11 November 2015

ವಲಿ - ೨೬








ಮೇಲ್ನೋಟಕ್ಕೆ ಯಹೂದಿಗಳನ್ನ ಮಹಮದ್ ಅವರ ಆಚರಣೆಗಳ, ಆಹಾರ ಪದ್ಧತಿಯ, ನಡುವಳಿಕೆಗಳ ಹಾಗೂ ಆಚಾರ ವಿಚಾರಗಳ ಕಾರಣಕ್ಕೆ ವಿರೋಧಿಸಿದಂತೆ ಕಾಣಿಸಿದರೂ ಸಹ. ಖುರ್ಹಾನಿನ ಮೂಲಕ ತಾನು ಪ್ರಸಾರ ಮಾಡಿದ ಹೊಸ ಸುರಾಗಳ ಮುಖಾಂತರ ಖಂಡಿಸಿದಂತೆ ತೋರಿ ಬಂದರೂ ವಾಸ್ತವದಲ್ಲಿ ಅವರ ಅನೇಕ ಆಚರಣೆಗಳನ್ನೆ ತನ್ನ ಇಸ್ಲಾಮಿಗೂ ಅಳವಡಿಸಿಕೊಂಡು ತನ್ನ ನೂತನ ಧರ್ಮಕ್ಕೊಂದು ಪ್ರಾಚೀನತೆಯ ಥಳುಕು ಹಾಕಲು ವಿಪರೀತ ಹೆಣಗಾಡಿದ. ಇಸ್ಲಾಮಿನ ಬಹುತೇಕ ಎಲ್ಲಾ ಆಚಾರ ವಿಚಾರಗಳೂ ಸಹ ಯಹೂದಿ ಧಾರ್ಮಿಕತೆಯ ಕೆಟ್ಟ ನಕಲೆ ಆಗಿವೆ ಆನ್ನೋದು ಕುಚೋದ್ಯದ ಸಂಗತಿ. 



ಉದಾಹರಣೆಗೆ ಅವುಗಳಲ್ಲಿ ಮುಖ್ಯವಾದುವು ಹೀಗಿವೆ. ಬಡ್ಡಿ ವ್ಯಾಪಾರಕ್ಕೆ ಯಹೂದಿ ಧರ್ಮದಂತೆ ಇಸ್ಲಾಮ್ ಕೂಡಾ ನಿಷೇಢ ಹೇರಿದೆ. ಪ್ರತಿಕಾರ ವಿಧಾನ ಯಹೂದಿಗಳಂತೆ ಮುಸಲ್ಮಾನರಿಗೂ ಖುರ್ಹಾನ್ ವಿಧಿಸಿದ ಜೀವನ ಪದ್ಧತಿಯಾಗಿದೆ. ಪ್ರಾರ್ಥನೆಗೆ ಮುಂದ ವಲು ಮಾಡುವುದು ಕೂಡಾ ಯಹೂದಿಗಳ ಅನುಕರಣೆ. ನೀರಿನಿಂದ ಕೈ - ಕಾಲು ಹಾಗೂ ಮುಖ ತೊಳೆದುಕೊಂಡೆ ಪ್ರಾರ್ಥನೆಗೆ ತೆರಳಬೇಕು. ಒಂದೊಮ್ಮೆ ನೀರು ಲಭ್ಯವಿಲ್ಲದಿದ್ದರೆ ನೀರಿನ ಬದಲು ಮರಳನ್ನ ಉಪಯೋಗಿಸಿ ಶುದ್ಧಿ ಕೈಗೊಳ್ಳಬಹುದು ಅನ್ನುವುದು ಕೂಡಾ ಯಹೂದಿಗಳ ನಂಬಿಕೆಯ ನಕಲು. ಗಂಡನ ನಡುವಳಿಕೆ ಅನೈತಿಕತೆಯಿಂದ ಕೂಡಿದ್ದಲ್ಲಿ ಹೆಂಡತಿ ಶಪಿಸಬಹುದು ಎನ್ನುತ್ತದೆ ಯಹೂದಿ ಧರ್ಮ ಇಸ್ಲಾಂ ಸಹ ಅದನ್ನ ಅನುಮೋದಿಸುತ್ತದೆ. ಸರ್ ವಿಲಿಯಂ ಮ್ಯೂರ್ ತಮ್ಮ "ಲೈಫ್ ಆಫ್ ಮಹಮದ್"ದ ಪುಟ ಸಂಖ್ಯೆ ೩೩೩ರಲ್ಲಿ ಹೇಳುವಂತೆ ಗಂಡು ಹೆಣ್ಣಿನ ವಯಕ್ತಿಕ ಸಂಬಂಧದ ವಿಚಾರದಲ್ಲಿ ಯಹೂದಿಗಳ ಆಚರಣೆಯ ಅನೇಕ ನಡುವಳಿಕೆಗಳ ಸಾಮ್ಯತೆಯನ್ನ ಮಹಮದ್ ತನ್ನ ಅನುಯಾಯಿಗಳ ಸಾಮಾಜಿಕ ಜೀವನದಲ್ಲೂ ಖಡ್ಡಾಯಗೊಳಿಸಿದ. ಇದೆ ಅವಧಿಯಲ್ಲಿ ಮದುವೆ ಹಾಗೂ ವಿಚ್ಛೇದನಗಳ ಕುರಿತೂ ಸಹ ನೀತಿ ನಿಯಮಾವಳಿಗಳನ್ನ ಮಹಮದ್ ತನ್ನ ನೂತನ ಧರ್ಮ ಇಸ್ಲಾಮಿಗಾಗಿ ರೂಪಿಸಿದ ಎನ್ನುತ್ತಾರೆ ಅವರು.


ಖುರ್ಹಾನ್ ವಿಧಿಸಿದ ವೈವಾಹಿಕ ಕಟ್ಟಳೆಯ ಅನುಸಾರ ಯಾರೊಬ್ಬರೂ ಏಕಕಾಲಕ್ಕೆ ನಾಲ್ಕಕ್ಕಿಂತ ಹೆಚ್ಚು ಹೆಂಡತಿಯರನ್ನ ಅಧಿಕೃತವಾಗಿ ಹೊಂದುವಂತಿಲ್ಲ. ವಿಚ್ಛೇದನವನ್ನ ಸರಳವಾಗಿ ಕೇವಲ ಮೂರು 'ತಲ್ಲಾಖ್' ಉಚ್ಛರಿಸುವುದರ ಮೂಲಕ ಮುಸಲ್ಮಾನನೊಬ್ಬ ನೀಡಬಹುದಾಗಿದೆ. ಆದರೆ ಈ 'ತಲ್ಲಾಖ್'ಗಳ ನಡುವೆ ತಲಾ ಮೂರು ಮೂರು ತಿಂಗಳ ಅಂತರವಿರಬೇಕು. ಒಮ್ಮೆ ವಿಚ್ಚೇದನ ನೀಡಿದ ಹೆಂಗಸನ್ನು ಮತ್ತೆ ಮಾಜಿ ಪತಿಯೆ ಮದುವೆ ಆಗುವಂತಿಲ್ಲ. ಹಾಗೊಮ್ಮೆ ಆಗುವ ಇಚ್ಛೆಯಿದ್ದರೆ ಅದಕ್ಕೂ ಮುನ್ನ ಇನ್ಯಾರಾದರೂ ಆಕೆಯನ್ನ ವಿವಾಹವಾಗಿ ಆಕೆಗೆ ತಲ್ಲಾಖ್ ಕೊಟ್ಟಿರಬೇಕು. ಈ ತಲ್ಲಾಖ್'ನ ಕೃಪೆಯಿಂದ ಮುಸಲ್ಮಾನ ಗಂಡು ಜೀವನದಲ್ಲಿ ಹಲವಾರು ಬಾರಿ ವರಿಸುವ ಅವಕಾಶವನ್ನು ಹೊಂದಿರುತ್ತಾನೆ. ಹೆಂಡತಿಯರ ಸಂಖ್ಯೆ ಏಕಕಾಲಕ್ಕೆ ನಾಲ್ಕಕ್ಕೆ ಮಾತ್ರ ಸೀಮಿತವಾಗಿದ್ದರೂ ಸಹ ಮಹಮದನ ಆಜ್ಞೆಯಲ್ಲಿ ಗುಲಾಮ ಹೆಂಗಸರ ವಿಷಯದಲ್ಲಿ ಇಂತಹ ಕಟ್ಟುಪಾಡುಗಳು ಕಂಡು ಬರುವುದಿಲ್ಲ. 



ಅಸಂಖ್ಯ ಸಂಖ್ಯೆಯ ಹೆಣ್ಣು ಗುಲಾಮರನ್ನ ಹೊಂದಬಹುದಿತ್ತು. ಇರುವಷ್ಟು ಕಾಲ ಚೆನ್ನಾಗಿಯೆ ನೋಡಿಕೊಂಡು ಅನಗತ್ಯ ಎಂದೆನಿಸಿದರೆ ಅವರನ್ನ ಇನ್ನಿತರರಿಗೆ ಮಾರಾಟ ಮಾಡುವ ಹಕ್ಕು ಯಜಮಾನನಿಗೆ ಮುಕ್ತವಾಗಿತ್ತು. ಆದರೆ ಈ ಮಾರಾಟದ ಹಕ್ಕು ತನ್ನ ಯಜಮಾನನಿಂದ ಆ ಸ್ತ್ರೀ ಒಂದೊಮ್ಮೆ ಬಸಿರಾದರೆ ಮಾತ್ರ ಈ ಹಕ್ಕು ಮೊಟಕಾಗುತ್ತಿತ್ತು. ಆಗ ಮಾರಾಟ ಸಾಧ್ಯವಿರಲಿಲ್ಲ. ಅಂತಹ ಸಂದರ್ಭಗಳಲ್ಲಿ ಆತನ ಸಾವು ಮಾತ್ರ ಆಕೆಗೆ ವಿಮೋಚನೆ ನೀಡಿ ಸ್ವತಂತ್ರ್ಯವನ್ನ ಸಹಜವಾಗಿ ನೀಡುತ್ತಿತ್ತು. ವಾರ್ಷಿಕವಾದ ಪವಿತ್ರ ಹಝ್ ಯಾತ್ರೆಗೆ ತೆರಳುವ ಮುನ್ನ ಪುಣ್ಯ ಗಳಿಕೆಗೆ ಗುಲಾಮರಿಗೆ ವಿಮೋಚನೆ ನೀಡಿ ಸ್ವಾತಂತ್ರ್ಯವನ್ನು ದಯಪಾಲಿಸುವ ಧರ್ಮದ ಕಾರ್ಯವನ್ನೂ ಸಹ ಆತ ಆಗಲೆ ಜಾರಿಗೆ ತಂದ. ಹೀಗೆ ಸ್ವತಂತ್ರ್ಯಳಾದ ಸ್ತ್ರೀ ಮರಳಿ ಮದುವೆ ಆಗಲೆಬೇಕು ಅನ್ನುವ ನಿರ್ಬಂಧವೇನೂ ಇರಲಿಲ್ಲ. ಬಲವಂತದ ಮದುವೆಗಳನ್ನ ನಿಗ್ರಹಿಸಿ ವಾಸ್ತವದಲ್ಲಿ ಇಸ್ಲಾಂ ಬೋಧನೆಗಳಲ್ಲಿ ಮಹಮದ್ ಸ್ತ್ರೀಯರಿಗೆ ಉಪಕಾರಗೈದಿದ್ದಾನೆ.



ವಿಚ್ಛೇದನಗಳ ವಿಷಯದಲ್ಲಿ ಪುರುಷರಿಗೆ ಹೆಚ್ಚು ಸ್ವಾತಂತ್ರ್ಯ ನೀಡಿದ್ದು ಹೌದಾದರೂ ಅಂತಹ ಸಂದರ್ಭಗಳಲ್ಲಿ ಖಡ್ಡಾಯವಾಗಿ ವಧುವಿನಿಂದ ಪಡೆದ ಯಾವುದೆ ಸ್ವತ್ತನ್ನು ಆಕೆಗೆ ಹಿಂದಿರುಗಿಸುವಂತೆ ಕಾನೂನು ರೂಪಿಸಿ ಮಹಿಳೆಯರಿಗೂ ಆರ್ಥಿಕ ಚೈತನ್ಯವನ್ನ ನೀಡಲು ಮಹಮದ್ ಪ್ರಯತ್ನಿಸಿದ್ದಾನೆ. ಆರ್ಥಿಕವಾಗಿ ಸ್ವಾವಲಂಬಿಯಾದ ಆಕೆಗೆ ಭವಿಷ್ಯದಲ್ಲಿ ಮರು ವಿವಾಹವಾಗುವ ಆಯ್ಕೆಯನ್ನೂ ಸಹ ಉದಾರವಾಗಿ ನೀಡಿ ಆಕೆಗೂ ಅಷ್ಟಿಷ್ಟು ಸಡಿಲಿಕೆಗಳನ್ನು ಆತ ನೀಡಿರುತ್ತಾನೆ. ಖುರ್ಹಾನಿನ ಸುರಾ ಸಂಖ್ಯೆ ೩೩/೪೯-೫೩ ಹಾಗೂ ೪/೩೪ರಲ್ಲಿ ಮೇಲಿನ ಮಾತುಗಳ ಸಮರ್ಥನೆಯನ್ನು ಆಸಕ್ತರು ಓದಿ ಅರಿತುಕೊಳ್ಳಬಹುದು. 



"ಪುರುಷ ಸ್ವಾಭಾವಿಕವಾಗಿ ಸ್ತ್ರೀಯರ ಮೇಲ್ವಿಚಾರಕರಾಗಿರುತ್ತಾರೆ. ಪುರುಷರು ಅವರಿಗಾಗಿ ತಮ್ಮ ಗಳಿಕೆಯನ್ನು ವೆಚ್ಚ ಮಾಡುವುದರಿಂದ ಹಾಗೂ ಅವರು ಮಹಿಳೆಯರಿಗಿಂತ ಶ್ರೇಷ್ಠವಾಗಿರುವುದರಿಂದ ಅಲ್ಲಾಹನು ಅವರಿಗೆ ಈ ವಿಶೇಷಾಧಿಕಾರ ನೀಡಿರುತ್ತಾನೆ. ಸುಶೀಲೆಯಾದ ಸ್ತ್ರೀ ಅನುಸರಿಸಿಕೊಂದು ಹೋಗುತ್ತಾಳೆ ಹಾಗೂ ಅಲ್ಲಾಹನ ರಕ್ಷಣೆಯಲ್ಲಿದ್ದುಕೊಂಡು ಪುರುಷರ ಅನುಪಸ್ಥಿತಿಯಲ್ಲಿಯೂ ಸಹ ತಮ್ಮ ರಕ್ಷಣೆ ಮಾಡಿಕೊಳ್ಳಲು ಸಮರ್ಥರಾಗಿರುತ್ತಾರೆ. ನಿಮ್ಮ ಸ್ತ್ರೀ ಹಾಗೊಂದು ವೇಳೆ ನಿಮ್ಮ ಆಜ್ಞೆಗಳನ್ನ ಪಾಲಿಸದೆ ಹೋಗುವ ಆತಂಕ ನಿಮಗಿದ್ದರೆ ಆಗ ಅವರಿಗೆ ಎಚ್ಚರಿಸಿ ನೈತಿಕತೆಯ ಉಪದೇಶಗಳನ್ನ ನೀಡಿರಿ!"


"ಅದಕ್ಕೂ ಅವರು ಮಣಿಯದಿದ್ದರೆ ಮಲಗುವ ಪಲ್ಲಂಗದಿಂದ ಅವರನ್ನ ದೂರವಿಡಿ ಹಾಗೂ ಹೊಡೆದು ಸರಿ ಮಾಡಲು ಯತ್ನಿಸಿ! ಅದಾದ ಮೇಲೆ ಅವರು ವಿಧೇಯತೆ ಪ್ರದರ್ಶಿಸಿದರೆ ಅಕಾರಣವಾಗಿ ಅವರನ್ನ ದಂಡಿಸಲು, ಪದೆ ಪದೆ ಕೈ ಎತ್ತಲು ಕುಂಟು ನೆಪಗಳನ್ನು ಹುಡುಕಬೇಡಿ. ನಿಶ್ಚಯವಾಗಿ ಅಲ್ಲಾಹನು ಅತ್ಯುನ್ನತನೂ ಹಾಗೂ ಮಹಿಮಾನ್ವಿತನೂ ಆಗಿರುತ್ತಾನೆ" ( ಸುರಾ ೪/೩೪.)


"ಸತ್ಯ ವಿಶ್ವಾಸಿಗಳೆ ನೀವು ಸತ್ಯ ವಿಶ್ವಾಸಿನಿಯರನ್ನ ವಿವಾಹವಾಗಿ ಅವರನ್ನ ಮುಟ್ಟುವುದಕ್ಕೆ ಮುಂಚೆಯೆ ತಲ್ಲಾಖ್ ಕೊಟ್ಟು ಬಿಟ್ಟರೆ ನಿಮ್ಮ ಕಡೆಯಿಂದ ಅವರ ಮೇಲೆ ಯಾವುದೆ ಇದ್ದತ್ ಪುರ್ಣಗೊಳ್ಳಬೇಕಾಗಿರುವುದಿಲ್ಲ. ಆದ್ದರಿಂದ ಏನಾದರೂ ಮೇಲು ಸಂಭಾವನೆ ಕೊಟ್ಟು ಅವರನ್ನ ಉತ್ತಮ ರೀತಿಯಿಂದಲೆ ಬೀಳ್ಕೊಡಿರಿ." ( ೪೯.)



"ಪೈಗಂಬರರೆ ನೀವು 'ವಿವಾಹ ಧನ'ವಾಗಿ ವಧು ದಕ್ಷಿಣೆ ಕೊಟ್ಟಿರುವಂತಹ ನಿಮ್ಮ ಪತ್ನಿಯರನ್ನು ಅಲ್ಲಾಹನಿಂದ ಪ್ರಧಾನವಾಗಿರುವ ದಾಸಿಯರ ಪೈಕಿ ನಿಮ್ಮ ಸ್ವಾಧೀನತೆಗೆ ಬಂದಿರುವವರನ್ನೂ,  ನಿಮ್ಮ ಜೊತೆಗೆ ವಲಸೆ ಬಂದಿರುವ ನಿಮ್ಮ ತಂದೆಯ ಸಹೋದರ - ಸಹೋದರಿಯರ ಮತ್ತು ತಾಯಿಯ ಸಹೋದರ - ಸಹೋದರಿಯರ ಪುತ್ರಿಯರನ್ನೂ ನಾವು ನಿಮಗೆ ಧರ್ಮ ಸಮ್ಮತಗೊಳಿಸಿರುತ್ತೇವೆ! ತನ್ನನ್ನು ತಾನೇ ಪ್ರವಾದಿಗೆ 'ಹಿಬಃ ರೂಪದಲ್ಲಿ' ಕೊಡುಗೆಯಾಗಿ ಕೊಟ್ಟಿದ್ದು ಪ್ರವಾದಿಯು ಅವಳನ್ನು ತನ್ನ ನಿಕಾಹ್'ದಲ್ಲಿ ಸ್ವೀಕರಿಸಲು ಒಪ್ಪಿಕೊಂಡರೆ ಅಂತಹ ಸತ್ಯವಿಶ್ವಾಸಿನಿಯರನ್ನೂ ನಾವು ನಿಮಗಾಗಿ ಧರ್ಮ ಸಮ್ಮತಿಗೊಳಿಸಿರುತ್ತೇವೆ" ( ೫೦ )


{ ಗಮನಿಸಿ ಇಲ್ಲಿ ಕಾಫಿರರನ್ನ ಕೂಡುವುದಕ್ಕೆ ಅನುಮತಿ ಕೊಡಲಾಗಿಲ್ಲ! ಆದರೂ ರೆಹಾನಳನ್ನ ಮಹಮದ್ ತನ್ನ ಖಾಸಗಿ ವೇಶ್ಯೆಯಾಗಿ ಇರಿಸಿಕೊಂಡ! ಹಾಗೂ ಅದು ಧರ್ಮ ಸಮ್ಮತವಲ್ಲ ಅಂತ ಅವನಿಗ್ಯಾವತ್ತೂ ಅನ್ನಿಸಲೆ ಇಲ್ಲ..}


"ಈ ಅನುಮತಿಯು ನಿಮಗಾಗಿ ಮಾತ್ರವಿದೆ ಹೊರತು ಬೇರೆ ಸತ್ಯವಿಶ್ವಾಸಿಗಳಿಗೆ ಕೊಡಲಾಗಿಲ್ಲ! ನಾವು ಸಾಮಾನ್ಯ ಸತ್ಯವಿಶ್ವಾಸಿಗಳ ಮೇಲೆ ಅವರ ಪತ್ನಿಯರ ಹಾಗೂ ದಾಸಿಯರ ವಿಚಾರದಲ್ಲಿ ಯಾವ ನಿರ್ಬಂಧವನ್ನು ಹೇರಿರುತ್ತೇವೆ ಅನ್ನುವುದು ನಮಗೆ ಗೊತ್ತಿದೆ. ನಿಮ್ಮ ಮೇಲೆ ಯಾವುದೆ ಜಟಿಲತೆಯೂ ಇರದಂತಾಗಲು ನಾವು ನಿಮ್ಮನ್ನು ಈ ಮಿತಿ ಮೇರೆಗಳಿಂದ ಮುಕ್ತಗೊಳಿಸಿದ್ದೇವೆ. ಅಲ್ಲಾಹನು ಕ್ಷಮಾಶೀಲನೂ, ಕರುಣಾನಿಧಿಯೂ ಆಗಿರುತ್ತಾನೆ" ( ೫೦.)



"ನಿಮ್ಮ ಪತ್ನಿಯರ ಪೈಕಿ ನಿಮಗೆ ಇಷ್ಟವಿದ್ದವರನ್ನು ನಿಮ್ಮಿಂದ ದೂರವಿರಿಸಲಿಕ್ಕೆ, ನಿಮಗೆ ಇಷ್ಟ ಬಂದವರನ್ನು ಜೊತೆ ಇರಿಸಿಕೊಳ್ಳಲಿಕ್ಕೂ, ಒಮ್ಮೆ ದೂರವಾಗಿಸಿದ ಬಳಿಕ ನಿಮಗೆ ಮತ್ತೆ ಮನಸ್ಸಾದರೆ ಮರಳಿ ನಿಮ್ಮ ಬಳಿಗೆ ಕರೆಸಿಕೊಳ್ಳುವುದಕ್ಕೂ ನಿಮಗೆ ಅಧಿಕಾರ ಕೊಡಲಾಗುತ್ತದೆ. ಈ ವಿಷಯದಲ್ಲಿ ನಿಮಗೇನೂ ಆತಂಕವಿಲ್ಲ."



"ಇದರಿಂದ ಅವರ ಕಣ್ಣುಗಳು ತಣಿದಿರುವುದೆಂದೂ ಅವರು ಬೇಸರಿಸಲಾರರೆಂದೂ ನಿರೀಕ್ಷೆಯಿದೆ. ನೀವು ಅವರಿಗೆ ಕೊಟ್ಟಿದುದರಲ್ಲಿ ಅವರೆಲ್ಲರೂ ತೃಪ್ತಿ ಪಟ್ಟುಕೊಂಡಿರುವರು. ನಿಮ್ಮ ಹೃದಯದಲ್ಲಿ ಇರುವುದೆಲ್ಲವನ್ನೂ ಅಲ್ಲಾಹನು ಅರಿಯುತ್ತಾನೆ. ಅಲ್ಲಾಹನು ಸಹನಶೀಲನೂ ಹಾಗೂ ಸರ್ವಜ್ಞನೂ ಆಗಿರುತ್ತಾನೆ." ( ೫೧.) 



"ಇನ್ನು ಮುಂದೆ ನಿಮಗೆ ಇತರ ಸ್ತ್ರೀಯರು ಧರ್ಮಸಮ್ಮತವಾಗಿರುವುದಿಲ್ಲ. ಇತರರ ಪತ್ನಿಯರನ್ನು, ಅವರ ಸೌಂದರ್ಯ ನಿಮಗದೆಷ್ಟೆ ಮೆಚ್ಚುಗೆಯಾದರೂ ಇವರ ಸ್ಥಾನದಲ್ಲಿ ಅವರನ್ನ ತರುವ ಅನುಮತಿ ನಿಮಗಿಲ್ಲ. ಆದರೆ ದಾಸಿಯರನ್ನ ತರಬಹುದಾಗಿದೆ. ಅಲ್ಲಾಹನು ಸಕಲ ವಸ್ತುಗಳ ಮೇಲ್ವಿಚಾರಕನೂ ಆಗಿರುತ್ತಾನೆ." ( ೫೨.)


"ಕೇಳಿ ಸತ್ಯವಿಶ್ವಾಸಿಗಳೆ, ಪ್ರವಾದಿಯ ಮನೆಗೆ ಹೊತ್ತು ಗೊತ್ತಿಲ್ಲದೆ ಅವರ ಅನುಮತಿ ಇಲ್ಲದೆ ಪ್ರವೇಶಿಸಬೇಡಿರಿ. ಒಂದೊಮ್ಮೆ ಬಂದಿದ್ದರೆ ಊಟದ ಸಮಯವನ್ನು ಕಾದುಕೊಂಡು ಅಲ್ಲೆ ಉಳಿಯಬೇಡಿರಿ! ನಿಮ್ಮನ್ನು ಊಟಕ್ಕೆ ಕರೆದರೆ ಖಂಡಿತಾ ಹೋಗಿ ಆಹಾರ ಸ್ವೀಕರಿಸಿ ಆದರೆ ಊಟವಾದ ಕೂಡಲೆ ಅಲ್ಲಿಂದ ಹೊರಡಿ ಹಾಗೂ ಚದುರಿಬಿಡಿ. ವ್ಯಥಾ ಹರಟುತ್ತ ಅಲ್ಲಿಯೆ ಕೂರಕೂಡದು. ನಿಮ್ಮ ಈ ವರ್ತನೆಗಳು ಪ್ರವಾದಿಗೆ ಕಸಿವಿಸಿ ಹಾಗೂ ತೊಂದರೆಯನ್ನು ಉಂಟು ಮಾಡುತ್ತವೆ. ಅವರೇನೋ ಸಂಕೋಚದಿಂದ ಇದನ್ನೆಲ್ಲ ಹೇಳುವುದಿಲ್ಲ ಆದರೆ ಅಲ್ಲಾಹನಿಗೆ ಅಂತಹ ನಾಚಿಕೆ ಏನೂ ಇಲ್ಲ! ಪ್ರವಾದಿಯವರ ಪತ್ನಿಯರಿಂದ ನಿಮಗೇನಾದರೂ ವಸ್ತುಗಳನ್ನು ಪಡೆಯಬೇಕೆಂದಿದ್ದರೆ ಅದನ್ನ್ಹು ತೆರೆಯ ಹಿಂದಿನಿಂದ ಕೇಳಿ ಪಡೆದುಕೊಳ್ಳಿರಿ. ಇದು ನಿಮ್ಮ ಹಾಗೂ ಅವರ ಹೃದಯ ಶುದ್ಧಿಗೆ ಹೆಚ್ಚು ಸೂಕ್ತ ಹಾಗೂ ಪರಿಣಾಮಕಾರಿಯಾದ ನಡೆಯಾಗಿರುತ್ತದೆ. ಅಲ್ಲಾಹನ ಸಂದೇಶವಾಹಕರಿಗೆ ಕೀಟಲೆ ಮಾಡುವುದು ನಿಮಗೆ ಎಷ್ಟು ಮಾತ್ರಕ್ಕೂ ಶೋಭೆ ತರುವುದಿಲ್ಲ. ಅವರ ಕಾಲಾನಂತರ ಅವರ ಪತ್ನಿಯರನ್ನು ಇನ್ಯಾರಾದರೂ ವಿವಾಹವಾಗುವುದು ಸಹ ಸತ್ಯವಿಶ್ವಾಸಿಗಳಿಗೆ ಧರ್ಮ ಸಮ್ಮತವಲ್ಲ. ಇದನ್ನು ಅಲ್ಲಾಹ ಮಹಾಪಾಪ ಎಂದೆ ಪರಿಗಣಿಸುತ್ತಾನೆ!" ( ಸುರಾ ೩೩/ ೪೮ -೫೩.)


{ ಈ ಮೂಲಕ ಮಹಮದ್ ತನ್ನ ಹೆಂಡತಿಯರಿಗೆ ಅವರ ಸ್ವಾಭಾವಿಕ ಹಕ್ಕನ್ನು ನಿರಾಕರಿಸಿ ತನಗೊಂದು ಕಾನೂನು ಹಾಗೂ ಇನ್ನಿತರರಿಗೊಂದು ಕಾನೂನನ್ನು ಸಹ ಜಾರಿಗೆ ತಂದ.}


"ಆದರೆ ವಿವಾಹ ವಿಚ್ಚೇದನ ಮಾಡಿಕೊಂಡ ನಂತರ ಒಂದು ವೇಳೆ ಪತಿ ತನ್ನ ಹೆಂಡತಿಯನ್ನೆ ಮತ್ತೆ ಮದುವೆಯಾಗಲು ಬಯಸಿದರೆ, ಆ ಸ್ತ್ರೀ ಒಬ್ಬ ಪರ ಪುರುಷನೊಂದಿಗೆ ಮತ್ತೊಂದು ವಿವಾಹ ಮಾಡಿಕೊಂಡು ಅವನಿಂದಲೂ ವಿಚ್ಚೇದನ ಪಡೆದ ನಂತರವೆ ತನ್ನ ಮೊದಲ ಪತಿಗೆ ಮರಳಿ ಮಡದಿಯಾಗಬಹುದಾಗಿದೆ" ( ಸುರಾ ೨/೨೩೦.)


ಮುಸ್ಲೀಮ ವಿವಾಹದ ಕಾಯ್ದೆ ಕಾನೂನುಗಳಲ್ಲಿ ಅನೇಕ ಸುಧಾರಣೆಗಳನ್ನ ಈ ಮೂಲಕ ಮಹಮದ್ ಮಸೀದಿಗಳಲ್ಲಿ ಪ್ರಾರ್ಥನೆ ಮಾಡುವಾಗ ಯಾರೂ ಪಾನಮತ್ತರಾಗಿರುವುದನ್ನು ಖಡ್ಡಾಯವಾಗಿ ನಿಷೇಧಿಸಿದನು. ( ಸುರಾ ೨/೨೧೬, ೫/೯೩.)



ಮದೀನದಲ್ಲಿ ತನ್ನ ಅಧಿಕಾರವನ್ನ ಅಧಿಕೃತವಾಗಿ ಪ್ರತಿಷ್ಠಾಪಿಸಿ ಯಹೂದಿ ಆಚರಣೆಗಳ ಮಕ್ಕಿ-ಕಾ-ಮಕ್ಕಿ ಕಾನೂನು ಕಟ್ಟಳೆಗಳನ್ನ ತನ್ನ ನೂತನ ಧರ್ಮವಾದ ಇಸ್ಲಾಮಿನಲ್ಲಿ ಅಳವಡಿಸಿಕೊಂಡರೂ ಸಹ ಮಹಮದ್ ಯಹೂದಿಗಳ ಹಾಗೂ ಇನ್ನಿತರ ಅವಿಶ್ವಾಸಿಗಳ ವಿರುದ್ಧ ಆಂತರಿಕವಾಗಿ ಅಸಹನೆಯಿಂದ ಕುದಿಯುತ್ತಿದ್ದ. ಆತ ಅವರ ವಿರುದ್ಧ ಜಾರಿಗೆ ತಂದ ಕಾನೂನುಗಳು ಈ ಅಸಹನೆಯ ನಡುವಳಿಕೆಗೆ ಪುಷ್ಠಿ ನೀಡುತ್ತವೆ. ಅವರ ಮೇಲೆ ಆತ ಹೇರುವಂತೆ ರೂಪಿಸಿದ ನಿಯಮಾವಳಿಗಳು ಅತ್ಯಂತ ಕ್ರೂರವೂ - ಕಠಿಣವೂ ಆಗಿದ್ದವು. ಖುರ್ಹಾನಿನ ಅನೇಕ ಸುರಾಗಳಲ್ಲಿ ಅವುಗಳ ಛಾಯೆ ಸ್ಪಷ್ಟವಾಗಿವೆ. ಅಂದಿನ ಅರಬ್ಬಿ ಬುಡಕಟ್ಟುಗಳಲ್ಲಿ ಸರ್ವೆ ಸಾಮಾನ್ಯವಾಗಿದ್ದ ಕೊಳ್ಳೆ ಹೊಡೆಯುವ, ಲೂಟಿ ಮಾಡುವ ಹಾಗೂ ವಿನಃ ಕಾರಣ ಹಲ್ಲೆ ಮಾಡುವ ಪ್ರವೃತ್ತಿಯನ್ನು ಕೇವಲ ಮುಸ್ಲೀಮೇತರ ಅವಿಶ್ವಾಸಿಗಳ ಮೇಲೆ ಮಾತ್ರ ನಡೆಸಬಹುದು ಎನ್ನುವ ಹೊಸ ನೀತಿಯನ್ನಾತ ರೂಪಿಸಿದ.



ಖುರ್ಹಾನಿನ ಹಲವಾರು ಸುರಾಗಳಲ್ಲಿ ವಿಸ್ಕೃತವಾಗಿ ಆ ಕರೆಯ ವಿವರಣೆಗಳನ್ನ ಕಾಣಬಹುದಾಗಿದೆ. ದೇವರ ದಾರಿಯಲ್ಲಿ, ಅವನಿಗೋಸ್ಕರ, ಅವನಿಗಾಗಿ ಹೋರಾಟ, ಧರ್ಮಯುದ್ಧ ಅಂದರೆ ಜೆಹಾದ್ ಜರುಗಿಸಬೇಕೆಂದು ಮಹಮದ್ ದೈವವಾಣಿಯ ಮೊಹರೊತ್ತಿ ತನ್ನ ಅನುಯಾಯಿಗಳಿಗೆ ಕರೆ ನೀಡಿದ. ಸುರಾ ಸಂಖ್ಯೆ ೪೭/೪,೫,೬. ೨೨/೩೯, ೨/೧೯೦, ಹಾಗೂ ೬೧/೧೧ರಲ್ಲಿ ಇದನ್ನ ಆಸಕ್ತರು ಗಮನಿಸಬಹುದು.



ಹೋರಾಟದಲ್ಲಿ ಮುಸಲ್ಮಾನ ಯೋಧರು ಒಂದುವೇಳೆ ಸತ್ತರೆ ಅವರಿಗೆ ಸ್ವರ್ಗ ಕಟ್ಟಿಟ್ಟ ಬುತ್ತಿ ಎಂದು ನಂಬಿಸಿ ಹೋರಾಡಿ ಮಡಿಯಲು ಅವರಿಗೆ ಆತ ಉತ್ತೇಜನ ನೀಡಿದ. ಅರೆ ಮನಸ್ಸಿನಿಂದ ಕಾದಾಡಲು ಹಿಂದೆಮುಂದೆ ನೋಡುವವರು ನರಕದ ತಾಮ್ರವರ್ಣದ ಜ್ವಾಲೆಗೆ ಸಿಲುಕಿ ಕ್ರೂರವಾಗಿ ಸುಟ್ಟು ನಾಶವಾಗುವರು ಎಂದಾತ ದೈವವಾಣಿಯ ಮೂಲಕವೆ ಹೆದರಿಸಿದ. ಆತನ ಬುದ್ಧಿಗೇಡಿ ಅನುಯಾಯಿಗಳು ಇದನ್ನೆ ಮಡ್ಡರಂತೆ ನಂಬಿದರು. ನರಕ ಅವರಿಗೆ ಖಚಿತ ಅನ್ನುವ ಮೂಲಕ ಅವರ ಮನಸ್ಸಿನಲ್ಲಿ ಆತ ಎಚ್ಚರಿಕೆಯ ಗಂಟೆಯನ್ನೂ ಬಾರಿಸಿದ. 




ತನ್ನ ಅನುಚರರಿಗೆ ಅವಿಶ್ವಾಸಿಗಳಾದ ವಿಗ್ರಹಾರಾಧಕರ ವಿರುದ್ಧ ಧಾರ್ಮಿಕ ಕಾರಣಕ್ಕಾಗಿ ಹೋರಾಡಲು ಆತ ಪ್ರೋತ್ಸಾಹಿಸಿದ. ಇಸ್ಲಾಮ್ ಈ ಜಗತ್ತಿನಲ್ಲಿ ಶಾಶ್ವತವಾಗಿ ನೆಲೆಸಬೇಕು ಅಂತಾದರೆ ಅವರು ನಿರಂತರ ಹೋರಾಡುತ್ತಲೆ ಇರಬೇಕು, ಅದಕ್ಕಾಗಿ ಶಾಂತಿಯ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ನಿರಂತರ ಸಮರ ಜರುಗಿಸುವುದೆ ಅವರಿಗೆ ಉಚಿತ ಎಂದಾತ ಕರೆ ನೀಡಿದ್ದಾನೆ. ಮೆಕ್ಕಾದ ಕಪಟಿ ಖುರೈಷಿಗಳು ಸ್ವತಃ ತನ್ನದೆ ಬುಡಕಟ್ಟಿನವರಾಗಿದ್ದರೂ ಸಹ ಅವರು ಹಿಂಜರಿದು ತಟಸ್ಥರಾಗದೆ ಹೋದರೆ ಅವರಿಗೆ ದೇವರ ಕೃಪಾಕಟಾಕ್ಷ ಖಂಡಿತಾ ದೊರೆಯಲಾರದು ಎಂದಾತ ಸಾರಿದ. ಉತ್ತಮ ಕವಿತ್ವದ ಶಕ್ತಿ ಇದ್ದ ಮಹಮದ್ ದೈವವಾಣಿಯ ಮೊಹರೊತ್ತುತ್ತಲೆ ತನ್ನೆಲ್ಲಾ ನಿಲುವುಗಳನ್ನ ಸಾಹಿತ್ಯಪೂರ್ಣವಾಗಿ ಸುರಾಗಳ ಮೂಲಕ ಖುರ್ಹಾನಿನಲ್ಲಿ ಸುರಾಗಳ ಮೂಲಕ ಕವಿತೆಯಂತೆ ಮೇಲಿನ ಮಾತುಗಳನ್ನ ಸಾರುತ್ತಾ ನೀಡಿದ್ದಾನೆ. ಆಸಕ್ತರು ಪ್ರಮುಖವಾಗಿ ಸುರಾ ೨/೪೪, ೧೬೬, ೫/೩೮, ೨/೮೩,೮೪ ಹಾಗೂ ೪/೪೮, ೫/೬೨,೬೭ಗಳಲ್ಲಿ ಇದನ್ನ ಓದಿದರೆ ಇದರ ಯಥಾವತ್ ಭಾವಾಂತರ ಕಾಣಸಿಗುತ್ತದೆ.


"ನಿಮ್ಮೊಡನೆ ಯುದ್ಧ ಮಾಡುವವರೊಡನೆ ನೀವೂ ಸಹ ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿ. ಆದರೆ ಅತಿಕ್ರಮಿಸಬೇಡಿ. ಅತಿಕ್ರಮಿಗಳನ್ನ ಅಲ್ಲಾಹನು ಎಂದೂ ಮೆಚ್ಚುವುದಿಲ್ಲ."


"ಅವರೊಡನೆ ಹೋರಾಡುವ ಸಂದರ್ಭ ಬಂದಾಗ ಮುನ್ನುಗ್ಗಿ ಅವರೊಂದಿಗೆ ಹೋರಾಟ ನಡೆಸಿ. ಅವರು ನಿಮ್ಮನ್ನ ಹೊರಗಟ್ಟಿದ್ದಲ್ಲಿಂದ ನೀವೂ ಸಹ ಯಾವುದೆ ರಿಯಾಯತಿ ತೋರದೆ ಅವರನ್ನೂ ಸಹ ಹೊರಗಟ್ಟಿರಿ. ಏಕೆಂದರೆ ಹತ್ಯೆಯು ಅತ್ಯಂತ ಕೆಟ್ಟದ್ದಾಗಿದ್ದರೂ ಸಹ ಕ್ಷೋಭೆಯು ಅಂದರೆ ಫಿತ್ನ ಅದಕ್ಕಿಂತಲೂ ಕೆಟ್ಟದಾಗಿರುವಂತದ್ದು. ಅವರು 'ಮಸ್ಝಿದ್ ಉಲ್ ಹಾರಾಮ್' ಬಳಿ ನಿಮ್ಮೊಡನೆ ಹೋರಾಟ ನಡೆಸದಿದ್ದರೆ ನೀವೂ ಸಹ ಅವರೊಂದಿಗೆ ಹೋರಾಡಕೂಡದು. ಆದರೆ ಅವರು ನಿಮ್ಮ ಮೇಲೆ ಹೋರಾಡಲು ಹವಣಿಸಿದರೆ ನಿರ್ದಾಕ್ಷಿಣ್ಯವಾಗಿ ಅವರ ವಧೆ ಮಾಡಿರಿ! ಸತ್ಯ ನಿಷೇಧಿಗಳಿಗೆ ಇದೆ ತಕ್ಕ ಪ್ರತಿಫಲ."


"ಅನಂತರ ಅವರು ಹಿಂಜರಿದು ನಿಮಗೆ ಶರಣಾದರೆ. ಇಸ್ಲಾಮಿನ ಕಲಮಾ ಓದಿ ಮತಾಂತರವಾದರೆ ನಿಶ್ಚಯವಾಗಿ ಅಲ್ಲಾಹನು ಕ್ಷಮಾಶೀಲನು ಹಾಗೂ ಕರುಣಾನಿಧಿಯೂ ಆಗಿರುತ್ತಾನೆ ಎನ್ನುವುದನ್ನು ನೀವು ಅರಿತಿರಬೇಕು!."



"ಕ್ಷೋಭೆಯು ಸಂಪೂರ್ಣ ಅಳಿದು ಧರ್ಮವು ಪರಿಪೂರ್ಣವಾಗಿ ಸರ್ವಶಕ್ತ ಅಲ್ಲಾಹನ ಅಧೀನ ಶರಣಾಗುವವರೆಗೂ ಅವಿಶ್ವಾಸಿಗಳ ವಿರುದ್ಧ ಜೀವದ ಹಂಗು ತೊರೆದು ನೀವು ಹೋರಾಡಿರಿ. ಅನಂತರ ಅವರು ಹಿಮ್ಮೆಟ್ಟಿದರೆ ಸತ್ಯವಿಶ್ವಾಸಿಗಳಾಗದ ಆಕ್ರಮಿಗಳ ಹೊರತು ಇನ್ಯಾರ ಮೇಲೂ ನೀವು ಕೈ ಎತ್ತ ಕೂಡದು ಅನ್ನುವುದನ್ನ ನೆನಪಿಡಿ"



"ಸನ್ಮಾನಿತ ತಿಂಗಳ ಪರ್ಯಾಯವೂ ಸಹ ಸನ್ಮಾನಿತ ತಿಂಗಳೆ ಆಗಿರುತ್ತದೆ. ಎಲ್ಲಾ ಸನ್ಮಾನಿತಗಳನ್ನೂ ಸಹ ಸರಿಸಮವಾಗಿಯೇ ಗೌರವಿಸಲಾಗುವುದು. ಆದ್ದರಿಂದ ನಿಮ್ಮ ಮೇಲೆ ಕೈ ಮಾಡಿದವರ ವಿರುದ್ಧ ಅಸ್ಥೆಯಿಂದ ಹೋರಾಡಿರಿ" ಎಂದು ಖುರ್ಹಾನಿನ ಸುರಾ ಸಂಖ್ಯೆ ೨/೧೯೦ - ೧೪೪ರಲ್ಲಿ ಮಹಮದ್ ಉಪದೇಶಿಸಿದ್ದಾನೆ. ಆಸಕ್ತರು ಇತಿಹಾಸಕಾರ ಸೆಂಟ್ ಕ್ಲೇರರ 'ಸೋರ್ಸರ್ ಆಫ್ ಇಸ್ಲಾಮ್' ಕೃತಿಯ ಪುಟ ಸಂಖ್ಯೆ ತೊಂಬತ್ತೆಂಟರಲ್ಲಿ ಹಾಗೂ ಮಂಗಳೂರಿನ ಶಾಂತಿ ಪ್ರಕಾಶನ ಪ್ರಕಟಿಸಿರುವ ಖುರ್ಹಾನಿನ ಕನ್ನಡಾನುವಾದದಲ್ಲಿಯೂ ಈ ಮಾಹಿತಿಯನ್ನ ತಾಳೆ ನೋಡಿ ಖಚಿತ ಪಡಿಸಿಕೊಳ್ಳಬಹುದು.


( ಇನ್ನೂ ಇದೆ.)

No comments: