25 March 2009

ಮತ್ತೆ ಯುಗಾದಿ....

ಸೋತ ಮುಗಿಲಿಗೆ ಹನಿ ಸಾಂತ್ವಾನ...

ಅಕ್ಕರೆಯ ಜೊತೆ ಬಿರಿದ ನೆಲದ ಆಸರ/

ಹನಿದ ಬೆವರ ಒರೆಸೋ ಒಲವು,

ಇನ್ನಷ್ಟು ಸುರಿವ ಹಂಬಲ...ತುಸು ಕಾತರ//

ನೀನು ಮುಗಿಲು-

ನಾನು ನೆಲ ಇದೆಲ್ಲ ಹಳೆ ಕಥೆ/

ಮುಗಿಲು ಕರಗಿ ಸೇರಿ ನೆಲದ ಜೊತೆ,

ಅರಳಲಿ ಹೊಸತೊಂದು ಲತೆ...ಇಷ್ಟವಾಯ್ತಾ ನನ್ನ ಈ ಹೊಸ ಕವಿತೆ//

ಬೀಸುವ ಗಾಳಿಯ ಒಳ ಗುಟ್ಟು,

ಕಂಪಿಸುವ ಚಿಗುರೆಲೆಗಳ ಪಾಲು/

ಮತ್ತೆ ಬಂದ ಉಗಾದಿ ಒಂದು ನೆಪವಷ್ಟೇ,

ಸಂಭ್ರಮ ಹಂಚಿಕೊಳ್ಳಲು ಈ ನಾಲ್ಕು ಸಾಲು//

No comments: