09 February 2013

ತುಳುಗಾದೆ-೫


"ಅಡಿತತ್ತುಂಡ ಆನೆಲಾ ಮುಗುರುಂಡು" { ಹೆಜ್ಜೆ ತಪ್ಪಿದರೆ ಆನೆಯೂ ಮಗುಚಿ ಬೀಳುತ್ತದೆ. ಸರಿಯಾದ ಹಾದಿಯಲ್ಲಿ ವಿಚಕ್ಷಣತೆಯನ್ನು ಉಪಯೋಗಿಸಿ ಹೆಜ್ಜೆ ಹಾಕದಿದ್ದರೆ ಎಂತಹ ನಿಸ್ಸೀಮರೂ ಎಡವಿ ಬೀಳುತ್ತಾರೆ. ಕೇವಲ ಹುಚ್ಚು ಹುಮ್ಮಸ್ಸು ಇದ್ದರಷ್ಟೆ ಸಾಲದು, ಸರಿಯಾದ ವಿವೇಚನೆಯೂ ಪ್ರತಿಕಾರ್ಯಕ್ಕೆ ತೊಡಗುವಾಗ ಇರಬೇಕಾದದ್ದು ಅತ್ಯಗತ್ಯ. ಆದ್ದರಿಂದ ಸೂಕ್ತ ಸಮಯ-ಸಲಹೆ-ಅವಕಾಶವನ್ನ ಪರಿಗಣಿಸಿ ವಿವೇಚಿಸಿ ನಿರ್ಧರಿಸಬೇಕು ಎನ್ನುತ್ತದೆ ಈ ಗಾದೆಯ ಸಾರ.) ( ಅಡಿ ತತ್ತುಂಡ ಆನೆಲಾ ಮುಗುರುಂಡು = ಹೆಜ್ಜೆ ತಪ್ಪಿದರೆ ಆನೆಯೂ ಎಡವಿ ಬೀಳುತ್ತದೆ.)

No comments: