11 February 2013

ತುಳುಗಾದೆ-೧೦


"ಆನೆ ಸಿರ್ಕಂಡ ಕಡ್ಚಿಲ್ ನೂರಂದ್" ( ದೈತ್ಯ ಪ್ರಾಣಿಯಾದ ಆನೆ ಕಡು ಹಸಿವಿಗೆ ಸಿಕ್ಕು ಹಾಕಿಕೊಂಡು ಪೇತಲವಾದರೂ, ಕರಗಿ ಕಡ್ಡಿಯಾದರೂ ಕರುವನ್ನ ಕಟ್ಟುವ ಕೊಟ್ಟಿಗೆಗೆ ಹೋಗಿ ದೀನವಾಗಿ ಕಾಲ ಹಾಕಲಾರದು. ಒಂದು ವೇಳೆ ಹಾಗೆ ಹೊಕ್ಕಲು ಹೋದರೂ ಸಹ ಅದರ ಅಗಾಧ ಗಾತ್ರ ಅಷ್ಟು ಸಣ್ಣ ಜಾಗದಲ್ಲಿ ಅದನ್ನ ತೂರಲು ಅನುವು ಮಾಡಿಕೊಡುವುದಿಲ್ಲ ಅನ್ನುವುದು ಈ ಗಾದೆಯ ವಾಚ್ಯಾರ್ಥ. ಕಂಜಿ ಎಂದರೆ ತುಳುವಿನಲ್ಲಿ ಕರು ಎಂದರ್ಥ, ಕಂಜಿ ಕಟ್ಟುವ ಇಲ್ ಕಡ್ಚಿಲ್ ಎನ್ನುತ್ತಾರೆ. ವಾಸ್ವವಾಗಿ ಧೀಮಂತಿಕೆ, ಸತ್ಯ ಸಂಧತೆ ಹಾಗೂ ಅಂತಸ್ತನ್ನ ಬಾಳ್ವೆಯಲ್ಲಿ ಕಾಪಾಡಿಕೊಂಡು ಬಂದ ವ್ಯಕ್ತಿಯೊಬ್ಬ ಸೋತ ಕ್ಷಣದಲ್ಲಿ ದೈನ್ಯನಾಗಿ ತನ್ನ ಮೊದಲ ಘನತೆ ಗಾಂಭೀರ್ಯವನ್ನ ಬಿಟ್ಟು ಅವಕಾಶವಾದಿಯಾಗಲಾರ ಅನ್ನುವ ವಿಶ್ಲೇಷಣೆ ಈ ಗಾದೆಯದ್ದು. ಕನ್ನಡದಲ್ಲಿ "ಹಸಿದರೂ ಹುಲಿ ಹುಲ್ಲು ತಿನ್ನದು" ಎನ್ನುವ ಹಾಗೂ ತಮಿಳಿನಲ್ಲಿ "ಪಸಿದಿರಂದಾಲು ಪುಲಿ ಪುಲ್ ವೆಲಿ ಸಾಪಾಡಾದು" ಎಂದು ಹೇಳುವ್ಚ ಇದಕ್ಕೆ ಸಮಾನಾರ್ಥಕ ಗಾದೆಯಿದೆ.) ಆನೆ ಸಿರ್ಕಂಡ ಕಡ್ಚಿಲ್ ನೂರಂದ್ = ಆನೆ ಬಡಕಲಾದರೂ ಕರು ಕೊಟ್ಟಿಗೆಯಲ್ಲಿ ನುಗ್ಗಲಾರದು.

No comments: