20 October 2015

ವಲಿ ( ಭಾಗ - ೧೧.)








ಅದೇನೆ ಇದ್ದರೂ ಸಹ ಸಮುದಾಯದೊಳಗೆ ಮುಂದುವರೆದ ವಿರೋಧದ ನಡುವೆಯೂ ಹಲವಾರು ಯಹೂದಿಗಳು ಮಹಮದನ ನೂತನ ಧರ್ಮಕ್ಕೆ ಮತಾಂತರಗೊಂಡರು. ಅವರಲ್ಲಿ ಕೈನುಜಾ ಬುಡಕಟ್ಟಿನ ಯಹೂದಿ ಅಬು ಬಿನ್ ಅಬ್ದುಲ್ಲಾ ಪ್ರಮುಖನಾಗಿದ್ದ. ಮಹಮದನ ಬಳಿ ಬಂದ ಆತ ತನ್ನನ್ನ ನೂತನ ಮತಕ್ಕೆ ಸೇರಿಸಿಕೊಳ್ಳುವ ಮುನ್ನ ಸದ್ಯದ ತನ್ನ ಯೋಗ್ಯತೆಯನ್ನ ತನ್ನ ಜನರಿಂದ ಕೇಳಿ ಅರಿತುಕೊಳ್ಳಬೇಕೆಂದು ವಿನಂತಿಸಿದ. ಆತನ ಕೋರಿಕೆಯನ್ನ ನೆರವೇರಿಸಲಾಯಿತು. ಅಬ್ದುಲ್ಲಾನ ಬಗ್ಗೆ ಅವರಿವರಲ್ಲಿ ವಿಚಾರಿಸಿದಾಗ ಅತ ಅತ್ಯಂತ ಯೋಗ್ಯ, ಸಂಭಾವಿತ ಹಾಗೂ ಸುಸಂಸ್ಕೃತ ವ್ಯಕ್ತಿ ಅನ್ನುವುದು ಪತ್ತೆಯಾಯಿತು. ಹೀಗಾಗಿ ಮಹಮದ್ ಅತ್ಯಂತ ಸಂತೋಷದಿಂದಲೆ ಅವನನ್ನ ಮತಾಂತರಿಸಿದನಲ್ಲದೆ "ಈಗಾಗಲೆ ಅಬ್ದುಲ್ಲಾ ಸ್ವರ್ಗಾರೋಹಣ ಸಹ ಮಾಡಿ ಆಗಿದೆ!" ಎಂದು ಬಹಿರಂಗವಾಗಿ ಹಾಡಿ ಹೊಗಳಿದ. ಅಬ್ದುಲ್ಲಾನ ಹೊರತು ಇಂತಹ ಮೆಚ್ಚುಗೆಯ ಆಶಿರ್ವಾದಗಳನ್ನ ಆತ ಇನ್ಯಾರಿಗೂ ನೀಡಿರಲಿಲ್ಲ ಎಂದು ಇತಿಹಾಸಕಾರರು ಹೇಳುತ್ತಾರೆ. ಮಹಮದ್ ಆರಂಭದಲ್ಲಿ ಯಹೂದಿಗಳ ರೂಢಿ, ಕಟ್ಟಳೆ ಹಾಗೂ ಆಚರಣೆಯ ವಿಧಿ ವಿಧಾನಗಳನ್ನ ತನ್ನ ನೂತನ ಧರ್ಮದಲ್ಲಿಯೂ ಅಳವಡಿಸಿಕೊಂಡ. ಇದು ಆಗ ಅಲ್ಲಿನ ಸಮಾಜದಲ್ಲಿ ಬಹುಸಂಖ್ಯಾತರೂ ಹಾಗೂ ಬಲಿಷ್ಠರೂ ಆಗಿದ್ದ ಯಹೂದಿಗಳನ್ನ ಮೆಚ್ಚಿಸುವ ಮಾರ್ಗವಾಗಿತ್ತು. ಕಾಲ ಕಳೆದು ತಾನು ಬಲಿಷ್ಠ ಹಾಗೂ ತಮ್ಮವರು ಬಹುಸಂಖ್ಯಾತರಾದ ನಂತರ ಇಂತಹ ಅನುಕರಣೆಗಳನ್ನೆಲ್ಲ ಮುಲಾಜಿಲ್ಲದೆ ಕಿತ್ತೆಸೆದು ತನ್ನ ನಿಜರೂಪವನ್ನೂ ಸಹ ತೋರಿಸಿ ಅವರೆಲ್ಲರನ್ನೂ ಕಂಗಾಲು ಮಾಡಿದ್ದೂ ಇದೆ. ಅದೇನೆ ಇದ್ದರೂ ಸಹ ಆರಂಭದಲ್ಲಿ ಇದರೊಂದಿಗೆ ಯಹೂದಿಗಳ ಸ್ನೇಹ ಸಂಪಾದನೆಗೆ ಅವರೊಂದಿಗೆ ಕೆಲ ಒಳ ಒಪ್ಪಂದಗಳನ್ನೂ ಸಹ ಮಾಡಿಕೊಂಡ.


ಈ ಒಪ್ಪಂದದ ಪ್ರಕಾರ ಯಹೂದಿಗಳು ತಮ್ಮ ಮತದ ಅಖಂಡತೆಯನ್ನ ಕಾಪಾಡಿಕೊಳ್ಳಬಹುದಿತ್ತು. ಮುಸ್ಲೀಮರೊಂದಿಗೆ ಸಮರಸ್ಯದಿಂದ ಬಾಳುತ್ತಾ ಪರಸ್ಪರ ಎಂದೂ ಕಚ್ಚಾಡಿಕೊಳ್ಳದೆ ಸ್ನೇಹ ಭಾವದಿಂದ ಇದ್ದು ಸಮಾನ ವೈರಿಗಳೊಂದಿಗೆ ಮಾತ್ರ ಒಂದಾಗಿ ಸೇರಿ ಹೋರಾಡಿ ಹಿಮ್ಮೆಟ್ಟಿಸಬೇಕಿತ್ತು. ಯಾರಾದರೂ ಶತ್ರುಗಳು ಇಬ್ಬರ ಪೈಕಿ ಒಬ್ಬರ ಮೇಲೆ ಯುದ್ಧ ಸಾರಿದರೆ ಇನ್ನೊಂದು ಸಮುದಾಯ ಅವರ ನೆರವಿಗೆ ಶರತ್ತಿಲ್ಲದೆ ಧಾವಿಸಬೇಕಿತ್ತು. ಇತ್ತ ಯಹೂದಿಗಳು ತಮ್ಮ ಪವಿತ್ರಗ್ರಂಥದಲ್ಲಿ ಸಾರಲ್ಪಟ್ಟ ಹಾಗೆ ತಮ್ಮ ಧರ್ಮದ ಉದ್ಧಾರಕ್ಕಾಗಿ ಭವಿಷ್ಯದಲ್ಲಿ ಸಂತನಂತಹ ವ್ಯಕ್ತಿಯೊಬ್ಬ ಮತ್ತೆ ಹುಟ್ಟಿ ಬರುತ್ತಾನೆ ಎಂದು ಬಲವಾಗಿ ನಂಬಿದ್ದರು. ಮಹಮದ್ ಸಹ ಅವರ ಗ್ರಂಥದ ಈ ಉದ್ಗಾರವನ್ನೆ ಉದಹರಿಸಿ ಅವರ ಧಾರ್ಮಿಕ ನಂಬಿಕೆಯ ಅನುಸಾರವೆ ಪ್ರವಾದಿಯೊಬ್ಬನ ಹುಟ್ಟು ತನ್ನಿಂದಲೆ ಆಗಿದೆ ಎಂದು ಹೇಳಲಾರಂಭಿಸಿದ್ದ. ಯಹೂದಿಗಳ ಹಾಗೂ ಕ್ರೈಸ್ತರ ದೇವಾಧಿದೇವನಾದ ಅಲ್ಲಾಹನೆ ತನ್ನನ್ನ ಈ ಭೂಮಿಗೆ ಕಳುಹಿಸಿದ್ದಾನೆ ಅನ್ನುವ ವಾದವನ್ನ ಆತ ಮಂಡಿಸಿದ. ಆದರೆ ಯಹೂದಿಗಳಿಗೆ ಇದರಲ್ಲಿ ನಂಬಿಕೆ ಹುಟ್ಟಲಿಲ್ಲ. ಅವರ ಪ್ರಕಾರ ತಮ್ಮ ಸಮುದಾಯದ ಒಳಗಿನಿಂದಲೆ ಅಂತಹ ಪ್ರವಾದಿಯೊಬ್ಬ ಹುಟ್ಟಿ ಬರಬೇಕಿತ್ತು. ಇತ್ತ ಮಹಮದನೋ ಮೂರ್ತಿ ಪೂಜಕರ, ಹೆಚ್ಚಾಗಿ ಪೌರಾತ್ಯ ಧಾರ್ಮಿಕಾಚರಣೆಗಳ ಅನುಸಾರ ಬದುಕುತ್ತಿದ್ದ ಕುಟುಂಬದಲ್ಲಿ ಹುಟ್ಟಿ ಬೆಳೆದಿದ್ದ ಅರೆ ವೈದಿಕನಾಗಿದ್ದ. ಹೀಗಾಗಿ ಈ ಅರಬ್ಬಿ ಖುರೈಷಿ ಬುಡಕಟ್ಟಿನ ಮಹಮದನ ಬುಡಬುಡಿಕೆಯನ್ನವರು ನಂಬುವ ಗೋಜಿಗೆ ಹೋಗಲಿಲ್ಲ. ಆದರೂ ಮೇಲಿಂದ ಮೇಲೆ ಆತ ಅದನ್ನೆ ಸಾರಲು ತೊಡಗಿದಾಗ ಅವರ ಸಮುದಾಯದ ಒಳಗೆ ಅಸಹನೆ ಭುಗಿಲೊಡೆಯಿತು. ಇದೆ ಮುಂದೆ ಕಲಹ, ದ್ವೇಷ, ದೊಂಬಿ, ವೈರತ್ವ ಹಾಗೂ ಕೊನೆಗಾಣದ ವೈಮನಸ್ಸಿಗೆ ಮೂಲ ಕಾರಣವಾಯ್ತು.


ಈ ನಡುವೆ ಈ ಯಹೂದಿಗಳನ್ನ ಮತಾಂತರವಾಗದೆ ಹಾಗೆ ಇರಲು ಬಿಟ್ಟರೆ ತನಗೂ, ತನ್ನ ನವ ಮತಕ್ಕೂ ಸಂಚಕಾರ ತಪ್ಪಿದ್ದಲ್ಲ ಎನ್ನುವ ಅರಿವು ಮಹಮದನಿಗಿತ್ತು. ತನ್ನ ಪ್ರವಾದಿತ್ವದ ಘೋಷಣೆಗೆ ವಿರುದ್ಧವಾಗಿ ಅವರು ವರ್ತಿಸುವುದನ್ನ ಕಾಣುವಾಗ ಆತನಿಗೆ ಮುಂಬರುವ ಅಪಾಯದ ಮುನ್ಸೂಚನೆ ದೊರಕತೊಡಗಿತು. ಯಹೂದಿಗಳ ಸಾಮುದಾಯಿಕ ಒಗ್ಗಟ್ಟು, ಮದೀನಾದ ಇನ್ನಿತರ ಬುಡಕಟ್ಟಿನವರೊಂದಿಗೆ ಅವರ ಸಮುದಾಯ ಒಂದಿದ್ದ ಬಾಂಧವ್ಯ ಮುಂದೊಮ್ಮೆ ಮಹಮದನಿಗೆ ಕಂಟಕ ಪ್ರಾಯವಾಗುವುದು ಖಚಿತವಿತ್ತು. ಹೀಗಾಗಿ ಆತ ಧಾರ್ಮಿಕತೆ ಮುಸುಕಿನೊಳಗೆ ಅವರ ವಿರುದ್ಧ ನಿಧಾನವಾಗಿ ತಾನೂ ದ್ವೇಷ ಕಾರುತ್ತಾ ಶತ್ರುತ್ವವನ್ನ ಸಾರ ತೊಡಗಿದ. ಇದರ ಲಕ್ಷಣಗಳನ್ನ ಸುರಾ ೨/೨೮೬, ೫/೪೦-೪೫ರಲ್ಲಿ ಖುರ್ಹಾನಿನಲ್ಲಿ ಸ್ಪಷ್ಟವಾಗಿ ಕಾಣಬಹುದು.


"ಅಲ್ಲಾಹ ಭೂಮಿ ಹಾಗೂ ಆಕಾಶದ ಅಧಿಪತಿ ಎನ್ನುವುದನ್ನ ನೀವು ತಿಳಿದಿಲ್ಲವೆ? ಅವನು ತಾನಿಚ್ಛಿಸಿದವನನ್ನು ಶಿಕ್ಷಿಸುತ್ತಾನೆ! ಮತ್ತು ತನಗಿಷ್ಟ ಬಂದವರನ್ನು ಕ್ಷಮಿಸುತ್ತಾನೆ!! ಅವನಿಗೆ ಈ ಎಲ್ಲಾ ಅಧಿಕಾರಗಳೂ ಇವೆ?!"

"ಓ ಸಂದೇಶವಾಹಕರೆ! ಸತ್ಯ ನಿಷೇಧದ ಮಾರ್ಗದಲ್ಲಿ ಭಾರಿ ಶ್ರಮ ಪಡುತ್ತಿರುವವರು ನಿಮ್ಮನ್ನ ವ್ಯಾಕುಲಗೊಳಿಸದಿರಲಿ. ಅವರಲ್ಲಿ ನಾವು ವಿಶ್ವಾಸವಿಟ್ಟೆವು ಎನ್ನುವ ಬಾಯಿ ಮಾತನ್ನ ಅದೇನೆ ಹೇಳಿಕೊಂಡರೂ ಹೃದಯದಲ್ಲಿ ವಿಶ್ವಾಸವಿರಿಸದ ಜನರಾಗಲಿ ಅಥವಾ ಅಸತ್ಯ ಮಾತುಗಳನ್ನ ಕೇಳುವ ಹವ್ಯಾಸವುಳ್ಳ ಯಹೂದಿಯರಾಗಲಿ, ಅವರು ನಿಮ್ಮ ಬಳಿಗೆ ಎಂದೂ ಬಾರದಿರುವ ಇತರ ಜನಾಂಗದವರಿಗಾಗಿ ನಿಮ್ಮ ಮಾತುಗಳಿಗೆ ಕಿವಿಗೊಡುತ್ತಾರೆ. ದೇವ ಗ್ರಂಥಗಳ ಪದಗಳ ಇಂಗಿತವು ನಿಶ್ಚಿತವಾಗಿದ್ದರೂ ಅವುಗಳನ್ನ ಅವುಗಳ ನಿಜಾರ್ಥದಿಂದ ದೂರ ಸರಿಸಿ ಬಿಡುತ್ತಾರೆ. ಮತ್ತು ಜನರೊಡನೆ ನಿಮಗೆ ಅಂತಹ ಆಜ್ಞೆ ದೊರೆತರೆ ಅದನ್ನು ಒಪ್ಪಿಕೊಳ್ಳಿರಿ. ಇಲ್ಲವಾದರೆ ಒಪ್ಪಿಕೊಳ್ಳಬೇಡಿ ಎಂದು ಯಾರನ್ನು ಅಲ್ಲಾಹನೆ ಗೊಂದಲಕ್ಕೀಡು ಮಾಡಿರುವನೋ ಅವನನ್ನು ಅಲ್ಲಾಹನ ಹಿಡಿತದಿಂದ ತಪ್ಪಿಸಲು ನೀವು ಏನನ್ನೂ ಮಾಡಲಾರಿರಿ. 'ಅಲ್ಲಾಹನ ಹಿಡಿತದಿಂದ ತಪ್ಪಿಸಿಕೊಳ್ಳಿರಿ ಇಲ್ಲವೆ ಅವನನ್ನ ಒಪ್ಪಿಕೊಳ್ಳಬೇಡಿ' ಎಂದೂ ಸಹ ಅವರು ಹೇಳುತ್ತಾರೆ. ಅಲ್ಲಾಹನು ಶುದ್ಧಗೊಳಿಸಲು ಇಚ್ಛಿಸದಿರುವುದು ಬರಿ ಇಂತವರ ಹೃದಯಗಳನ್ನೆ. ಇವರಿಗೆ ಇಹಲೋಕದಲ್ಲಿ ಅವಮಾನ ಹಾಗೂ ಪರಲೋಕದಲ್ಲಿ ಘೋರಾತಿಘೋರ ಶಿಕ್ಷೆ ಕಾದಿದೆ."



"ಇವರು ಸುಳ್ಳನ್ನು ಆಲಿಸುವವರು ಹಾಗೂ ನಿಷೇಧಿತ ಸಂಪತ್ತನ್ನ ಭಕ್ಷಿಸುವವರೂ ಆಗಿದ್ದಾರೆ. ಆದುದರಿಂದ ಅವರು ತಮ್ಮ ವ್ಯಾಜ್ಯಗಳೊಂದಿಗೆ ನಿಮ್ಮ ಮುಂದೆ ಒಂದು ವೇಳೆ ಬಂದರೆ, ಅವುಗಳನ್ನ ಇತ್ಯರ್ಥಗೊಳಿಸುವ ಅಥವಾ ನಿರಾಕರಿಸುವ ಅದಿಕಾರವನ್ನು ನಿಮಗೆ ಕೊಡಲಾಗುತ್ತದೆ. ನೀವು ನಿರಾಕರಿಸಿದರೆ ಅವರು ನಿಮಗೆ ಯಾವ ಕೇಡನ್ನೂ ಉಂಟು ಮಾಡಲಾರರು. ಅಥವಾ ನೀವು ತೀರ್ಪು ನೀಡುವುದಿದ್ದರೆ, ಅವರು ನಿಮಗೆ ಯಾವುದೆ ಕೇಡನ್ನೂ ಉಂಟು ಮಾಡುವುದಿದ್ದಲ್ಲಿ ಸರಿಯಾಗಿ ಹಾಗೂ ನ್ಯಾಯಪೂರ್ಣವಾಗಿ ನೀವಿರಬೇಕು" ( ಖುರ್ಹಾನ್ ಕನ್ನಡಾನುವಾದ.)



ಇದೆ ಸಮಯದಲ್ಲಿ ಅಂದರೆ ಕ್ರಿಸ್ತಶಕ ೬೩೩ರಲ್ಲಿಮಹಮದ್ ತನ್ನ ಸ್ವತಃ ಮತ ಪ್ರಚಾರದ ಕಾರ್ಯಗಳಲ್ಲಿ, ಅಲ್ಲಾಹನ ಆರಾಧನಾ ವಿಷಯದಲ್ಲಿ ಕೆಲವು ನವ ಸಂಪ್ರದಾಯಗಳಿಗೆ ನಾಂದಿ ಹಾಡಿದನು. ದಿನಕ್ಕೆ ಐದು ಬಾರಿ ದೇವರನ್ನ ಪ್ರಾರ್ಥಿಸುವ ಆಚರಣೆ ಆರಂಭವಾದದ್ದು ಆಗಿನಿಂದ. ವಾಸ್ತವವಾಗಿ ಇದು ಯಹೂದಿ ಪ್ರಾರ್ಥಾನಾ ಕ್ರಮದ ನಕಲಾಗಿತ್ತು. ಅವರಲ್ಲಿ ಪ್ರಚಲಿತವಿದ್ದ ಈ ಆಚಾರವನ್ನ ಈತನೂ ಯಥಾವತ್ ಬಳಸಿಕೊಂಡ. ಆದರೆ ಯಹೂದಿಗಳ ವಾರದ ಪ್ರಾರ್ಥನಾ ದಿನವಾದ ಶನಿವಾರವನ್ನ ಮಾತ್ರ ಒಪ್ಪದೆ ಅದನ್ನ ಶುಕ್ರವಾರಕ್ಕೆ ಬದಲಿಸಿಕೊಂಡ. ಆ ದಿನ ಮಸೀದಿಯಲ್ಲಿ ಮತ ಬಾಂಧವರೆಲ್ಲ ಒಟ್ಟಾಗಿ ಖಡ್ಡಾಯವಾದ ಸಭಾಪೂರ್ವಕ ಪ್ರಾರ್ಥನೆ ನಡೆಸುವುದನ್ನ ರೂಢಿಗೆ ತಂದ. ಹಾಗೆ ನೆರೆದವರಿಗೆ ತಾನೆ ಖುದ್ದಾಗಿ ಮತ ಪ್ರಚಾರವದ ಮೂಲಸ್ವರೂಪವಾಗಿ ಪ್ರವಚನವನ್ನೂ ಆರಂಭಿಸಿದ. ಪ್ರಾರ್ಥನೆಯನ್ನ ಯಹೂದಿಗಳ ಪವಿತ್ರ ನಗರವಾದ ಜುರೇಸಲಂ ಕಡೆಗೆ ಮುಖ ಮಾಡಿ ಪ್ರಾರ್ಥಿಸಲು ಕರೆ ನೀಡಿದ. ಹೀಗಾದರೂ ಯಹೂದಿಗಳ ಮನಗೆದ್ದು ಅವರನ್ನ ತನ್ನ ಮತದತ್ತ ಆಕರ್ಷಿಸುವ ಪ್ರಯತ್ನಕ್ಕೆ ಮಹಮದ್ ಇಳಿದ. ಕಾಲಾನುಕ್ರಮದಲ್ಲಿ ನವಧರ್ಮವಾದ ಇಸ್ಲಾಮಿನಲ್ಲಿ ಯಹೂದಿಗಳೂ ಸಹ ಬೆರೆತು ಒಂದಾದರೆ ನೂತನ ಧರ್ಮದ ಪ್ರವಾಧಿ ಹಾಗೂ ಧರ್ಮಾಧಿಕಾರಿಯಾಗಿ ಮೆರೆಯುವ ಉದ್ದೇಶ ಅವನಿಗೆ ಇತ್ತೆಂದು ಎಲ್ಲಾ ಇತಿಹಾಸಕಾರರೂ ಹೇಳಿದ್ದಾರೆ. ವಾಸ್ತವದಲ್ಲಿ ಸದ್ಯ ಹೀಗೆಯೆ ಆಗಿದೆ. ಅರೆಬಿಯಾದ ಯಹೂದಿಗಳೆಲ್ಲ ಮುಸಲ್ಮಾನರಾಗಿ ಪರಿವರ್ತಿತರಾಗಿದ್ದಾರೆ ಹಾಗೂ ಅವರ ಪ್ರವಾದಿಯಾಗಿ ಮಹಮದ್ ಗುರುತಿಸಲ್ಪಡುತ್ತಿದ್ದಾನೆ.


ಇತ್ತ ಯಹೂದಿಗಳಿಗೆ ತಮ್ಮ ಬಹುತೇಕ ಸಂಪ್ರದಾಯಗಳನ್ನ ಮಹಮದ್ ಆಚರಿಸಲು ಕರೆ ನೀಡಿದ್ದು ಖುಷಿ ತಂದಿತ್ತು. ಆತನ ಸ್ವಯಂ ಘೋಷಿತ ಪ್ರವಾದಿತ್ವದ ಕುರಿತ ತಮ್ಮ ಅಸಮ್ಮತಿಯ ಹೊರತಾಗಿಯೂ ಈ ಉದಾರತೆಯಿಂದ ಆತ ತಮ್ಮದೆ ಧರ್ಮಾಚರಣೆಯನ್ನ ನಕಲು ಮಾಡಿ ಆಚರಿಸುತ್ತಿರೋದು ಹಾಗೂ ಅದರ ಆಸರೆಯಲ್ಲಿಯೆ ನೂತನ ಧರ್ಮವನ್ನ ಪ್ರಚಾರ ಮಾಡುತ್ತಿರೋದು ಆತಂಕದ ಕಾರಣವಾಗಿರಲಿಲ್ಲ. ಇದೆ ಹಂತದಲ್ಲಿ ತನ್ನ ಆಚರಣೆಯ ಕರೆಗಳ ಬಗ್ಗೆ ಸ್ವತಃ ಮಹಮದನೆ ಕೊಂಚ ಸಂದೇಹಕ್ಕೆ ಈಡಾದ. ತಾನೊಂದು ವೇಳೆ ಯಹೂದಿಗಳಿಗಿಂತ ಧಾರ್ಮಿಕ ವಿಧಿಯಾಚರಣೆಗಳನ್ನ ಬೇರೆಯಾಗಿ ರೂಪಿಸದೆ ಹೋದಲ್ಲಿ ಯಹೂದಿ ಧರ್ಮದ ಪ್ರಾಬಲ್ಯ ಮತ್ತಷ್ಟು ಹೆಚ್ಚಾಗಿ ತನ್ನ ಧರ್ಮದ ಹೊಳಪು ಮಾಸಬಹುದು ಎನ್ನುವ ಶಂಕೆಗೆ ಆತ ಒಳಗಾದ. ತನ್ನ ನವ ಧರ್ಮದ ಅಳಿವು ಉಳಿವಿನ ಪ್ರಶ್ನೆ ಅವನನ್ನ ಬಾಧಿಸತೊಡಗಿತು. ಹೀಗಾಗಿ ತನ್ನ ಕೆಲವು ಆಪ್ತೇಷ್ಟರ ಜೊತೆಗೆ ಈ ಬಗ್ಗೆ ಆತ ಚರ್ಚಿಸಿದ. ಅವರ ಕಡೆಯಿಂದಲೂ ಸಹ ಪ್ರಾರ್ಥನಾ ವಿಧಿಯಾಚರಣೆಯಲ್ಲಿ ಬದಲಾವಣೆಯ ಸಲಹೆ ಮೂಡಿ ಬಂತು.


ಅವರೆಲ್ಲರ ಒತ್ತಾಯ ಹಾಗೂ ಸಮ್ಮತಿಯನ್ನ ಆಧರಿಸಿ ಕ್ರಿಸ್ತಶಕೆ ೬೨೪ರಲ್ಲಿ ಜುರೇಸಲಂ ಕಡೆಗಿನ ದಿಕ್ಕನ್ನ ಬದಲಿಸಿ ಮೆಕ್ಕಾದಲ್ಲಿರುವ ಕಾಬಾ ಗುಡಿಯ ಕಡೆಗೆ ಮುಖ ಮಾಡಿ ಪ್ರಾರ್ಥನೆಗೆ ತೊಡಗುವ ಬದಲಾವಣೆಯನ್ನ ಅಳವಡಿಸಿಕೊಳ್ಳಲಾಯಿತು. ಮೊದಲಿಗೆ ಆತ ಅನುಸರಿದ ಆ ಪ್ರಾರ್ಥನೆಯ ದಿಕ್ಕನ್ನ ಆತನ ಅನುಯಾಯಿಗಳೂ ಸಹ ಅನುಸರಿಸಲು ಆರಂಭಿಸಿದರು. ಹೀಗೆ ಆರಂಭವಾದದ್ದೆ 'ಕಿಬ್ಲಾ'ದ ದಿಕ್ಕಿನೆಡೆಗೆ ಮುಖ ಮಾಡಿ ನಮಾಝ್ ಮಾಡುವ ಪದ್ಧತಿ. ಈ ಬಗ್ಗೆ ಯಹೂದಿಗಳು ಅಸಮ್ಮತಿಯಿಂದ ಎತ್ತಿದ ಆಕ್ಷೇಪಗಳಿಗೆ 'ಇದು ಅಲ್ಲಾಹನ ಮೂಲಕ ನನಗೆ ದೊರಕಿದ ಆಜ್ಞೆ' ಎನ್ನುವ ತಿಪ್ಪೆ ಸಾರಿಸಿ ಅವರ ಅಸಹನೆ ಹಾಗೂ ನಿಂದನೆಯ ಆಕ್ರೋಶಗಳನ್ನೆಲ್ಲ ಸುರಾ ೨/೧೪೪ರ ಮೂಲಕ ಮುಲಾಜಿಲ್ಲದೆ ತಳ್ಳಿ ಹಾಕಿದ. ಇದು ನವ ಮತಾಂತರಿತ ಯಹೂದಿಗಳಿಗೆ ಆತ ಕೊಟ್ಟ ಮೊದಲ ಅಘಾತ. ಅದರೆ ಈ ನಡೆಯಿಂದ ಯಹೂದಿಗಳೇನೂ ಸುಮ್ಮನೆ ಉಳಿಯಲಿಲ್ಲ. ವಿಗ್ರಹಾರಾಧನೆಯನ್ನೆ ಒಪ್ಪದ ಮಹಮದ್ ಮೆಕ್ಕಾದ ಕಡೆಗೆ ಮುಖ ಮಾಡಿ ಪ್ರಾರ್ಥಿಸಲು ಹೇಳೋದೆ ಢಾಂಭಿಕ ನಡೆ ಎಂದು ಅವರು ಟೀಕಿಸಲಾರಂಭಿಸಿದರು. ಅದು ಅವರ ಪ್ರಕಾರ ಅದು ನೀಚ ಅಧಾರ್ಮಿಕ ನಡೆಯಾಗಿತ್ತು. ಆದರೆ ಮಹಮದ್ ಇನ್ನೂ ಮುಂದುವರೆದು ಸುರಾ ೨/ ೧೩೬-೩೯ರ ಮೂಲಕ ದೇವರು ನನಗೆ ವಿಧಿಸಿದ ಹೊಸ ಆಜ್ಞೆ ಎಂದೆ ಸಾಧಿಸಲಾರಂಭಿಸಿದ.



ಒಂದು ರಾಜಿ ಸೂತ್ರವಾಗಿ ಯಹೂದಿಗಳು ಆಚರಿಸುತ್ತಿದ್ದ ಪ್ರಾಯಶ್ಚಿತ್ತ ಶಾಸನದ ಉಪವಾಸದ ವಿಧಿಗಳನ್ನು ಮಾತ್ರ ಪವಿತ್ರ ರಂಝಾನ್ ತಿಂಗಳಿನಲ್ಲಿ ಆಚರಿಸಲು ಸುರಾ ೨/೪೩ರ ಮೂಲಕ ಖುರ್ಹಾನ್ ಸಮ್ಮತಿಯೊಂದಿಗೆ ದೇವರ ಆಜ್ಞೆಯ ಹೆಸರಿನಲ್ಲಿ ಸಮ್ಮತಿಸಿದ. ಒಂದು ತಿಂಗಳ ಅವಧಿಯಲ್ಲಿ ಕೇವಲ ಹಗಲು ಹೊತ್ತಿನಲ್ಲಿ ಮಾತ್ರ ಒಂದು ತೊಟ್ಟು ನೀರನ್ನೂ ಸಹ ಸೇವಿಸದೆ ಮಾಡುವ ನಿಟ್ಟುಪವಾಸದ ಈ ವಿಧಿ ಅತ್ಯಂತ ಕಠಿಣವಾಗಿತ್ತು. ಈ ಕಟ್ಟಳೆಯನ್ನ ಅವನೆ ಮುತುವರ್ಜಿ ವಹಿಸಿ ಜಾರಿಗೆ ತಂದ. ಆ ತಿಂಗಳು ಕಳೆದ ಬಳಿಕ ಚಂದ್ರೋದಯ ಆದ ನಂತರ ಆರ್ಥಿಕವಾಗಿ ಬಲಹೀನರಾದ ಬಡ ಜನರಿಗೆ ತಮ್ಮ ಕೈಲಾದಷ್ಟು ಖರ್ಜೂರ, ಗೋಧಿ ಅಥವಾ ದ್ರಾಕ್ಷಿಯನ್ನ ದಾನ ಮಾಡುವ ಮೂಲಕ ಸಂಭ್ರಮವನ್ನ ಎಲ್ಲರಿಗೂ ಹಂಚಿಕೊಂಡು ಸಂಭ್ರಮದಿಂದ 'ಈದ್ ಉಲ್ ಫಿತರ್' ಎನ್ನುವ ಹೊಸ ಹಬ್ಬವನ್ನ ಆಚರಿಸುವ ಹೊಸ ಕ್ರಮವನ್ನ್ನ ಮಹಮದ್ ಜಾರಿಗೆ ತಂದ. ಇಂದು ಮುಸಲ್ಮಾನ ಜಗತ್ತಿನಲ್ಲಿ ಅತ್ಯಂತ ದೊಡ್ಡ ಹಬ್ಬವಾಗಿ ಇದು ಆಚರಿಸಲ್ಪಡುತ್ತಿದೆ ಎಂದರೆ ತಪ್ಪಿಲ್ಲ.


( ಇನ್ನೂ ಇದೆ.....)

No comments: