08 February 2013

ಸುಳ್ಳೇ ಸುಳ್ಳು, ಎಲ್ಲಾ ಸುಳ್ಳೆ ಸುಳ್ಳು....


ಮೂರು ಮುಕಾಲು ಘಂಟೆ ಬಂಡಲ್ ಕಟ್ಟುತ್ತಾ ಶೆಟ್ಟರ್ ಓಡಿಸಿದ ಹಳಿಯಿಲ್ಲದ ರೈಲು ಕಡೆಗೂ ನಿಲ್ತಲ್ಲಪ್ಪ ರಾಮ ರಾಮ!.... ಇಷ್ಟು ದಭ ದಭೆ ಕೇಳಿಯೂ ಬಡ ಕನ್ನಡಿಗರ ಕಿವಿ ಹೊಟ್ಟಿ ಹೋಗಲಿಲ್ಲವಲ್ಲ ಏನಾಶ್ಚರ್ಯ?!
ಮೂರು ಮುಕ್ಕಾಲು ಘಂಟೆ ನಾಲ್ಕು ವರ್ಷದಿಂದ ಹಾಡಿದ್ದನ್ನೆ ಹಾಡಿ, ಹೊಗಳಿಕೊಂಡರು ತಮ್ಮನ್ನೆ ತಾವು.... ತೆಗೆದಿದ್ದರೂ ನಾಡನ್ನ-ನಾಡಿನ ಮಾನವನ್ನ ಮುಲಾಜಿಲ್ಲದೆ ಲಗಾಡಿ/ ಬಜೆಟ್ ಎಂಬ ಕ"ಮಲ"ದ ಹೂವನ್ನ ಬಡ-ಎಬಡ-ನಡು ಕನ್ನಡದಲ್ಲಿ ಜೊತೆಗೊಂದಿಷ್ಟು ಇಂಗ್ಲಿಸ್.... ನಂಚಿಕೊಂಡು ಒತ್ತಾಯಿಸಿ ಸುರಿದೆ ಬಿಟ್ಟರ್, ನಮ್ಮ ಅಳಿದೂರಿಗೆ ಉಳಿದ ಗೌಡ ಶೆಟ್ಟರ್ ಬೇಡದಿದ್ದರೂ ತೋಯ್ದು ತೊಪ್ಪೆಯಾಗಿ ಕನ್ನಡಿಗರು ಹಗಲ್ಲಲ್ಲೆ ಕೆಟ್ಟರ್,,,, ಅಸಹಾಯಕವಾಗಿ ಕಣ್ ಕಣ್ ಬಿಟ್ಟರ್//

No comments: