12 October 2013

ಮರೆಯುವ ಮುನ್ನ.....


ಈ ನಿರ್ಭಾಗ್ಯ ದೇಶ ಕಂಡ ಕೆಲವೇ ಕೆಲವು ಧೀಮಂತ ನಾಯಕರಲ್ಲಿ ರಾಮಮನೋಹರ ಲೋಹಿಯಾ ಕೂಡಾ ಒಬ್ಬರು. ಗಾಂಧಿ-ನೆಹರೂ ಭಜನೆಯಲ್ಲಿ ಮುಳುಗಿ ಹೋಗಿದ್ದ ಅಂದಿನ ಕಾಂಗ್ರೆಸ್ಸಿಗರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್, ಶಹೀದ್ ಭಗತ್ ಸಿಂಗ್, ನೇತಾಜಿ ಸುಭಾಶ್ ಚಂದ್ರ ಬೋಸ್, ರಾಮಮನೋಹರ ಲೋಹಿಯಾ, ಸರ್ದಾರ್ ವಲ್ಲಭಭಾಯಿ ಪಟೇಲ್, ಲಾಲಬಹದ್ದೂರ್ ಶಾಸ್ತ್ರಿ, ಜಯಪ್ರಕಾಶ ನಾರಾಯಣ ಹಾಗೂ ಶ್ಯಾಮಪ್ರಸಾದ್ ಮುಖರ್ಜಿಯಂತಹ ಮುತ್ಸದ್ಧಿಗಳನ್ನ ಯಶಸ್ವಿಯಾಗಿ ಇತಿಹಾಸದ ಮರೆವಿಗೆ ಸರಿಸಿ ಬಿಟ್ಟರು. 

ಸಮಾಜವಾದಿ ತತ್ವದ ಯಶಸ್ವಿ ಪ್ರತಿಪಾದಕ ಲೋಹಿಯರನ್ನಂತೂ "ಹುಚ್ಚ"ನ ಪಟ್ಟಕ್ಕೇರಿಸುವಲ್ಲಿ ಇಂದಿನ ಕಾಂಗ್ರೆಸ್ಸಿಗರೂ ತಮ್ಮ ಹರಾಮಿ ಹಿರಿಯರು ಹಾಕಿದ ಹಾದಿಯಲ್ಲೆ ನಿಷ್ಠೆಯಿಂದ ಮುನ್ನಡೆಯುತ್ತಿದ್ದಾರೆ. ಹಾಗೆ ನೋಡಿದರೆ ಮೇಲಿನ ಎಲ್ಲರೂ ಪಾರ್ಶ್ವ ಪಕ್ಷಪಾತಿ ಗಾಂಧಿಯ ಆಯ್ಕೆಯಾಗಿದ್ದ ಸ್ತ್ರೀಲೋಲ-ಶೋಕೀಲಾಲ ನೆಹರೂಗಿಂತ ಸಾವಿರ ಪಾಲು ಈ ದೇಶದ ಆಡಳಿತದ ಚುಕ್ಕಾಣಿ ಹಿಡಿದು ಪ್ರಧಾನ ಮಂತ್ರಿಗಳಾಗಲು ಅರ್ಹರಾಗಿದ್ದರು. ಆದರೆ ನೆಹರು ಜೀತದ ಮುಂದೆ ದೇಶ ಬಡವಾಯ್ತು.

ಲೋಹಿಯಾ ಪ್ರಬುದ್ಧ ಚಿಂತಕ. ಭೂ ಸುಧಾರಣೆಯ ಕಾನೂನನ್ನ ಸಶಕ್ತ ಹಾಗೂ ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಒತ್ತಾಯಿಸಲು ನಮ್ಮ ಸಾಗರದ ಕಾಗೋಡು ಹಳ್ಳಿಗೂ ಬಂದಿದ್ದರು. ತಾಳಗುಪ್ಪದವರೆಗೆ ಅಂದಿನ ಮೀಟರ್'ಗೇಜ್ ರೈಲಿನಲ್ಲಿ ಬಂದು "ಕಾಗೋಡು ರೈತ ಸತ್ಯಾಗ್ರಹ"ದಲ್ಲಿ ಪಾಲ್ಗೊಂಡಿದ್ದ ಅವರನ್ನ ಅಂದಿನ ಎಸ್. ನಿಜಲಿಂಗಪ್ಪನವರ ಸರಕಾರ ಬಂಧಿಸಿ ಸರಕಾರ ರಾಜ್ಯದಿಂದ ಗಡಿಪಾರು ಮಾಡಿತ್ತು. ಆದರೂ ಆ ಕಿರು ಭೇಟಿಯ, ಅನಂತರದ ಗಡಿಪಾರಿನ ಮೂಲಕ ಕಾಗೋಡಿನ ಅನ್ಯಾಯವನ್ನ ಲೋಹಿಯಾ ರಾಷ್ಟ್ರೀಯ ಮಾಧ್ಯಮಗಳ ಗಮನಕ್ಕೆ ತರುವಲ್ಲಿ ಯಶಸ್ವಿಯಾಗಿದ್ದರು. ಅದರ ಫಲವಾಗಿಯೇ ದೇಶದಲ್ಲಿಯೆ ಮೊದಲ ಬಾರಿಗೆ ನಮ್ಮ ಕರ್ನಾಟಕದ ಬಡ ರೈತ "ಉಳುವವನೆ ಜಮೀನಿನ ಒಡೆಯ"ನಾದ. 

ಇಂದಿನ ಅವರ ಹೆಸರು ಹೇಳಿಕೊಂಡು ಸ"ಮಜಾ"ವಾದ ಮಾಡುವ ಲಲ್ಲು-ಪಂಜು-ಮುದ್ದೆ ಗೌಡರ ದೊಂಬರಾಟ ಲೋಹಿಯಾರ ಭವ್ಯ ಭಾರತದ ಕನಸನ್ನ ನುಚ್ಚುನೂರಾಗಿಸಿದೆ. ಈ ಮೂಲಕ ಕಾಂಗ್ರೆಸ್ ಮಾಡುತ್ತಿದ್ದ "ಲೋಹಿಯಾ ಚಾರಿತ್ರ್ಯ ವಧೆ"ಗೆ ಇಂದಿನ ಈ ಮಜಾವಾದಿಗಳೆ ವೇದಿಕೆ ಹಾಗೂ ಸಕಾರಣಗಳನ್ನ ಅಡಿಗಡಿಗೆ ಒದಗಿಸಿಕೊಡುತ್ತಿದ್ದಾರೆ. ಭಾರತದ ಸಂಸತ್ತಿನಲ್ಲಿ ಡಾ. ರಾಮಮನೋಹರ ಲೋಹಿಯಾರವರು ಮಾಡಿದ್ದ ದಾಖಲಾರ್ಹ ಭಾಷಣ ಆಸಕ್ತರಿಗಾಗಿ ಇಲ್ಲಿದೆ. ಅವರ ಆತ್ಮಕ್ಕೆ ಶಾಂತಿ ಮುಟ್ಟಲಿ.

http://www.youtube.com/watch?v=yqLagN7lByM

No comments: