆಗಳನ್ನ ತಿಳಿದುಕೊಳ್ಳೋದು ದೇಶದ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕು ಅನ್ನೋದು ಈ ಮೇಧಾವಿಗೆ ಪಾಪ ಅವಸರದಲ್ಲಿ ಮರೆತೆ ಹೋಗಿದೆ.ಲೋಕಾಯುಕ್ತ ಸ್ವಾಯುತ್ತ ಸಂಸ್ಥೆಗೆ ನ್ಯಾಯಾಧಿಕರಣದ ಮಟ್ಟಕ್ಕೆ ಮಾನ್ಯತೆ ಇದೆ ಅಂದ ಮಾತ್ರಕ್ಕೆ ಅದು ಕೇವಲ ಮುಚ್ಚಿದ ಬಾಗಿಲುಗಳ ಹಿಂದೆ "ಕೇಳಿ" ನಡೆಸುವ "ಬೆಂಗಳೂರಿನ" ಪತ್ರಿಕೆಯ ಕಛೇರಿಯಂತಲ್ಲ,ಪ್ರತಿಯೊಬ್ಬ ಸಾರ್ವಜನಿಕರ ಅಹವಾಲಿಗೆ ಬಹಿರಂಗ ಉತ್ತರದಾಯಿ ವ್ಯವಸ್ಥೆಯದು ಎಂಬ ಅರಿವಿಲ್ಲದ ಈ ಅರಿವು'ಕೇಡಿ'ಯನ್ನ ನೋಡಿ "ಉಗ್ರ'ಪ್ರತಾಪಿ'ಯೊಬ್ಬನ ಅರೆಬೆಂದ ಪುಸ್ತಕವೊಂದರ ಬಿಡುಗಡೆಗೆ ಹೆಗ್ದೇರು ಹೋಗಿದ್ದ ಬಗ್ಗೆ ಈ 'ಬಾಟಮ್ ಐಟಂ'ಗೆ ಬಾಟಮ್'ನಿಂದ ಕೆಳಗೆಲ್ಲ ವಿಪರೀತ ಉರಿ :ಅದಕ್ಕೆ ಇದರ ಬಡಬಡಿಕೆ ಈ ಪರಿ" ಎಂದು ಆತನ ಹುಟ್ಟುಗುಣ ಗೊತ್ತಿದ್ದ ಮಂದಿಯೆಲ್ಲ ನಕ್ಕು ಸುಮ್ಮನಾದರು.ಇಷ್ಟೆ ಆಗಿದ್ದರೆ ಇದೊಂದು ಕೆಟ್ಟ ಕ್ರಿಮಿ ಅಂದುಕೊಂಡು ಕನ್ನಡಿಗರು ಅದಕ್ಕೆಲ್ಲ ಕೇರ್ ಮಾಡದೆ ಇದ್ದಿರಬಹುದಾಗಿತ್ತೇನೊ.

ಪದ್ಮನಾಭನಗರದ ಈ ಪರ್ಮನೆಂಟ್ ಪೀಡೆ,ತನ್ನ ಒಂದುಕಾಲದ "ಆಪ್ತಮಿತ್ರ" ಬಾಣಭಟ್ಟನ ಜೊತೆಗೆ ಸದ್ಯದಲ್ಲೆ ಸಿಬಿಐ ಹೆಣೆಯುತ್ತಿರುವ ಬಲೆಗೆ ಬಿದ್ದು ಅಗ್ರಹಾರಕ್ಕೆ ಹಾರವಾಗುವ ಸಕಲ ಸಾಧ್ಯತೆಗಳೂ ಇರೋವಾಗ ಅದಕ್ಕೆ ಕಾರಣರಾದ ಸಂತೋಷ ಹೆಗ್ಡೇರ ಬಗ್ಗೆ ಅಸಂತೋಷ ಪ್ರಕಟಿಸುತ್ತ ವಾರವಾರವೂ ತನ್ನ ಮೈ ಪರಚಿ ಕೊಳ್ಳೋದರಲ್ಲಿ ಅಚ್ಚರಿಯೇನೂ ಇಲ್ಲ.ಆದರೆ "ಶ್ರೀರಾಮುಲು ಮುಗ್ಧ,ಸಾಚಾತನದ ಸಾಕಾರ ರೂಪವೆ ಆಗಿರುವ ಅವನ ಬಾಯಿಯಿಂದ ಕೆಜಿ ಕಬ್ಬಿಣದ ಅದಿರಿಗೆ ಎಷ್ಟು ಬೆಲೆ ಅಂತ ಯಾರಾದ್ರೂ ಹೇಳಿಸಿ ನೋಡೋಣ?" ಅಂತೆಲ್ಲ ತನ್ನ 'ಕಾಸ್'ಬಾಚುವ ಪತ್ರಿಕೆಯಲ್ಲಿ ಪದೆಪದೆ ಮುಲುಗತೊಡಗಿದ ನೋಡಿ ಇಷ್ಟು ದಿನ ರಾಮುಲು ಪ್ರಸಾದ ರೂಪವಾಗಿ ತಿನ್ನಿಸಿದ ಅಮೆಧ್ಯದ ವಾಸನೆ ಪದ್ಮನಾಭನಗರದಾಚೆಗೂ ಪಸರಿಸತೊಡಗಿತು.


ತನ್ನ ಅಕೌಂಟಿಗೆ ಯಾವ ಗಣಿ ಕಪ್ಪವೂ ಸಂದಾಯವಾಗಿಲ್ಲವಂತಲೂ-ತಾನಿನ್ನೂ ಪರಮ ಪವಿತ್ರನಾಗಿದ್ದು ಕಂಡವರ ಕಾಸು ತನಗೆ ಕಕ್ಕ ಅಂತಲೂ ಬಿಕ್ಕಿ ಬಿಕ್ಕಿ ಸಮಾಜಾಯಷಿ ಬಿತ್ತುವುದರ ಜೊತೆಜೊತೆಗೆ "ಖಾರಪುಡಿ ಮಹೇಶನ ಡೈರಿಯಲ್ಲಿ ಪತ್ತೆ ಯಾದ ವಿ,ಭಟ್ಟ ರಾಣಿರಸ್ತೆಯ ಅವನೆ! ಆದರೆ ಆ ಆರ್'ಬಿ ಮಾತ್ರ ರಂಗನಾಥ ಭಾರದ್ವಾಜ" ಅಂತ ತನ್ನ ಮೈಗಂಟಿದ್ದ ಗಣಿಧೂಳನ್ನ ಇನ್ಯಾರೊ ಅಮಾಯಕರ ಮೇಲೆ ಹೊಡೆದು ಕೆಡಗುವ ಹೀನತನಕ್ಕೆ ಇಳಿದ ನೋಡಿ,ಹಾಗಿದ್ದರೆ ತಮ್ಮ ಖಾಸಗಿ ಫೋನ್'ನಂಬರ್ ಅಲ್ಲಿ ನಮೂದಿಸಿರುವ ಆರ್'ಬಿ ಹೆಸರಿನ ಮುಂದೆ ಏನು 'ಲವಲವಿಕೆ' ನಡೆಸುತ್ತಿದೆಯೇನೊ ಹರಾಮಿ? ಎಂದು ಬಲ್ಲವರು ಕ್ಯಾಕರಿಸಿ ನಕ್ಕರು.ಮಾತೆತ್ತಿದರೆ 'ಒಂದು ಲಡಕಾಸಿ ಸುಜುಕಿ ಹತ್ತಿ ಬೆಂಗಳೂರಿಗೆ ಬಂದೆ....' ಅಂತ ಅದ್ಯಾವುದೊ ಪುರಾತನ ಕಾಲದ ಬೂಷ್ಟು ಹಿಡಿದ ಬರಗೆಟ್ಟ ಕಥೆ ಆರಂಭಿಸುವ ಈ ಅಧಿಕಪ್ರಸಂಗಿ "ನನ್ ಆಸ್ತಿಯ ಬೆಲೆಯೆ ಈಗ ಕೋಟಿಗಳ ಲೆಕ್ಕದಲ್ಲಿದೆ" (ಕೆಲವೆ ವರ್ಷದಲ್ಲಿ ಈ ಧನ ವರ್ಷಧಾರೆಯಾಗಲು ಅದೆಂತ ಲಾಭದಾಯಕ 'ದಂಧೆ'ಗೆ ಇಳಿದಿದ್ದೆ ಮಾರಾಯ? ಅಂತ ಸಿಬಿಐಯಾದಾರೂ ಶ್ರೀಯುತರನ್ನ ಕೊಂಚ ತಡಕಾಡಿದರೆ ಕಪ್ಪಗಿದ್ದೆ ಕೊಪ್ಪರಿಗೆ ಕದ್ದು ತಿಂದ ಕೋಟ್ಯಾಂತರ 'ರಹಸ್ಯ'ಗಳು ಹೊರಬಿದ್ದವು ಅನ್ನೋದು ಬೇರೆ ಮಾತು!) ನಾನ್ಯಾಕೆ ಹತ್ತು ಲಕ್ಷಕ್ಕೆಲ್ಲ ಆಸೆಪಡಲಿ?" ಅನ್ನುವ ಈತ ( ಈತನ ಚಿಲ್ಲರೆ ಕಾಸಿನ ಆಸೆಯ ಬಗ್ಗೆ ಪತ್ರಕರ್ತ 'ಅಗ್ನಿ'ಶ್ರೀಧರ್ ರಸವತ್ತಾಗಿ ವಿವರಿಸುತ್ತಾರೆ!) "ರೂಪಾಯಿಯೆ ಆದರೂ ಬಿಟ್ಟಿ ಸಿಕ್ಕರೆ ಯಾರಿಗೆ ಕಹಿಯಾಗುತ್ತೆ ಸ್ವಾಮಿ" ಎಂದು 'ಕೇಳಿ'ದವರ ಪ್ರಶ್ನೆಗೆ ಜಾಣ ಕಿವುಡನಂತೆ ನಟಿಸಿದ.


"ಬಳ್ಳಾರಿ ಕೆಟ್ಟು ಕೆರ ಹಿಡಿದಿತ್ತು,ಮಂಡ್ಲೂರು ಮಂಗ್ಯಾಗಳಿಂದ ಅದನ್ನು ಬಿಡಿಸಿದ ಅದರ ಪರಮೋದ್ಧಾರಕರಾದ ರೆಡ್ಡಿ ಸಹೋದರರಿಗೆ ಬೆಂಬಲಸೂಚಿಸಿ ಸೋಮಶೇಖರರೆಡ್ಡಿಯ ಪರ ಚುನಾವಣಾ ಪ್ರಚಾರಕ್ಕೆ ನಾನು ಇಳಿದಿದ್ದು ಕೇವಲ ಅವರ ಜಗದೊದ್ದಾರದ ಕೆಲಸಕ್ಕೆ ಸಲ್ಲಿಸಿದ ಕಿಂಚಿತ್ ಸೇವೆಯೆ ಹೊರತು :ಸ್ವಾರ್ಥದ ಹನಿಯೂ ಇದರಲ್ಲಿಲ್ಲ" ಎನ್ನುವ ಈ ಆಧುನಿಕ ಸತ್ಯ ಹರೀಶ್ಚಂದ್ರ ಅನಂತರದ ದಿನಗಳಲ್ಲಿ ತನ್ನ ದೊಂಬರ ವೇಷದ ಹಾಡುವ ಕಾರ್ಯಕ್ರಮವನ್ನ ಅಲ್ಲಿಯೆ ಹೇಸಿಗೆ ಹುಟ್ಟಿಸುವ ಗಣಿ ಹಣದ ಹಂಗಿನಲ್ಲಿ ನಡೆಸಿದ್ದು,ರೆಡ್ಡಿ ಒಡೆತನದ "ಜನಶ್ರೀ" ಸುದ್ದಿವಾಹಿನಿಯಲ್ಲಿ ತನ್ನ ಹರಕಲು ಗಡ್ಡದ ಹಂದಿ ಮುಸುಡಿ ಹೊತ್ತ ದಿನಕ್ಕೆರಡೆರಡು ಕಾರ್ಯಕ್ರಮಗಳನ್ನ ದುಬಾರಿ ಸಂಭಾವನೆಯೊಂದಿಗೆ ಆಗ್ರಹಿಸಿ ಗುಂಜಿಕೊಂಡಿದ್ದು.(ಆ ಬಗ್ಗೆ ರೆಡ್ಡಿತ್ರಯರಿಗೆ ಅಸಮಧಾನವಿದ್ದದ್ದು ಬಹಿರಂಗ ಗುಟ್ಟು,ಹೀಗೆ ದಿನಕ್ಕೆರಡು ಕಾರ್ಯಕ್ರಮ ಕೊಟ್ಟ ತಪ್ಪಿಗೆ ಅವರಿಂದ ಅನಂತ ಹಾಗು ಅಂಕುರ ತಾರಾಮಾರ ಉಗಿಸಿಕೊಂಡಿದ್ದರು!).ಚುನಾವಣ ಪ್ರಚಾರಕ್ಕೆ "ನಾನು ಬಳ್ಳಾರಿಗೆ ಹೋದಾಗ ರೆಡ್ಡಿಗಳಿಗೆ ಹಣಕ್ಕೆ ಬಹಳ ಬರವಿತ್ತು ಶ್ರೀರಾಮುಲು ಹಾಗು ಗ್ಯಾಂಗ್ ಬೆಳ್ಳಂಬೆಳಗ್ಯೆಯೆ ಕೈಗೆ ಸಿಕ್ಕ ಬೈಕೇರಿ ಸಿಕ್ಕು ಬಳಿಗೆ ಸಿಕ್ಕು ಬಕರಾಗಳಾಗುವ 'ಮಿತ್ರ'ರ ಬಲಿ ಹತ್ತೊ-ಇಪ್ಪತ್ತೋ ಸಾವಿರ ದೋಚಿಕೊಂಡು ಅಂದಿನ 'ರಾತ್ರಿಖರ್ಚಿಗೆ'(?) ಒಂದು ದಾರಿ ಮಾಡಿಕೊಳ್ಳುತ್ತಿದ್ದರು!" ಎಂದು ಕೇಳುವವರ ಕಿವಿಗೆ ಪಕ್ಕ ಹೂದಾನಿಯಿಡುವ ಈ ಮಹಾಶಯನಿಗೆ ಅದೆ ಹೊತ್ತಲ್ಲಿ ರೆಡ್ಡಿ 'ಕುಟೀರ' ವಾಸಿಯಾಗಿದ್ದು ಪಾಪ ಗೊತ್ತೇ ಇಲ್ಲ,ಅಥವಾ ಹೀಗೆ ಕಂಡವರನ್ನ ದೋಚಿ ರಾಮುಲು ತಂದು ಕೊಟ್ಟ ಆ ಹತ್ತಿಪ್ಪತು ಸಾವಿರ ಹಣ ಶ್ರೀಯುತರ ದಿವ್ಯದೃಷ್ಟಿಯನ್ನ ಮಂಜಾಗಿಸಿದೆ.


