18 February 2009

ಒಲವು ವೇಳಾಪಟ್ಟಿಯಲ್ಲ...

ಭಾವದ ನಡು ಕಡಲಲ್ಲಿ,

ದಿಕ್ಕೆಟ್ಟು ದೆಸೆ ತಪ್ಪಿದ ಅನಾಥ ದೋಣಿ/

ಎಲ್ಲರಿಗೆ ನಾ ಬೇಡವಾಗಿದ್ದರೂ,

ನನಗೆಲ್ಲರೂ ಬೇಕೇಬೇಕು....ಒಲವ ಮಂಜಿನಹನಿಯಲ್ಲಿ ತೋಯಿಸಲು//

ಪಿಸು ಮಾತಲೇ ಮನೆ ಕಟ್ಟಲ?

ನಸುನಗುವಲ್ಲೇ ಅದ ಶೃಂಗರಿಸಲ?/

ಆ ಮನೆ ನಿನಗಿಷ್ಟವಾಗಿ ತುಸು ನಕ್ಕರೂ ಸಾಕು....

ನನ್ನ ಈ ಕನಸು ಧನ್ಯ//

ನಾಳೆ ಬರಲಿರುವ ದಾರಿ ಒಂದು ಕನಸು,

ಕಳೆದು ಹೋಗಿರೋ ನೆನ್ನೆಗಳಷ್ಟೇ ಸತ್ಯ ಹಾಗು ಬಾಳಿನ ಸೊಗಸು/

ನೆನಪಿನ ಕೊಂಬೆಗೆ ಕಟ್ಟಿದ ಉಯ್ಯಾಲೆ ನನ್ನ ಮನಸು,

ಅದ್ರ ಮೇಲೆ ತೂಗೋದು ಕೇವಲ ನೀನು....ನಿನ್ನ ಮನಸು//

ಮನ ಮುದಗೊಂಡಾಗ ನಗಬೇಕು,

ದುಃಖಒತ್ತರಿಸಿ ಬಂದಾಗ ಅಳಬೇಕು/

ಭಾವನೆಗಳಿಗೂ ವೇಳಾಪಟ್ಟಿ ಹಾಕೋ ಹರಕತ್ತು ಏಕೆ?

ಪ್ರೇಮ ನಿವೇದನೆಗೂ ಪ್ರತ್ಯೇಕ ದಿನದ ಹಂಗಾದರೂ ಏಕೆ?//

ಆದರೂ....ನಿಮ್ಮ ಪ್ರೀತಿ ನಿಮ್ಮ ಕೈಸೇರಲಿ

No comments: