26 June 2014

ಆರೋಗ್ಯ ಸಚಿವನೆಂಬ ಕೊಬ್ಬಿದ ಹೆಗ್ಗಣವೂ, ಇಲಿ ಪಾಲಾಗುವ ಬಡ ರೋಗಿಗಳೂ......



ಯು ಟಿ ಖಾದರನೆಂಬ ಅವಿವೇಕಿಯ ಇತ್ತೀಚಿನ ನಡೆಗಳು ನೋಡುತ್ತಿರುವ ಕನ್ನಡಿಗರ ಕಣ್ಣಲ್ಲಿ ಹೇಸಿಗೆ ಹುಟ್ಟಿಸುತ್ತಿವೆ. ಸಿರಿವಂತ ತಂದೆಯೊಬ್ಬನ ಭಂಡ ಮಗನಂತಹ ಈ ದುರಹಂಕಾರಿಯ ದುರ್ವರ್ಥನೆ, ದಿನ ಕಳೆದಂತೆ ಅಧಿಕಾರದ ಅಮಲು ಸರ್ರನೆ ತಲೆಗೇರಿ ಈತನ ಉಢಾಫೆಗಳಿಗೆ ಮೇರೆ ಇಲ್ಲದಂತಾಗುತ್ತಿದೆ. ಪೊಗದಸ್ತಾಗಿ ಕೊಬ್ಬಿದ ಊರ ಹಂದಿ ಗಾತ್ರದ ಈ ಮೂರು ಕಾಸಿನ ರಾಜಕಾರಣಿ ಕೇವಲ ತನ್ನ ಪಾಳೆಪಟ್ಟಿನಲ್ಲಿ ಹೀಗೆ ಹಾರಾಡಿಕೊಂಡಿದ್ದರೆ ಕ್ಯಾಕರಿಸಿ, ಸಾಧ್ಯವಾದಲ್ಲಿ ಕೊಂಚ ಕನಿಕರಿಸಿ ಸುಮ್ಮನಾಗಬಹುದಿತ್ತು. ಆದರೆ ನಮ್ಮ ನಿಮ್ಮೆಲ್ಲರ ದುರಾದೃಷ್ಟಕ್ಕೆ ಈ ದುರಹಂಕಾರಿ ರಾಜ್ಯದ ಆರೋಗ್ಯ ಸಚಿವನಾಗಿ ವಕ್ಕರಿಸಿಕೊಂಡಿದೆ ಹಾಗೂ ಇದೆ ಕಾರಣಕ್ಕೆ ರಾಜ್ಯದ ಅಷ್ಟೂ ಸರಕಾರಿ ಆಸ್ಪತ್ರೆಗಳ ಆರೋಗ್ಯ ಮಾತ್ರ ಗುಣ ಪಡಿಸಲಾಗದಷ್ಟು ಹದಗೆಟ್ಟು ಹೇಸುಗೆಟ್ಟು ಹೋಗಿದೆ.


ಹಾಗೆ ನೋಡಿದರೆ ಹಿಂದಿನ ಭಾಜಪದ ಸರಕಾರದಲ್ಲಿಯೆ "ಅಂದ್ರಾಗಿನ" ಪುಡಿ ಗಣಿ ರೌಡಿಯ ಆರೈಕೆಯಲ್ಲಿ ರಾಜ್ಯದ ಎಲ್ಲಾ ಸರಕಾರಿ ಆಸ್ಪತ್ರೆಗಳು ಈಗಿಗಿಂತ ಹೆಚ್ಚು ಸುಸ್ಥಿತಿಯಲ್ಲಿ ನಳನಳಿಸುತ್ತಿದ್ದವು. ಆದರೆ ಈ ಶನಿ ವಕ್ಕರಿಸಿಕೊಂಡದ್ದೆ ತಡ ರಾಜ್ಯದಾದ್ಯಂತ ಉತ್ತಮ ಸೇವೆ ಒದಗಿಸುತ್ತಾ ಖಾಸಗಿ ಆಸ್ಪತ್ರೆಗಳ ಲಾಬಿಗೆ ಮಗ್ಗುಲ ಮುಳ್ಳಾಗಿದ್ದ ಎಲ್ಲ ಸರಕಾರಿ ಆಸ್ಪತ್ರೆಗಳನ್ನ ವ್ಯವಸ್ಥಿತವಾಗಿ ಮುಗಿಸಿ ಕಂಡವರಿಗೆ ಕಾಸು ಸಂಪಾದನೆಯ ದಾರಿ ತೋರಿಸುವ ಸತ್ಕಾರ್ಯ ಆರಂಭವಾಗಿ ಹೋಯಿತು. ಆರಂಭದಲ್ಲಿ ತಾನು ಬಹಳ ದಕ್ಷ ಎಂದು ತೋರಿಸಿಕೊಳ್ಳಲು ಅಲ್ಲೊಂದು - ಇಲ್ಲೊಂದು ಆಸ್ಪತ್ರೆಗಳಿಗೆ ಅನಿರೀಕ್ಷಿತ ದಾಳಿಯಿಟ್ಟು ಪರಿಶೀಲನೆಯ ನಾಟಕವಾಡಿದ ಈ ಕೊರಮ "ಶ್ರೀಸಾಮಾನ್ಯರ ಬಾಯಲ್ಲಿ "ಭಲೆ ಭಲೆ" ಎಂದೆನೆಸಿಕೊಂಡವ ಆಮೇಲಾಮೇಲೆ ಅಗಸರ ಕತ್ತೆಯಂತೆ ಹೇಳ ಕೇಳದೆ ನಾಪತ್ತೆಯಾದ.


ಇಲ್ಲಿಂದ ಕಾಣೆಯಾದ ಸಚಿವ ಪ್ರಾಣಿ ಅಲ್ಲಿ ತನ್ನ ಸ್ವ-ಕ್ಷೇತ್ರದ ಪಕ್ಕದ ಛರ್ಬಿ ಹೆಚ್ಚಾಗಿ ಸತ್ತ ಪುಂಡ ದನಗಳ್ಳರಿಗೆ ಲಕ್ಷಾಂತರ ರೂಪಾಯಿ ಪರಿಹಾರ ಕೊಡಿಸುವುದರಲ್ಲಿಯೂ, ಕಂಡಕಂಡ ಅಂಗಡಿಗಳ ಟೇಪು ಕತ್ತರಿಸುತ್ತಾ, ಮದುವೆ - ಮುಂಜಿಗಳಿಗೆ ಓಡಾಡುತ್ತಾ ಆಕಳಿಯ ಜೊತೆಯಲ್ಲಿಯೆ ಕಾಲ ಹಾಕುವುದರಲ್ಲಿಯೂ ಪುರುಸೊತ್ತಾಗಲಾರದಷ್ಟು ಬ್ಯುಸಿಯಾಗಿ ಹೋಯಿತು. ಹಾಗೂ ಎಡೆಯಲ್ಲಿ ಒಂಚೂರು ಸಮಯ ಸಿಕ್ಕಿದ್ದೇ ಹೌದಾದರೆ ಸಚಿವನೆಂಬ ಈ ಕೋಣಕ್ಕೆ ತನ್ನ ರಕ್ತ ಸಂಬಂಧಿಗಳ ಖಾಸಗಿ ಆಸ್ಪತ್ರೆಗಳ ಹಿತ ಕಾಯುವ ಘನಂದಾರಿ ಕಾರ್ಯಭಾರವೆ ವಿಪರೀತವಾಗಿರುತ್ತದೆ. ಹೀಗಾಗಿ ರಾಜ್ಯದ ಆಸ್ಪತ್ರೆಗಳ ಮಾತೆತ್ತಿದರೆ "ಸುಮ್ನೆ ಬೊಬ್ಬೆ ಹೊಡೆಯಬೇಡ್ರಿ!, ಅದರಿಂದ ಏನೂ ಆಗಲ್ಲ!!" ಅಂತ ಈ ಗಡವ ಕಂಡ ಕಂಡಲ್ಲಿ ಅಬ್ಬರಿಸಿ ತನ್ನನ್ನ ನಿಲ್ಲಿಸಿ ಕೇಳಿದವರ ಮೇಲೆಯೆ ಬೊಬ್ಬಿರಿಯುವುದನ್ನ ರೂಢಿ ಮಾಡಿಕೊಂಡಿದೆ.


ತಿಂಗಳಾನುಗಟ್ಟಲೆಯಿಂದ ಎಳೆ ಮಗು ಕೌಸರ್'ಬಿ ವೈದ್ಯಕೀಯ ನಿರ್ಲಕ್ಷ್ಯದಿಂದ ಇನ್ನೂ ತೀವೃ ನಿಗಾ ಘಟಕದಲ್ಲಿ ಜೀವಚ್ಛವವಾಗಿ ಒದ್ದಾಡುತ್ತಿದ್ದರೆ ಅದನ್ನ ಕಾಣುವ ಕಣ್ಣಿಲ್ಲದ ಈ ಹಡಬೆ ಸಚಿವ, "ತನ್ನ ಇಲಾಖೆಯ ಆಕ್ಷೇಪ ಏನಾದರೂ ಇದೆಯೆ?" ಎನ್ನುವ ಟಿಪ್ಪಣಿ ಹೊತ್ತು ಬಂದ ಭಿಕ್ಷೆಗೆ ನಿಂತ ಜ್ಣಾನಪಿತ್ಥ ವಿಕಾರಿ ಸಾಹಿತಿಯೊಬ್ಬನ ಲಕ್ಷಾಂತರ ರೂಪಾಯಿ ವೈದ್ಯಕೀಯ ವೆಚ್ಚವನ್ನ ಭರಿಸುವ ಕಡತಕ್ಕೆ ಕಣ್ಣುಮುಚ್ಚಿ ಸಹಿ ಝಡಿದು ಮುಂದಿನ ಕ್ರಮಕ್ಕಾಗಿ ಅತಿ ಶೀಘ್ರವಾಗಿ ಮರಳಿ ಮುಖ್ಯಮಂತ್ರಿಗಳ ಕಛೇರಿಗೆ ರವಾನಿಸಿ ಕೃತಾರ್ಥನಾಗುತ್ತದೆ.


ಕುಡಿದು ಓಲಾಡಿ ಮೈ ಮನಸು ಎರಡನ್ನೂ ಕೆಡಿಸಿಕೊಂಡ ಈ ಕೊರಮನ ಸಂಪುಟ ಸಹುದ್ಯೋಗಿಯೊಬ್ಬ ಸಾರಾಯಿ ಅಮಲು ಹೆಚ್ಚಾಗಿ, ತನ್ನ ಪರಮ ಅಶಿಸ್ತಿನ ಜೀವನ ಶೈಲಿಗೆ ಸ್ವಯಂ ಬಲಿಯಾಗಿ ನಿತ್ಯದಂತೆ ನೆಲಕಚ್ಚಿದರೆ ಖುದ್ದು ಮುತುವರ್ಜಿ ವಹಿಸಿ ಅವರನ್ನ ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ರವಾನಿಸಿ ಬೀಗಿದ ಈತ, ಅದೆ ತನಗೆ ವಹಿಸಿದ ಕರ್ತವ್ಯ ನಿರ್ವಹಣೆಯ ಹೊತ್ತಿನಲ್ಲಿ ಜೀವದ ಹಂಗು ತೊರೆದು ಗುಂಡಿನ ದಾಳಿಗೆ ಸಿಕ್ಕಿದ ದಕ್ಷ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆಯನ್ನ ಸುಸಜ್ಜಿತ ಪರದೇಶಿ ಆಸ್ಪತ್ರೆಗೆ ಆದಷ್ಟು ಬೇಗ ರವಾನಿಸಿ ಬದುಕಿಸಿಕೊಳ್ಳುವ ಸಕಲೆಂಟು ಸಾಧ್ಯತೆಗಳಿದ್ದರೂ ಜೋಭದ್ರನಂತೆ ಕಾಲ ಹಾಕಿ ನಾಡೆಲ್ಲ ಕಾತರದಿಂದ ಬೇಡುತ್ತಿದ್ದರೂ ಆ ಅಮೂಲ್ಯ ಜೀವವನ್ನ ಉಳಿಸಿಕೊಳ್ಳಲಾಗದೆ ಹೋದ. ಅಂದಹಾಗೆ ರಾಜ್ಯದ ಆರೋಗ್ಯ ಸಚಿವನಾಗಿ ಈ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಬೇಕಿದ್ದದ್ದು ಇದೆ ಸಚಿವನೆಂಬ ಶೋಕಿಲಾಲ ಅನ್ನುವುದು ನಿಮ್ಮ ಗಮನಕ್ಕೆ.



ಹೋಲಿಕೆಯಲ್ಲಿ ನಿಷ್ಕೃಷ್ಟ ಸ್ಥಿತಿಯಲ್ಲಿರುವ ಬಯಲುಸೀಮೆಯ ಸರಕಾರಿ ಆಸತ್ರೆಗಳಿಗಿಂತ ರಾಜ್ಯದ ಮಲೆನಾಡು ಹಾಗೂ ಕರಾವಳಿ ಭಾಗದ ಆಸ್ಪತ್ರೆಗಳು ತಕ್ಕಮಟ್ಟಿಗೆ ಸುಸಜ್ಜಿತವಾಗಿದ್ದವು. ಆದರೆ ಈ ಮೂರೂ ಬಿಟ್ಟವನ ಅಂಧಾ ದರ್ಬಾರಿನಲ್ಲಿ ಕೊಪ್ಪಳದ ಸರಕಾರಿ ಆಸ್ಪತ್ರೆ ಎನ್ನುವ ದೊಡ್ಡಿಗೂ, ಬರು ಬರುತ್ತಾ ಕತ್ತೆಯಾದ ರಾಯರ ಕುದುರೆಯಂತಹ ಕೊಪ್ಪ ಹಾಗೂ ತೀರ್ಥಹಳ್ಳಿಗಳಲ್ಲಿರುವ ಸರಕಾರಿ ಆಸ್ಪತ್ರೆಗಳ ಅಧೋಗತಿಗೂ ಹೆಚ್ಚು ವ್ಯತ್ಯಾಸವೇನೂ ಉಳಿದಿಲ್ಲ. ಉದಾಹರಣೆಗೆ ಮೊನ್ನೆ ಮೊನ್ನೆ ಹಾಸನದ ಸರಕಾರಿ ಆಸ್ಪತ್ರೆಯಲ್ಲಿ ಇಲಿಗಳು ರಾಜಾರೋಷವಾಗಿ ಹಸುಗೂಸೊಂದರ ಕೆನ್ನೆ ಮೂಗನ್ನ ಕಿತ್ತು ತಿಂದಿವೆ. ಆ ಮುಗ್ಧ ಮಗುವಿನ ಬಡ ಪೋಷಕರ ರೋಧನವನ್ನ ಕೇಳುವ ಕಿವಿಗಳೆ ಗತಿ ಇಲ್ಲ. ಹಾಗೂ ಒತ್ತಾಯಿಸಿ ಈ ಭಂಡನನ್ನ ಹಿಡಿದು ಕೇಳಿದರೆ "ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯ ಬಾರದಿತ್ತ!" ಎನ್ನುತ್ತದೆ ಸಚಿವ ಮೃಗ. ಇನ್ನೂ ಅಡ್ಡಗಟ್ಟಿ ನ್ಯಾಯವಾಗಿ ಆತ ಮಾಡಬೇಕಾದ ಕೆಲಸ ನೆನಪಿಸಿದರೆ "ಬೊಬ್ಬೆ ಹೊಡೆಯುವುದರಿಂದ ಕೆಲಸ ಆಗ್ತದೇನ್ರಿ?!" ಅಂತ ಉಢಾಫೆಯಿಂದ ಅಬ್ಬರಿಸುತ್ತದೆ ಈ ಹೆಗ್ಗಣ.

ಆಷ್ಟಕ್ಕೂ ಜನಸೇವಕನಾಗಿ ಸಚಿವ ಹುದ್ದೆಗೆ ಏರಿರುವ ಈ ದಪ್ಪ ಚರ್ಮದವನ ಆದ್ಯತೆಗಳಾದರೂ ಏನು?  ಇಂತಹ "ಅಯೋಗ್ಯ ಸಚಿವ"ನೆಂಬ ಹೆಗ್ಗಣಗಳನ್ನ ಬೇಲಿ ಕಾಯುವುದಕ್ಕೆ ಬಿಟ್ಟಿರುವಾಗ ಯಕಶ್ಚಿತ್ ಇಲಿಗಳು ಆಟಾಟೋಪಕ್ಕೆ ಇಳಿಯುವುದರಲ್ಲಿ ಆಶ್ಚರ್ಯವಾದರೂ ಏನಿದೆ?

No comments: