10 April 2009

ಉತ್ತರ ಖಂಡಿತ ಬೇಡವೇ ಬೇಡ...

ನಿನ್ನೊಂನ್ದಿಗೆ ಪ್ರೀತಿಯೂ ಉಳಿದಿಲ್ಲ,ದ್ವೇಷವೂ ನನಗಿಲ್ಲ.ಅದಕ್ಕಾಗಿಯೇ ಉತ್ತರದ ಯಾವೊಂದು ನಿರೀಕ್ಷೆಯೂ ಇಲ್ಲದಿದ್ದ ನನ್ನ ಕಡೆಯ ಪತ್ರಕ್ಕೆ ನೀ ಬರೆದ ಉತ್ತರಕ್ಕೆ ನನ್ನ ಪ್ರತಿಕ್ರಿಯೆ ಬರೆದಿರಲಿಲ್ಲ.

ಇನ್ನು ನಿನ್ನ ಮೇಲೆ ಏಕೆ ಕೋಪ ಎನ್ನುವ ನಿನ್ನ ಪ್ರಶ್ನೆಗೆ ನನಗಿಂತ ಚನ್ನಾಗಿ ನಿನಗೆ ಉತ್ತರ ಗೊತ್ತು,ನಾನದನ್ನು ವಿವರಿಸುವ ಅಗತ್ಯ ಉಳಿದಿಲ್ಲ.ನಮ್ಮ ತಿಕ್ಕಾಟಕ್ಕೆ ಗುರುಮಹಾರಾಜರ ಮಾತಿನ ಮುಲಾಮು ಹಚ್ಚ ಬೇಡ,ಗಾಯ ತುಂಬ ಆಳವಾಗಿ ಹೋಗಿದೆ ಹಾಗು ಕೊಳೆತಿದೆ ಕೂಡ.

ನಿನಗೆ ಇಲ್ಲದಿರುವಂತೆಯೇ ನನಗೂ ನಿನ್ನ ಜರೂರತ್ತಿಲ್ಲ.ಹಾಗೆಯೇ ಬಾಳುವುದನ್ನು ರೂಢಿಸಿಕೊಳ್ಳುತ್ತಿದ್ದೇನೆ."ನನಗೆ ನಿನ್ನ ಅವಶ್ಯಕತೆ ಇದೆ" ಅನ್ನೋ ಸವಕಲು ಮಾತನ್ನ ಮತ್ತೆ ಮತ್ತೆ ಹೇಳಬೇಡ...ಅದು ಇದ್ದದ್ದೇ ಆಗಿದ್ದರೆ ನೀನು ಆ ದೇಶಕ್ಕೆ ಕಾಲಿಡುತ್ತಲೇ ಇರಲಿಲ್ಲ.ಅದೇನೇ ಇರಲಿ ನಿನ್ನ ಬಾಳು ನಿನ್ನ ಆಯ್ಕೆ.ಮರಳಿ ಮತ್ತೆ ನನ್ನ ಚಿತ್ತ ಕಲಕ ಬೇಡ.ದಯೆ ನಿನ್ನಲ್ಲೂ ಇರಲಿ,ನಿನ್ನ ಗೆಳೆಯನಾಗಿದ್ದೆ ಅಂತಲ್ಲ ಒಬ್ಬ ಮನುಷ್ಯ ಅಂತ.ಎಲ್ಲಿದ್ದರೂ ನಿನಗೆ ಒಳ್ಳೆಯದೇ ಆಗಲಿ.

No comments: