ಸಾವೊಂದೇ ಪರಿಹಾರ,
ವ್ಯಾಕುಲವಾಗಿಸಿ ಹಿಂಸೆ ಕೊಡುವ ಒಂಟಿತನಕ್ಕೆ/
ಎಲ್ಲವೂ ಹೆಸರಿಗೆ ಮಾತ್ರ ಇರುವ,
ಸಂತೃಸ್ತ ಮನಕ್ಕೆ//
ಇರುಳ ಜೋಳಿಗೆಯಿಂದ
ಹಗಲು ಪಡೆದ ಕೈಸಾಲ/
ಮೋಹಕ ಚಲುವ ಖನಿ...ಮಾರ್ದವ ಮುಂಜಾವು//
ಸಾವೊಂದೇ ಪರಿಹಾರ,
ವ್ಯಾಕುಲವಾಗಿಸಿ ಹಿಂಸೆ ಕೊಡುವ ಒಂಟಿತನಕ್ಕೆ/
ಎಲ್ಲವೂ ಹೆಸರಿಗೆ ಮಾತ್ರ ಇರುವ,
ಸಂತೃಸ್ತ ಮನಕ್ಕೆ//
ಇರುಳ ಜೋಳಿಗೆಯಿಂದ
ಹಗಲು ಪಡೆದ ಕೈಸಾಲ/
ಮೋಹಕ ಚಲುವ ಖನಿ...ಮಾರ್ದವ ಮುಂಜಾವು//
ಅವನಿಗೆ ಅವನಿಯೆಂದರೆ
ಅದೇನೋ ಒಂಥರಾ...ಹುಚ್ಚು ಪ್ರೀತಿ/
ಅದಕ್ಕೆ ಕೊಂಚ ಮಳೆಯ ಮುತ್ತ ಹನಿವ,
ಆಗಾಗ ಒತ್ತರಿಸಿ ಬಂದಾಗ ಮೀರಿ ಅದರ ಮಿತಿ//
ವಸುಂಧರೆಯ ಒಡಲಲ್ಲಿ,
ವಸಂತ ಬಿತ್ತಿದ ಒಲವಿನ ಬೀಜ/
ಕಾತರ ತುಂಬಿದ ಮೊಳಕೆಯೊಡೆದು,
ಮುಗುಳ್ನಗುತಿದೆ..ನಿನ್ನಂತೆ...ನನ್ನೊಲವಂತೆ//
ಕಳೆದು ಹೋಗಿದೆ....
ಸೂರ್ಯೋದಯ ಸೂರ್ಯಾಸ್ತಕ್ಕೂ ನಡುವೆ,
ಅರವತ್ತು ವಜ್ರ ಖಚಿತ ನಿಮಿಷಗಳನ್ನು ಕೂಡಿಸಿದ್ದ ಒಂದು ಬಂಗಾರದ ಘಂಟೆ/
ಬಹುಮಾನ ಘೋಷಿಸಿಲ್ಲ ಅದನು ಹುಡುಕಿ ಕೊಟ್ಟವರಿಗೆ,
ಏಕೆಂದರೆ ಸಿಗಲಾರದಂತೆ...
ಅದು ಕಳೆದೆ ಹೋಗಿದೆ//
-ಲಾರ ಇಂಗಲ್ಸ್ ವೈಲ್ದೆರ್
( ಭಾವಾನುವಾದ)
ನಿಲ್ಲದ ಮಳೆಹನಿಯ ಆತುರ,
ಮೋಡದ ಎದೆಯೊಳಗೆ ಅಡಗಿದ ಕಾತರ/
ಮುತ್ತಿನ ಮಣಿಗಳಾಗಿ......ಭೂರಮೆಯ ಅಂಗುಲ ಅಂಗುಲವನ್ನೂ,
ಬಿಡದೆ ಚುಮ್ಬಿಸಿವೆ
ಇಬ್ಬನಿಯಲಿ ಮೀಯುವ ತವಕ,
ಮೋಡದಲ್ಲಿ ತೇಲುವ ಕನಸೇ ಮೋಹಕ/
ಈ ಮುಂಜಾನೆಯ ಮೊಗ್ಗು ಮೂಡದಿದ್ದರೆ,
ಸವಿ ಸ್ವಪ್ನದ ಇರುಳು ಜಾರದಿದ್ದರೆ.....ಸೊಗಸಿತ್ತು//