ಆಗಲೆ ಎರಡೆರಡು ಹೆಲಿಕ್ಯಾಪ್ಟರ್ ಹೊಂದಿದ್ದ-ಚುನಾವಣಾ ನಂತರ ಸರಕಾರ ರಚನೆಗೆ ಕಮ್ಮಿಬಿದ್ದ ಪಕ್ಷೇತರ ಶಾಸಕರಿಗೆ ಆಗಷ್ಟೆ ಫ್ರೆಶಾಗಿ ಡಾಕ್ಟರ್ ಆಗಿದ್ದ ಯೆಡ್ಡಿ ಅಮೃತಹಸ್ತದಿಂದ ಆಪರೇಶನ್ ಮಾಡಿಸಲು ಗೋಣಿಗಳಲ್ಲಿ ಗೋರಿಗೋರಿ ಗಣಿ ಬಗೆದ ಹಣ ತಂದಿದ್ದ ರೆಡ್ಡಿ ತೀರ ಹತ್ತಿಪ್ಪತು ಸಾವಿರಕ್ಕೆ ಕಂಡವರ ಬಳಿ ಕೈಚಾಚುತ್ತಿದ್ದ ಅಂತ ಈತ ನೀವು ನಂಬಬೇಕು ಅಥವಾ ನಿಮ್ಮ ಕಿವಿ ಖಾಲಿಯಾಗಿದ್ದರೂ ತಾವೆ ಅಲ್ಲೊಂದು ಹೂವಿಟ್ಟುಕೊಂಡು ಕನಿಷ್ಠ ಹಾಗೆ ನಂಬಿದಂತೆ ನಟಿಸಬೇಕು! ಇದಕ್ಕೆ ನೀವು ಮೆಡಿಕಲ್ ಚಂದ್ರುವೋ, ಗೋರೂರು ನಾಗನೂ,ಬಕೆಟ್ ಸೀನನೊ ಇಲ್ಲವೆ ಪಾಪಿ ತೀರ್ಥಹಳ್ಳಿಯೊ ಆಗಿರಲೆಬೇಕು ಅನ್ನೋ ನಿಯಮಗಳೇನೂ ಇದ್ದಂಗಿಲ್ಲ!



ಇವರ ಸಾತ್ವಿಕ ಶ್ರೀರಾಮುಲು ಕಳೆದ 'ಕೋಜಾ' ಸರ್ಕಾರದಲ್ಲಿ ಮಂತ್ರಿಯಾಗಿದ್ದಾಗಲೆ ಬಳ್ಳಾರಿ ಮಹಾನಗರಪಾಲಿಕೆಯ ಚುನಾವಣಾ ಪ್ರಚಾರದ ಹೊತ್ತಲ್ಲಿ ಕ್ರಿಕೆಟ್ ಬ್ಯಾಟು ವಿಕೆಟು ಹೊತ್ತು ತಾನೆ ಸ್ವತಃ ತನ್ನ ಕಪಿಪಡೆಯನ್ನ ಮುನ್ನಡೆಸಿ ಆಗಿನ್ನೂ ಬಿಜೆಪಿ ಬಿಟ್ಟು ಕಾಂಗ್ರೆಸ್'ಗೆ ಪಕ್ಷಾಂತರ ಮಾಡಿದ್ದ ಅನಿಲ್ ಲಾಡ್'ರ ಬಳ್ಳಾರಿ ನಿವಾಸಕ್ಕೆ ಹಾಡುಹಗಲೆ ನುಗ್ಗಿ ಎಲ್ಲವನ್ನೂ ಪುಡಿಗಟ್ಟಿದ್ದರೂ ಅದರಲ್ಲೇನೂ ತಪ್ಪುಕಾಣದ ಇವರು ಆಗ "'ಗಣಿಕಳ್ಳ' ಅನಿಲ್ ಲಾಡ್" ಎಂಬ ಉದ್ಗ್ರಂಥ ರಚನೆಯಲ್ಲಿ ತನ್ಮಯರಾಗಿದ್ದರು.ಅತ್ತ ಕಾರ್ಪೊರೇಟರ್ ಪದ್ಮಾವತಿಗೆ ಪದ್ಮನಾಭನ ಪರಮಸಾಯುಜ್ಯವನ್ನ ಹೀಗೆ ಒಂದು ಶುಭಸಂಜೆಯ ತಂಪು ಹೊತ್ತಲ್ಲಿ ಬಳ್ಳಾರಿಪೇಟೆಯ ನಟ್ಟನಡು ರಸ್ತೆಯಲ್ಲಿ ದಯಪಾಲಿಸಿದ್ದರೂ ಕೂಡ ಈಗಾಗಲೆ ನಟಿ ರೂಪಿಣಿಗೊಮ್ಮೆ ಅದೇರೀತಿ ಮುಫಾತ್ತಾಗಿ ಎಡ್ಸ್ ಅಂಟಿಸಿ ಮುಕ್ತಿ ಕರುಣಿಸಿದ್ದ ಅನುಭವವಿರುವ ಈ ಕರ'ಪತರಕರ್ತನ ಪಾಲಿಗೆ ಶ್ರೀರಾಮುಲು ಏನೂ ಅರಿಯದ ಹಸುಗೂಸು,ಪಾಪ!



ಈಗ ಸ್ವಸ್ತಿಕ್ ನಾಗರಾಜ್ ಹಾಗು ಕಾರಪುಡಿ ಮಹೇಶನ ಡೈರಿಗಳೆರಡರಲ್ಲೂ ಈ ಪುಣ್ಯಾತ್ಮನ ಹೆಸರು ಸಂಪರ್ಕ ಸಂಖ್ಯೆಯ ಸಹಿತ ವಕ್ಕರಿಸಿಕೊಂಡಿರುವ ಪರಿಣಾಮ ಕಳೆದ 'ರವಿ'ವಾರ ರಾತ್ರಿ ರೆಡ್ಡಿ ಪ್ರಕರಣದ ಹಿನ್ನೆಲೆಯಲ್ಲಿ ಸದರಿ ಸಂಪಾದಕನ ಹಾಗು ಬಾಣಭಟ್ಟನ ಮನೆಗೂ ಸಿಬಿಐ ಧಾಳಿಯಿಟ್ಟಿದ್ದ ಪುಕಾರು ಬೆಂಗಳೂರಿನ ಪತ್ರಕರ್ತರ ವಲಯದಲ್ಲಿ ಹಬ್ಬಿತ್ತು.ಆದರೆ ಅದು ಸುಳ್ಳು ಅನ್ನುವುದು ತತ್ಕಾಲಕ್ಕೆ ಆತನಿಗೆ ಸಮಾಧಾನವನ್ನೇನೊ ತಂದಿರಬಹುದು.ಆದರೆ ಸದ್ಯ ಓಎಂಸಿ ಹಾಗು ಅಸೋಸಿಯೇಟೆಡ್ ಮೈನಿಂಗ್ ಸಂಸ್ಥೆಯ ಜಂಟಿ ಲೆಕ್ಖ ಪರಿಶೋಧಕಿಯಾಗಿದ್ದ ರೇಣುಕಾ ಜಿ ಆಚಾರ್ಯರ ಅಕಾಲಿಕ ನಾಪತ್ತೆ ಪ್ರಕರಣದ ಬೆನ್ನುಹತ್ತಿರುವ ಸಿಬಿಐ (ಒಂದೊಮ್ಮೆ ಆಕೆ ಸೆರೆಸಿಕ್ಕರೆ ಇನ್ನಷ್ಟು ಅಮೂಲ್ಯ ಮಾಹಿತಿ ಹೊರಬಂದು ರೆಡ್ಡಿ ಮತ್ತವನ ಪಟಾಲಂ ಖಾಯಂ ಜೈಲೂಟಕ್ಕೆ ಒಗ್ಗಿಕೊಳ್ಳಬೇಕಾಗುತ್ತದೆ ಎನ್ನುವ ಆತಂಕದ ಕಾರಣ ಆಕೆಯನ್ನ ದುಬೈಗೆ ಸಾಗಹಾಕಲಾಗಿದೆ,ಇಲ್ಲ ಇಂಡೋನೇಷ್ಯಾದಲ್ಲಿ ಆಕೆ ಇದ್ದಾಳೆ ಎಂಬ ಅಂತೆಕಂತೆಗಳ ನಡುವೆ ಪುರಾತನ ಪಾತಕಿಯೂ,ಸದರಿ ಸಂಪಾದಕರಿಂದ ಸಂಭಾವಿತನೆಂಬ 'ಪ್ರಮಾಣಪತ್ರ'ವನ್ನು ಕಾಸು ಕೊಟ್ಟು 'ಖಾಸ್'ಆಗಿ ಕೊಂಡವನೂ ಆದ ಶ್ರೀರಾಮುಲುವೆ ಆಕೆಯ 'ಕಥೆಯನ್ನ ಶಾಶ್ವತವಾಗಿ ಮುಗಿಸಿ' ಇನ್ನಿಲ್ಲವಾಗಿಸಿರುವ ಸಾಧ್ಯತೆಗಳ ಬಗ್ಗೆಯೂ ಸಿಬಿಐಗೆ ದಟ್ಟ ಗುಮಾನಿಯಿದೆ!).


ಈ ತನಿಖೆಯ ಜೊತೆಗೆ ಬಳ್ಳಾರಿ ಅಕ್ರಮದ ಫಲಾನುಭವಿಗಳನ್ನ ಅವರು ಮುಕ್ಕಿದ ಹಣದ ಮೊತ್ತದ ಮೌಲ್ಯಾನುಸಾರ ಮೇಲಿನಿಂದ ಕೆಳಕ್ಕೆ ಆದ್ಯತೆಯ ಅನುಸಾರ ಹಿಡಿಹಿಡಿದು ವಿಚಾರಿಸುತ್ತಿರುವ ಶುಭ ಸಂಧರ್ಭದಲ್ಲಿ ಈ ಗಾರ್ಧಭಗಳ ಮೇಲೂ ಐಪಿಸಿ ಹಾಗು ಸಿಅರ್'ಪಿಸಿಯ ಕೋಡ್ 511ರ ಅನುಸಾರ (ಸದರಿ ಪಿನಲ್'ಕೋಡ್ ಕದ್ದ ಮಾಲನ್ನ ಕೊಂಡ ಅಥವಾ ಅದರಲ್ಲಿ ಪಾಲುತಿಂದವರನ್ನೂ ಕಳ್ಳರೆಂದೆ ಪರಿ'ಗಣಿ'ಸಿ ಸೂಕ್ತ ದಂಡ ಸಹಿತ ಸೆರೆವಾಸದ ಸವಿಯನ್ನೂ ಅನುಭವಿಸುವ ಸದಾವಕಾಶ ಕಲ್ಪಿಸಿಕೊಡುತ್ತದೆ!) ಸದ್ಯದಲ್ಲೆ ಮುಗಿಬೀಳುವ ಸಂದರ್ಭವೂ ಇಲ್ಲದಿಲ್ಲ.ಹೀಗಾಗಿಯೆ ರೆಡ್ಡಿ ಒಳಗೆ ಹೋದ ನಂತರ ಇಲ್ಲಿಯವರೆಗೆ ಆತನಿಗೂ-ರಾಮುಲುವಿಗೂ ಹೊಡೆಯುತ್ತಿದ್ದ ಭೋಪರಾಕಿಗೆ ಪೂರ್ತ ವಿರುದ್ಧವಾಗಿ ಈಗ ಹೊಸತಾಗಿ ಪುಂಗಿಯೂದುತ್ತಿರುವ, 'ಕಪ್ಪ'ತಿಂದು ಕಾರುತ್ತಿರುವ ಎಲ್ಲಾ ಪತರಕರ್ತ ಪಾತಕಿಗಳನ್ನೂ ಆದಷ್ಟು ಬೇಗ 'ಒಳಗೆ' ಹಾಕಿ ಸರಕಾರಿ ಅತಿಥಿಗಳಾಗಿಸೋದು ನಾಡಿನ ಹಿತದೃಷ್ಟಿಯಿಂದ ಕ್ಷೇಮ. ಈ ಒಳ್ಳೆಯ ಕಾಲ ಶೀಘ್ರ ಒದಗಿ ಬಂದು, ಹಗಲು ದರೋಡೆ ಮಾಡಿಯೂ ಹೆಗಲು ಕೊಡವಿಕೊಂಡು ಓಡಾಡುವ ಬಾಣ ಭಟ್ಟ ,'ತ್ಯಾಗ'ಜೀವಿ,ಸಂಜಯ್ ಸರ್ ಇವರೆಲ್ಲರೊಂದಿಗೆ ಈ ಗಡವನೂ 'ರವಿ'ಯೋದಯವನ್ನು ಪರಪ್ಪನ ಅಗ್ರಹಾರದಲ್ಲಿಯೆ ಕಾಣುವಂತಾದರೆ ಕನ್ನಡಿಗರು ಖಂಡಿತವಾಗಿಯೂ ನೆಮ್ಮದಿಯ ನಿಟ್ಟುಸಿರು ಬಿಟ್ಟಾರು...