31 January 2009

ನೆನಪ ಜಾತ್ರೆ...

ಮಿಡಿದ ಕಂಬನಿಗೆ ಪಶ್ಚಾತಾಪವಿಲ್ಲ,

ಮುಳ್ಳ ಮೊನೆಯಲ್ಲೇ ಇರಿದವರ ಬಗ್ಗೆ ನಂಜೇನಿಲ್ಲ/

ತಟ್ಟಿದ್ದು ಬೆನ್ನನ್ನೂ ಇಲ್ಲ ತಲೆಯನ್ನೂ...ಅದೆಲ್ಲ ಗೌಣ,

ಬೆಳೆಯೋ ಛಲ ಮೂಡಿಸಿದ ಎಲ್ಲರಿಗೂ ಕೃತಜ್ನ್ಯತೆಯ ಮುಗುಳ್ನಗೆ ಜೊತೆಗೆರಡು ಕ್ಷಣ ಮೌನ//

ಸವೆದರೂ ಸವಿಯಾಗಿಯೇ ಉಳಿಯೋದು,

ನೆನಪು ಮಾತ್ರ/

ಅಳಿಸಲಾಗದಂತೆ ಮನದ ಭಿತ್ತಿ ಮೇಲೆ ಮೂಡಿ ಕಾಡೋದು.... ಬರೇ ಅದರ ಮಾರ್ದವ ಚಿತ್ತಾರ//

No comments: