15 June 2014

ಮೂರೂ ಬಿಟ್ಟ ಮೂರ್ತಿಗಳು ಸರಕಾರಿ ಖಜಾನೆಯಲ್ಲಿ ಮಾನಗೆಟ್ಟು ಭಿಕ್ಷೆ ಎತ್ತಿದರು.



ಕೊಟ್ಟವ ದೊಡ್ಡ ಕೋಡಂಗಿ, ಇಸ್ಕೊಂಡ ಈರಭದ್ರನೂ ಏನೂ ಕಡಿಮೆ ಇಲ್ಲ. ನಾನು ಕಟ್ಟಿದ್ದ ಆದಾಯ ತೆರಿಗೆ ಹಾಗೂ ಇನ್ನಿತರ ತೆರಿಗೆಗಳಿಂದ ಸಂಗ್ರಹವಾದ ರಾಜಸ್ವದ ಹಣದಲ್ಲಿ ಒಂದು ಪಾಲು ಡಾ ಯು ಆರ್ ಅನಂತಮೂರ್ತಿಗಳ "ರಾಜ ರೋಗ"ದ ಚಿಕಿತ್ಸೆಯ ವೆಚ್ಚಕ್ಕಾಗಿ ಹನ್ನೊಂದೂ ಮುಕ್ಕಾಲು ಲಕ್ಷ ರೂಪಾಯಿಗಳನ್ನ ನಮ್ಮ ಶೇಮ್ ಲೆಸ್ ಸಿದ್ಧನ "ಭಾಗ್ಯವಂತ"ರ ರಾಜ್ಯ ಸರಕಾರ ಸರಾಸಗಟಾಗಿ ಪಾವತಿಸಿದೆ ಎಂದು ತಿಳಿದು ಅಘಾತವಾಗಿದೆ.

ನನಗೆ ತಿಳಿದ ಮಟ್ಟಿಗೆ ಅನಂತಮೂರ್ತಿಯವರೇನೂ ನೊಂದು ಬೆಂದು ಬಳಲಿ ಹೋಗಿರುವ ಆರ್ಥಿಕವಾಗಿ ಬಲಹೀನರಾಗಿರುವ ವ್ಯಕ್ತಿ ಖಂಡಿತಾ ಅಲ್ಲ. ಅವರ ಸಂ"ಮಜಾ"ವಾದಿ ಗೆಳೆಯರೊಬ್ಬರು ಗದ್ದುಗೆ ಮೇಲೆ ತೇಲುಗಣ್ಣು ಮಾಲುಗಣ್ಣು ಮಾಡಿ ಕೂತು ಓಲಾಡುತ್ತಿದ್ದಾಗ ಅವರಿಗೆ ಬಕೆಟ್ ಬುಟ್ಟಿ ಹಾಗೂ ಇನ್ನೇನನ್ನೋ ಹಿಡಿದು ಯುಆರ್'ಅ ಲಪಟಾಯಿಸಿದ್ದ ಡಾಲರ್ಸ್ ಕಾಲೋನಿಯ ಜಾಗದ ಬೆಲೆಯೆ ಈಗ ಕೋಟ್ಯಾಂತರ ರೂಪಾಯಿಗೆ ಬೆಲೆ ಬಾಳುತ್ತದೆ. ಅಷ್ಟು ಅಗತ್ಯವಿದ್ದರೆ ಅದನ್ನ ಮಾರಿಯೋ ಇಲ್ಲ ಬ್ಯಾಂಕಿಗೆ ಅಡ ಹಾಕಿಯೋ ಅವರು ಆ ಹಣವನ್ನ ಹೊಂದಿಸಿಕೊಳ್ಳಬಹುದಿತ್ತು.

ಇನ್ನು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸಕನಾಗಿದ್ದು, ಸದ್ಯ ಇಂಗ್ಲೆಂಡಿನಲ್ಲಿ ಪೌಂಡ್ ಲೆಕ್ಖದಲ್ಲಿ ಹಣ ಸಂಪಾದಿಸುತ್ತಿರುವ ಅವರ ಸ್ಥಿತಿವಂತ ಮಗ ಶರತ್ ಇದ್ದಾನೆ ಅಪ್ಪನ ಮುತುವರ್ಜಿ ವಹಿಸಲಿಕ್ಕೆ. ಅದು ಅವನ ಜನ್ಮಸಿದ್ಧ ಕರ್ತವ್ಯ ಸಹ. ಅಷ್ಟೆಲ್ಲ ಏಕೆ ತೀರ್ಥಹಳ್ಳಿಯ ಪಿತ್ರಾರ್ಜಿತ ಆಸ್ತಿಯಲ್ಲಿಯ ಆದಾಯವೂ ಕಾಲಕಾಲಕ್ಕೆ ಅನಂತಮೂರ್ತಿಗಳ ಖಾತೆಗೆ ಜಮೆ ಆಗುತ್ತಿದೆ. ಇದನ್ನ ಅವರ ತಮ್ಮ ಡಾ ಅನಿಲ್ ನನಗೆ ಖಚಿತ ಪಡಿಸಿದ್ದಾರೆ. ಅನಂತಮೂರ್ತಿಯವರೆ ಸರಕಾರದ ವಿವಿಧ ಗೌರವ ಹುದ್ದೆಗಳಲ್ಲಿ ದುಡಿದು ಉಳಿಸಿದ್ದ ದುಡ್ಡಿನ ದೊಡ್ಡದೊಂದು ಗಂಟು ಡಾಲರ್ಸ್ ಕಾಲೋನಿಯ ಸ್ಟೇಟ್ ಬ್ಯಾಂಕ್ ಆಫ್ ತ್ರಿವೇಂದ್ರಂ ಹಾಗೂ ರಾಜಮಹಲ್ ವಿಲಾಸದ ಸಿಂಡಿಕೇಟ್ ಬ್ಯಾಂಕಿನ ಉಳಿತಾಯ ಖಾತೆಗಳಲ್ಲಿ ಹಾಗೆ ಕೊಳೆಯುತ್ತಾ ಬೆಳೆಯುತ್ತಿದ್ದು ಆಗಾಗ ಅವರ ಖಾಸಗಿ ಷೋಕಿ ಹಾಗೂ ತೆವಲಿಗೆ ಧಾರಾಳವಾಗಿ ವಿನಿಯೋಗವಾಗುತ್ತಿದೆ. ಅಗತ್ಯ ಬಿದ್ದವರಿಗೆ ಖಾತೆ ವಿವರ ನನ್ನಲ್ಲಿ ಲಭ್ಯವಿದೆ.


ಇಷ್ಟೆಲ್ಲ ಇರುವ ಸ್ಥಿತಿವಂತನಿಗೆ ಜನರ ದುಡ್ಡಿನಲ್ಲಿ ಕೈಸೋತ ಬಡಪಾಯಿಗೆ ಮಾಡುವಂತೆ ಸರಕಾರಿ ಕೃಪಾ ಕಟಾಕ್ಷದ ಕೈ ಆಸರೆಯ ಸಹಾಯ ಮಾಡುವ ಯಾವ ಅವಶ್ಯಕತೆಯೂ ನನಗಂತೂ ಕಂಡು ಬರುತ್ತಿಲ್ಲ. ಅವರು ರಾಜ್ಯದ ಬೌದ್ಧಿಕ ಚಿಂತಕರೆ ಇರಬಹುದು ಹಾಗಂತ ಕೈ ಸೋತ ಬಡಪಾಯಿ ಅಲ್ಲವೆ ಅಲ್ಲ. ನಿಸ್ಸಹಾಯಕರಿಗೆ ಮಾತ್ರ ದಾನ ಸಲ್ಲ ಬೇಕೆ ಹೊರತು ಬಲಿತ ಭಂಡರಿಗಲ್ಲ. ನಾಚಿಕೆ ಅವರಿಗಾದರೂ ಆಗಬೇಡವ ಈ ಬಡ ಜನರ ಬೆವರ ಸಂಪಾದನೆಯನ್ನ ಕೈ ಒಡ್ಡಿ ತಮ್ಮ ಬಂಕಣಕ್ಕೆ ಇಳಿಸುವಾಗ? ಹೀಗೆ ಮೂರೂ ಬಿಟ್ಟು ಕಂಡವರ ಕಾಸಿಗೆ ನಾಲಗೆ ಚಾಚುವ ಮಂದಿಗೆ ತನ್ನ ಮೂಗಿನ ನೇರಕ್ಕೆ ಜನರ ದುಡ್ಡನ್ನ ಮನ ಬಂದಂತೆ ಹಂಚಲಿಕ್ಕೆ ತೆಪರ ಸಿದ್ಧನಿಗೆ ಅಧಿಕಾರ ಕೊಟ್ಟವರ್ಯಾರು? ಇದೇನು ಸಿದ್ಧರಾಮನ ಹುಂಡಿಯಲ್ಲಿ ಅವರಪ್ಪ ಅವರಿಗೆ ಕೊಟ್ಟ ಪಾಲಿನ ಕುರಿ ಮಾರಾಟ ಮಾಡಿ ಒಟ್ಟು ಮಾಡಿದ ಹಣದಲ್ಲೊಂದು ಪಾಲ ಹಾಗೆ ಮನಸೋ ಇಚ್ಛೆ ದುರ್ವ್ಯಯ ಮಾಡಲಿಕ್ಕೆ? ಅನಂತಮೂರ್ತಿಗಳೆ ಇರಲಿ ಇಲ್ಲಾ ಬಾತ ತಲೆಯ ಇನ್ಯಾವುದೇ ಸಾಹಿತಿ ಪಿಂಡವೆ ಆಗಿರಲಿ ಕಂಡ ಕಂಡವರ ಖಾಸಗಿ ತೆವಲಿಗಾಗಿ ವ್ಯಯಿಸಲಿಕ್ಕೆ ಸರಕಾರಿ ಖಜಾನೆಯೇನೂ ಸೂರೆ ಹೋದ ಸೂಳೆ ಮನೆಯ?

No comments: