26 October 2015

ವಲಿ - ೧೭








ಬದರ್ ವಿಜಯದ ನಂತರ ಮುಸಲ್ಮಾನರಲ್ಲಿನ ನಡುವಳಿಕೆಯಲ್ಲಿ ಬರ್ಬರತೆ ಕ್ರಮೇಣ ಹೆಚ್ಚಿತು. ಇತಿಹಾಸಕಾರ ಸರ್ ವಿಲಿಯಂ ಮ್ಯೂರ್ ಇದಕ್ಕೆ ಅಸ್ಮಾ ಎಂಬ ಮಹಿಳೆಯ ಉದಾಹರಣೆ ಕೊಟ್ಟು ವಿವರಿಸಿದ್ದಾನೆ. ಅಸ್ಮಾ ಮದೀನಾದ ಸ್ಥಳಿಯ ಔಸ್ ಬುಡಕಟ್ಟಿಗೆ ಸೇರಿದ್ದ ಒಬ್ಬ ಸುಂದರ ಹಾಗೂ ಶಿಕ್ಷಿತ ಮಹಿಳೆಯಾಗಿದ್ದಳು. ಕವಿತ್ವ ಅವಳಿಗೆ ಒಲಿದಿತ್ತು. ಆಕೆ ಇಸ್ಲಾಮಿನ ಹೆಸರಿನ ಡಂಭಾಚಾರವನ್ನ ನೇರಾನೇರ ವಿರೋಧಿಸುತ್ತಿದ್ದಳಲ್ಲದೆ ಸಾರ್ವಜನಿಕವಾಗಿಯೂ ಅದರ ಹುಳುಕುಗಳನ್ನ ಸತರ್ಕವಾಗಿ ಖಂಡಿಸಲು ಎಂದಿಗೂ ಹೆದರುತ್ತಿರಲಿಲ್ಲ. ಬದರ್ ಯುದ್ಧದ ನಂತರ ಆಕೆಯೂ ಸಂಬಂಧಿಗಳನ್ನ ಕಳೆದುಕೊಂಡು ಸಂತೃಸ್ತಳಾಗಿದ್ದಳು. ತಮ್ಮದಲ್ಲದ ಈ ಕಾಳಗದಲ್ಲಿ ಮಹಮದನೆಂಬ ಅನಾಮಧೇಯನ ಪಡೆ ಸೇರಿ ವಿನಾಕಾರಣ ಸತ್ತು ಹೋದ ತನ್ನ ಬಂಢುವಿನ ಮೂರ್ಖತನವನ್ನ ನೆನೆದು ಆಕೆ ಒಂದು ಕವನ ರಚಿಸಿದಳು.



ಅದರಲ್ಲಿ ಸಹಜವಾಗಿ ಮಹಮದನನ್ನು ಕಟುವಾಗಿ ಖಂಡಿಸಲಾಗಿತ್ತು. ಈ ಕವನ ಬಾಯಿಂದ ಬಾಯಿಗೆ ಹರಡಿ ನವ ಧಾರ್ಮಿಕರಾದ ಮುಸಲ್ಮಾನರ ಕಿವಿಯನ್ನೂ ಸಹ ಹೋಗಿ ಮುಟ್ಟಿತು. ವಿಷಯ ವಾಸ್ತವವೆ ಆಗಿದ್ದರೂ ಅದನ್ನ ಜೀರ್ಣಿಸಿಕೊಳ್ಳಲಾಗದ ಮತಿಗೆಟ್ಟ ಮುಸಲ್ಮಾನರು ತಮ್ಮ ಪ್ರವಾದಿಯನ್ನ ಹೀಯ್ಯಾಳಿಸಿದ ಆಸ್ಮಾಳ ಬಗ್ಗೆ ವಿಪರೀತ ರೋಷಗೊಂಡರು. ಅವರ ಪಿತೂರಿಗಳು ಅಸ್ಮಾಳ ವಿರುದ್ಧ ಶುರುವಾಗಲು ಹೆಚ್ಚು ಸಮಯ ಹಿಡಿಯಲಿಲ್ಲ.


ಆ ಪಿತೂರಿಕೋರರ ಪಡೆಯಲ್ಲಿ ಓಮೈರ್ ಎಂಬ ಹುಟ್ಟು ಕುರುಡನೂ ಒಬ್ಬನಿದ್ದ. ತಮಾಷೆಯೆಂದರೆ ಅಸ್ಮಾ ರಚಿಸಿದ ಅನೇಕ ಕವನಗಳನ್ನ ಹಾಡಿಕೊಂಡೆ ಆತ ಭಿಕ್ಷಾಟನೆ ಮಾಡಿ ತನ್ನ ಹೊಟ್ಟೆ ಹೊರೆದುಕೊಳ್ಳುತ್ತಿದ್ದ. ಆತ ತಾನು ಅವಳ ಹುಟ್ಟಡಗಿಸುವುದಾಗಿ ಧರ್ಮೋನ್ಮಾದದಲ್ಲಿ ಪಣ ತೊಟ್ಟ. ಮಧ್ಯರಾತ್ರಿಯಲ್ಲಿ ಅಸ್ಮಾಳ ಮನೆಗೆ ಕಳ್ಳನಂತೆ ನುಸುಳಿ ಆಕೆ ತನ್ನ ಪುಟ್ಟ ಬಾಲೆಯ ಜೊತೆ ಗಾಢ ನಿದ್ದೆಯಲ್ಲಿದ್ದಾಗ ಎದೆಗೆ ಇರಿದು ಕೊಂದನಲ್ಲದೆ ಎಳೆಯ ಮಗುವನ್ನೂ ಕತ್ತರಿಸಿ ಹಾಕಿದ ಓಮೈರ್. ಮಾರನೆ ದಿನ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆ ಇತ್ತು. ಅಸ್ಮಾಳ ಕೊಲೆ ಅದಾಗಲೆ ಸುದ್ದಿಯೂ ಆಗಿತ್ತು. ತನ್ನ ಪ್ರವಚನ ಮುಗಿದ ನಂತರ ಮಹಮದ್ ಓಮೈರ್'ನನ್ನು ಉದ್ದೇಶಿಸಿ "ನೀನು ಅಸ್ಮಾಳನ್ನು ಕೊಲೆಗೈದೆ ಅಲ್ಲವೆ?" ಎಂದು ಪ್ರಶ್ನಿಸಿದ. ಅದಕ್ಕೆ ಆತ " ಹೌದು, ಇದಕ್ಕೆ ಭಯ ಪಡಬೇಕೆ?" ಎಂದು ಕೇಳಿದ. ಆಗ ಮಹಮದ್ ತೀರಾ ಉಡಾಫೆಯಿಂದ "ಹಾಗೇನೂ ಇಲ್ಲ! ಕೇವಲ ಕೆಲವು ಮೇಕೆಗಳು ಒಂದಕ್ಕೊಂದು ಹೊಡೆದಾಡಿಕೊಳ್ಳಬಹುದು ಅಷ್ಟೆ!!" ಎಂದು ಮಾರುತ್ತರ ನೀಡಿದ. "ದೇವರಿಗೆ ಹಾಗೂ ಅವನ ಪ್ರವಾದಿಗೆ ಸಹಾಯ ಮಾಡಿದ ವ್ಯಕ್ತಿಯನ್ನ ನೀವು ನೋಡಬೇಕೆ? ನೋಡಿ ಅವನಿಲ್ಲೆ ಇದ್ದಾನೆ!" ಎಂದು ನೆರೆದಿದ್ದವರನ್ನು ಉದ್ದೇಶಿಸಿ ಅವನು ಉದ್ಘರಿಸಿದ. ಎಲ್ಲರೂ "ಈ ಕುರುಡನೆ!" ಎಂದು ಗುಸುಗುಸು ನಡೆಸಿದರು. ಆಗ "ಕುರುಡನೆನ್ನದಿರಿ! ಓಮೈರ್ ಎಂದು ಕರೆಯಿರಿ" ಎಂದ ಮಹಮದ್.


ಅಸ್ಮಾಳನ್ನು ಸಮಾಧಿ ಮಾಡಿ ಹಿಂದಿರುಗುತ್ತಿದ್ದ ಅವಳ ಮಕ್ಕಳು ದಾರಿಯಲ್ಲಿ ಸಿಕ್ಕ ಓಮೈರ್'ನನ್ನು ಕಂಡು ತಮ್ಮ ತಾಯಿಯ ಕೃಪೆಯಿಂದಲೆ ಬದುಕುತ್ತಿದ್ದ ನೀನು ಈಗ ಅವಳನ್ನೆ ಕೊಂದದ್ದು ನ್ಯಾಯವೆ? ಎಂದು ಪ್ರಶ್ನಿಸಿದರು. ಅವರ ಬಹಿರಂಗದ ಆಪಾದನೆಯಿಂದ ವಿಚಲಿತನಾದ ಓಮೈರ್ "ಅಸ್ಮಾ ಮಾಡಿದ ತಪ್ಪನ್ನೆ ನಿಮ್ಮಲ್ಲಿ ಇನ್ಯಾರು ಮಾಡಿದರೂ ನಾನು ಅವರಿಗೂ ಅದೆ ಗತಿ ಕಾಣಿಸುತ್ತೇನೆ! ಇಡಿ ಕುಟುಂಬವನ್ನೆ ಹತ್ಯೆ ಮಾಡುತ್ತೇನೆ" ಎಂದು ಭಿಡೆಯಿಲ್ಲದೆ ಹೆದರಿಸಿದ. ಅಲ್ಲಿ ನೆರೆದಿದ್ದವರಲ್ಲಿ ಯಾರೂ ತಮ್ಮ ಸಹಾಯಕ್ಕೆ ಬಾರದ್ದನ್ನು ಕಂಡು ಅವರೆಲ್ಲಾ ತೆಪ್ಪಗಾದರು. ಮಹಮದ್ ಹಾಗೂ ಅವನ ಅಲ್ಪಾನುಯಾಯಿಗಳ ಮಿತಿಮೀರಿದ ಧರ್ಮೋತ್ಸಾಹ ಕಂಡು ಅವರು ಅದುರಿ ಹೋದರು. ಅವರ ವ್ಯಾಪಾರ ವಹಿವಾಟುಗಳೆಲ್ಲಾ ಮುಸಲ್ಮಾನರ ಪ್ರದೇಶದಿಂದ ಸುತ್ತುವರೆದಿತ್ತು. ಹೀಗಾಗಿ ತಮ್ಮ ಅಳಿವು ಉಳಿವಿನ ಪ್ರಶ್ನೆಯಾಗಿದ್ದ ಧರ್ಮಾಂತ್ರವನ್ನು ಅವರು ಆಯ್ದುಕೊಂಡರು. ವ್ಯಥಾ ರಕ್ತಪಾತವಾಗಿ ಸಾಯುವುದಕ್ಕಿಂತ ಮುಸಲ್ಮಾನರಾಗಿ ಬದುಕುವ ನಿರ್ಧಾರವನ್ನ ಕೈಗೊಂಡರು. ಹೀಗೆ ಅಸ್ಮಾಳೆಂಬ ಬಂಡುಕೋರ ಕವಯತ್ರಿಯ ಇಡಿ ಕುಟುಂಬ ಆಕೆ ವಿರೋಧಿಸುತ್ತಿದ್ದ ಅದೆ ಇಸ್ಲಾಮಿನ ಅಡಿಯಾಳಾಯಿತು.


ಇದೆ ರೀತಿಯ ಇನ್ನೊಂದು ಪ್ರಕರಣವನ್ನ ಸರ್ ಮ್ಯೂರ್ ಒದಗಿಸಿದ್ದಾರೆ. ಅದು ವೃದ್ಧ ಯಹೂದಿ ಅಫಾಕನದು. ಬೆನ್ ಅಮರ್ ಎನ್ನುವ ಯಹೂದಿ ಬುಡಕಟ್ಟಿಗೆ ಸೇರಿದ್ದ ಅಫಾಕ್ ವಯೋವೃದ್ಧನಾಗಿದ್ದ. ಆತ ತನ್ನ ಅನುಭದ ಆಧಾರದಲ್ಲಿ ಮಹಮದ್ ಹಾಗೂ ಅವನ ಅನುಯಾಯಿಗಳ ಕಾಪಠ್ಯವನ್ನೆಲ್ಲಾ ತರ್ಕಬದ್ಧವಾಗಿ ಜನರಿಗೆ ತಿಳಿಸಿ ಕೊಡತೊಡಗಿದ. ಅವನ ಟೀಕಾ ಪ್ರಹಾರದಿಂದ ಮಹಮದ್ ನಿಜವಾಗಲೂ ಕೆಂಗೆಟ್ಟ. ಹೀಗೆ ಇದು ಮುಂದುವರೆದರೆ ತನ್ನ ಧರ್ಮ ಅರಳುವ ಮುನ್ನವೆ ಬಾಡಿ ಹೋಗುವ ಅಪಾಯದ ಮುನ್ಸೂಚನೆ ಅವನಿಗೆ ಸಿಕ್ಕಿತು. ಆಗ ಅತ ಶುಕ್ರವಾರದ ಪ್ರಾರ್ಥನೆಯ ಪ್ರವಚನದ ನಂತರ ಇದನ್ನ ಪ್ರಸ್ತಾಪಿಸಿ ಆರ್ದ್ರನಾಗಿ "ನನ್ನನ್ನು ಅಫಾಕನ ಉಪದ್ರದಿಂದ ಪಾರು ಮಾಡುವವರು ಯಾರೂ ಇಲ್ಲವೆ?" ಎಂದು ಬಹಿರಂಗವಾಗಿ ಗೋಳಿಟ್ಟ. ಅವನ ಈ ಕರೆಯಿಂ<ದ ಕೆರಳಿದ ಅಲಿ ಹೊಂಚು ಹಾಕಿ ಆ ಮುದುಕ ಮನೆಯ ಪಡಸಾಲೆಯಲ್ಲಿ ಒಬ್ಬನೆ ಮಲಗಿರುವ ಹೊತ್ತನ್ನ ಸಾಧಿಸಿ ಏಕಾಏಕಿ ಒಳನುಗ್ಗಿ ಅವನ ತಲೆಯನ್ನ ಕಡಿದು ಹಾಕಿದ! ಅಲ್ಲಿಗೆ ಮಹಮದ್ ನಿಟ್ಟುಸಿರು ಬಿಡುವಂತಾಯ್ತು.



ಮುಸಲ್ಮಾನರ ಇಂತಹ ಅನ್ಯಾಯದ ಹಾಗೂ ದೌರ್ಜನ್ಯಪೂರಿತ ನಡುವಳಿಕೆ ಹಾಗೂ ರಕ್ತ ಪಿಪಾಸುತನವನ್ನ ಕಂಡ ಯಹೂದಿಗಳ ಸಮೂಹದಲ್ಲಿ ಭಯ ಆವರಿಸಿತು. ಎಲ್ಲಕ್ಕಿಂತ ಮಿಗಿಲಾಗಿ ನಿರಾಶ್ರಿತರಾಗಿ ಇಲ್ಲಿಗೆ ಬಂದು ಈಗ ಗುಡಾರ ಹೊಕ್ಕ ಒಂಟೆಯಂತೆ ತಮ್ಮ ಬುಡಕ್ಕೆ ಬಿಸಿ ನೀರು ಕಾಯಿಸುತ್ತಿರುವ ಇವರ ಉಪಟಳ ಆತಂಕವನ್ನೂ ಸಹ ತಂದಿತು. ಅಲ್ಲದೆ ಈ ಆತಂಕಕ್ಕೆ ಸಕಾರಣಗಳೂ ಸಹ ಇದ್ದವು.


ಬದರ್ ಯುದ್ಧ ಮುಗಿದು ಇನ್ನೂ ಒಂದು ತಿಂಗಳೂ ಸಹ ಸರಿಯಾಗಿ ಮುಗಿದಿರಲಿಲ್ಲ, ಆಗಲೆ ಮದೀನಾದ ಬೆನ್ ಕುನೈಖ್ ಯಹೂದಿ ಬುಡಕಟ್ಟಿನವರೊಂದಿಗೆ ಮಹಮದನ ನಡುವೆ ವಿವಾದವೊಂದು ಉದ್ಭವಿಸಿತು. ಆಗಿನ್ನೂ ಮಹಮದನ ಮಗಳನ್ನ ಮದುವೆಯಾಗದೆ ಇನ್ನೂ ದೊಡ್ಡಪ್ಪನ ಮಗ ಮಾತ್ರನಾಗಿದ್ದ ಅಲಿ ಬದರ್ ಯುದ್ಧದ ಗೆಲುವಿನ ನಂತರ ದೊರೆತ ಯುದ್ಧ ಕೊಳ್ಳೆಯಲ್ಲಿ ಎರಡು ಒಂಟೆಗಳ ಪಾಲನ್ನು ಗಿಟ್ಟಿಸಿದ್ದ. ಆತ ಈ ಕೈನುಖ್ ಬುಡಕಟ್ಟಿನವರ ಜೊತೆ ವ್ಯಾಪಾರ ವ್ಯವಹಾರ ಆರಂಭಿಸಿ ಅವರಿಂದ ಸರಕನ್ನು ಖರೀದಿಸಿ ಅವನ್ನ ಈ ಒಂಟೆಗಳ ಮೇಲೆ ಹೇರಿಕೊಂಡು ಪರ ಊರುಗಳಿಗೆ ಸಾಗಿಸಿ ಮಾರಾಟ ಮಾಡುವ ಹಂಚಿಕೆ ಹಾಕಿದ್ದ.



ಹುಟ್ಟಾ ವ್ಯಾಪಾರಿಗಳಾಗಿದ್ದ ಯಹೂದಿಗಳೂ ಸಹ ಇದನ್ನ ತಿರಸ್ಕರಿಸಲಿಲ್ಲ. ಅಲಿ ತನ್ನ ಒಂಟೆಯನ್ನ ಮದೀನಾದ ಸಂತೆ ಬಯಲಿನಲ್ಲಿ ಅಡ್ಡಾಡಲು ಬಿಟ್ಟಿದ್ದ. ಇದನ್ನ ನೋಡಿದ ಬದರ್ ಯುದ್ಧದ ಇನ್ನೊಬ್ಬ ಅಪ್ರತಿಮ ವೀರನೆಂದು ಹೆಸರುವಾಸಿಯಾಗಿದ್ದ ಹಂಝಾ ಅವನ್ನ ಹಿಡಿದು ತನ್ನ ಮನೆಗೆ ಅಕ್ರಮವಾಗಿ ಓಡಿಸಿಕೊಂಡು ಹೋದ! ಅಲ್ಲಿ ಅವನ್ನ ಅಂದೆ ಕಡಿಸಿ ತನ್ನ ಇಷ್ಟ ಮಿತ್ರರಿಗೂ ಹಾಗೂ ಕೆಲವು ಯಹೂದಿಗಳಿಗೂ ಭರ್ಜರಿ ಮಾಂಸದ ಔತಣವನ್ನ ಹಾಕಿಸಿದ. ಹೆಂಡ ಹೊಳೆಯಾಗಿ ಹರಿಯಿತು.



ಇತ್ತ ಅಲಿ ತನ್ನ ಒಂಟೆಗಳನ್ನ ಅರಸುತ್ತಾ ಬಂದಾಗ ಅಲ್ಲಿ ಅವನ್ನ ಕಾಣದೆ ಅಚ್ಚರಿ ಪಟ್ಟ. ಅಲ್ಲಿನವರಿಂದ ನೈಜ ವಿಷಯ ಅಲಿಗೆ ಸ್ಪಷ್ಟವಾಯಿತು. ಆತ ಕೂಡಲೆ ಮಹಮದನಿಗೆ ದೂರಿತ್ತ. ವಿಚಾರಣೆಗಾಗಿ ಸ್ವತಃ ಮಹಮದ್ ಅಲಿಯೊಂದಿಗೆ ಹಂಝಾನ ಮನೆಗೆ ಬಂದರೆ ಅಲ್ಲಿ ಕಂಡ ದೃಶ್ಯ ಹೇಸಿಗೆ ಹುಟ್ಟಿಸುವಂತಿತ್ತು. ಕಂಠ ಪೂರ್ತಿ ಮದ್ಯ ಕುಡಿದು ಮತ್ತಾಗಿದ್ದ ಹಂಝಾ ತನ್ನದೆ ವಾಂತಿಯಲ್ಲಿ ಬಿದ್ದು ಹೊರಳಾಡುತ್ತಿದ್ದ. ಸಾಲದ್ದಕೆ ಮೈಮೇಲೆ ಕಿಂಚಿತ್ತೂ ಪ್ರಜ್ಞೆ ಇಲ್ಲದ ಆತ ಮಹಮದನಿಗೆ ಕೊಡಬೇಕಾದ ಕನಿಷ್ಠ ಗೌರವವನ್ನೂ ಕೊಡದೆ ಅಸಭ್ಯವಾಗಿ ನಡೆದುಕೊಂಡ. "ನೀನು ನನ್ನ ಅಪ್ಪನ ಗುಲಾಮನಾಗಿದ್ದವನಲ್ಲವೆ?" ಎಂದು ಎಲ್ಲರೆದುರು ಹೀಯ್ಯಾಳಿಸಿದ. ಈ ಸುದ್ದಿ ಎಲ್ಲೆಡೆ ಹರಡಿ ಬೆನ್ ಕೈನುಖ್ ಗುಂಪಿಗೂ ಮುಟ್ಟಿತು. ಸಹಜವಾಗಿ ಅವರೆಲ್ಲಾ ಅದನ್ನ ಆಡಿಕೊಂಡು ಹಾಸ್ಯ ಮಾಡಿಕೊಂಡು ಮಹಮದನ ಟೊಳ್ಳು ಪ್ರವಾದಿತನವನ್ನ ಗೇಲಿ ಮಾಡಿದರು. ಅವರ ಗುಂಪಿನಲ್ಲಿ ಇದೊಂದು ಹಾಸ್ಯ ಚಟಾಕಿಯಾಗಿ ಚಾಲನೆಗೂ ಸಹ ಬಂತು.


ಈ ಘಟನೆ ಹಾಗೂ ಹಂಝಾನ ದುರ್ನಡತೆ ಮಹಮದನಿಗೆ ಕುಡಿತದ ದುಶ್ಪರಿಣಾಮಗಳನ್ನ ಸ್ಪಷ್ಟವಾಗಿ ಅರಿಯುವಂತೆ ಮಾಡಿದವು. ಈ ಕಾರಣದಿಂದಲೆ ಇಸ್ಲಾಮಿನಲ್ಲಿ ಮದ್ಯ ವಿರೋಧಿ ಭಾವನೆಯನ್ನ ಆತ ಬಿತ್ತಿದ. ಮದ್ಯಪಾನ ನಿಷೇಧ ಕುರಿತ ಸುರಾಗಳು ಅವನಿಂದ ಹೊರಬಂದವು. ದೈವವಾಣಿಯ ಮೂಲಕ ಪಾನ ನಿಷೇಧಕ್ಕೆ ಆತ ಒಂದು ಅಧಿಕೃತತೆಯನ್ನ ನೀಡಿದ ಎನ್ನುತ್ತಾರೆ ಇತಿಹಾಸಕಾರ ಮಾರ್ಗೋಲಿಯತ್.


ಕ್ರಮೇಣ ಮಹಮದನ ಉರಿಗಣ್ಣಿಗೆ ತನ್ನನ್ನ ಗೇಲಿ ಮಾಡಿ ತಮ್ಮ ಮನರಂಜನೆಯ ಸಂಜೆಗಳಲ್ಲಿ ಹಾಡಿಕೊಂಡ ಬೆನ್ ಕೈನುಖ್ ಯಹೂದಿಗಳು ಬಿದ್ದರು. ಅವರ ಕುಲಕಸುಬು ಚಿನ್ನ ಬೆಳ್ಳಿಯ ಆಭರಣ ತಯಾರಿಕೆಯ ಸೊನೆಗಾರಿಕೆ ಆಗಿತ್ತು. ಖುದ್ದಾಗಿ ಮಹಮದ್ ಅವರ ಬಿಡಾರಗಳತ್ತ ಸಾಗಿ ತನ್ನ ಇಸ್ಲಾಮಿನತ್ತ ಸಾಗಿ ಬರುವಂತೆ ಅವರನ್ನ ಮೆದುವಾಗಿ ಆಗ್ರಹಿಸಿದ." ತಾನು ದೇವರ ಪ್ರವಾದಿ ಎಂದು ಈಗಾಗಲೆ ಸಾಬೀತಾಗಿಯಾಗಿದೆ. ನೀವೆಲ್ಲರೂ ನನ್ನ ಧರ್ಮಕ್ಕೆ ಸೇರುವುದು ಅನಿವಾರ್ಯ. ಇಲ್ಲದೆ ಹೋದ ಪಕ್ಷದಲ್ಲಿ ಬದರ್ ಯುದ್ಧದಲ್ಲಿ ಖುರೈಷಿಗಳಾದ ಪಾಡನ್ನ ಸ್ವಲ್ಪ ನೆನಪಿಸಿಕೊಳ್ಳಿ! ಅದು ಯಾವಾಗಲಾದರೂ ನಿಮ್ಮನ್ನೂ ಸಹ ಆವರಿಸಿಕೊಳ್ಳಬಹುದು?!" ಎಂದು ನೇರವಾಗಿಯೆ ಎಚ್ಚರಿಸಿದ. ಇದಕ್ಕೆಲ್ಲ ಮೂರುಕಾಸಿನ ಬೆಲೆಯನ್ನೂ ನೀಡದ ಆ ಯಹೂದಿಗಳು ಅವನ ಆದೇಶವನ್ನು ಧಿಕ್ಕರಿಸಿದರು. ಆದರೆ ಅದೆ ಅವರಿಗೆ ಮುಳುವಾಯಿತು.


ಸಕಾರಣವೊಂದು ಸಿಗದೆ ಅವರ ಮೇಲೆ ಎರಗಲು ಮಹಮದ್ ಹಾಗೂ ಅವನ ಗುಂಪಿಗೆ ಸಾಧ್ಯವಂತೂ ಇರಲಿಲ್ಲ. ಆದರೆ ಅತಿ ಶೀಘ್ರವಾಗಿ ಅಂತಹ ಸಕಾರಣವೊಂದು ಒದಗಿ ಬಂತು. ಮುಸಲ್ಮಾನ ಮಹಿಳೆಯೊಬ್ಬಳು ಆಭರಣ ಮಾಡಿಸಲು ಬೆನ್ ಕೈನುಕ್'ರ ಬೀದಿಗೆ ಹೋಗಿದ್ದಳು. ಆಗ ಅಲ್ಲಿದ್ದ ಕುಚೇಷ್ಟೆಯ ಯಹೂದಿ ಯುವಕನೊಬ್ಬ ಆಕೆಗೂ ಅರಿವಾಗದಂತೆ ಸೂಜಿಯೊಂದಕ್ಕೆ ದಾರ ಪೋಣಿಸಿಕೊಂಡು ಮೆಲ್ಲಗೆ ಅವಳ ಮೇಲು ಹೊದಿಕೆಯನ್ನ ಅವಳ ಲಂಗದ ತುದಿಯ ಜೊತೆ ಸೇರಿಸಿ ಹೊಲೆದು ಬಿಟ್ಟ. ಅಮಾಯಕಳಾದ ಆಕೆ ಇದನ್ನರಿಯದೆ ಕೂತಲ್ಲಿಂದ ಮೇಲೆದ್ದಾಗ ಅವಳ ಲಂಗವೂ ಅವಳೊಂದಿಗೆ ಮೇಲೆದ್ದಿತು. ಪುಕ್ಕಟೆ ಮನರಂಜನೆ ಕಂಡವರಂತೆ ಅಲ್ಲಿದ್ದ ಕೆಲವರು ಇದನ್ನ ಕಂಡು ನಗ ತೊಡಗಿದರು. ಆಕೆ ಅವಮಾನದಿಂದ ಕುಸಿದು ಹೋದಳು.


ನಾಚಿಕೆಯಿಂದ ನರಳಿದ ಆಕೆ ಮರಳಿ ಬಂದು ತನ್ನ ಗಂಡನಿಗೆ ಆ ವಿಷಯ ಅರುಹಿದಾಗ ಆತ ಕ್ರೋಧಗೊಂಡು ಆ ಯಹೂದಿಯನ್ನ ಹುಡುಕಿಕೊಂಡು ಹೋಗಿ ಕತ್ತರಿಸಿ ಬಂದ. ಇದರಿಂದ ರೋಷಗೊಂಡ ಸತ್ತ ಯುವ ಯಹೂದಿಯ ಸಹೋದರರು ಈ ಮುಸಲ್ಮಾನನನ್ನು ಹಿಡಿದು ಕೊಂದರು. ಈ ಸಂಗತಿ ಮದೀನಾದ ಇತರ ಮುಸಲ್ಮಾನರ ಕಿವಿಗೆ ಬಿದ್ದೊಡನೆ ಅವರು ಅದನ್ನು ಮಹಮದನ ಕಿವಿಗೆ ಹಾಕಿದರು. ಆತ ತಡ ಮಾಡದೆ ಬೆನ್ ಕೈನುಖ್ ವಸತಿಗೆ ತನ್ನ ಪಡೆಯೊಂದಿಗೆ ಮುತ್ತಿಗೆ ಹಾಕಿದ. ಅವರೊಂದಿಗೆ ಬದರ್ ಯುದ್ಧ ಕಾಲದಲ್ಲಿ ಮಾಡಿಕೊಂಡಿದ್ದ ಶಾಂತಿ ಒಪ್ಪಂದಗಳಿಗೆಲ್ಲಾ ಆಗ ಬೆಲೆ ಬರಲಿಲ್ಲ. ಅವರು ಕೋಟೆ ಬಾಗಿಲನ್ನ ಭದ್ರ ಪಡಿಸಿಕೊಂಡರಾದರೂ ಆಹಾರ, ನೀರು ಹಾಗೂ ಮತ್ತಿತರ ಅಗತ್ಯ ವಸ್ತುಗಳ ಅಭಾವ ಕ್ರಮೇಣ ಎದುರಾದಂತೆ ಕೆಂಗೆಟ್ಟರು. ಮುಸಲ್ಮಾನರ ಪಡೆ ಅವರಿಗೆ ತಕ್ಕ ಶಾಸ್ತಿ ಹಗಲಿರುಳು ಮಾಡಲು ಅವರ ಕೋಟೆಯ ಹೊರಗೆ ಮುತ್ತಿಗೆ ಹಾಕಿಯೆ ಕುಳಿತಿತ್ತು.


ಪರಿಸ್ಥಿತಿ ಹೀಗಿದ್ದರೂ ಇನ್ಯಾವ ಬುಡಕಟ್ಟಿನ್ಹ ಯಹೂದಿಗಳೂ ಸಹ ಅವರ ಸಹಾಯಕ್ಕೆ ಧಾವಿಸಿರಲಿಲ್ಲ. ಹೊರಗಿನಿಂದ ಇಂತಹ ಯಾವುದೆ ಸಹಾಯ ಬಾರದೆ ಅವರು ಕೆಂಗೆಟ್ಟರು. ಅದರ ಜೊತೆಗೆ ಅಲ್ಲಿಯತನಕ ಅವರೊಂದಿಗೆ ಶಾಂತಿ ಹಾಗೂ ಸಹಬಾಳ್ವೆಯಲ್ಲಿದ್ದ ಖಜರಝ್ ಬುಡಕಟ್ಟಿನ ಅರಬ್ಬರು ಹಾಗೂ ಅವರ ಮುಖಂಡ ಮದೀನಾದ ಗಣ್ಯ ವ್ಯಕ್ತಿ ಅಬ್ದುಲ್ ಇಬ್ನ್ ಒಬೈ ಕೂಡಾ ಈ ಹಂತದಲ್ಲಿ ಅವರ ಕೈ ಬಿಟ್ಟದ್ದು ಅವರನ್ನ ಕೆಂಗೆಡಿಸಿತ್ತು. ಮುತ್ತಿಗೆ ಎರಡು ವಾರಗಳಿಗೆ ವಿಸ್ತರಿಸಿದ ನಂತರ ಅವರು ತೀರಾ ನಿತ್ರಾಣರಾಗ ತೊಡಗಿದರು. ಇಂತಹ ಚಿಂತಾಜನಕ ಸ್ಥಿತಿಯಲ್ಲಿ ಮುಸಲ್ಮಾನರಿಗೆ ಶರಣಾಗುವುದರ ಹೊರತು ಅವರಿಗೆ ಇನ್ಯಾವ ಮಾರ್ಗೋಪಾಯಗಳೂ ಸಹ ಉಳಿಯಲಿಲ್ಲ. ಹಾಗೆ ಕೋಟೆಯಿಂದ ಬೇಷರತ್ತಾಗಿ ಹೊರ ಬಂದ ಅವರನ್ನೆಲ್ಲ ಬೆನ್ನ ಹಿಂದೆ ಕೈ ಬಿಗಿದು ಪ್ರಾಣಿಗಳಂತೆ ಮದೀನಾ ಮಾರುಕಟ್ಟೆಯ ಬಳಿಯಿದ್ದ ಸಾರ್ವಜನಿಕ ವಧಾಸ್ಥಾನಕ್ಕೆ ಎಳೆದೊಯ್ಯಲಾಯಿತು. ಅರಬಿಯನ್ ಸಾಮಾಜಿಕ ಕಟ್ಟಳೆಗಳಂತೆ ಈ ರೀತಿ ಸಾರ್ವಜನಿಕ ವಧೆಯನ್ನ ಕಳ್ಳ - ಕಾಕರಿಗೆ ಹಾಗೂ ದರೋಡೆಕೋರರಿಗೆ ವಿಧಿಸುವ ಪದ್ಧತಿ ಇತ್ತು. ಆದರೆ ಇವರ್ಯಾರೂ ಅಂತಹ ಯಾವುದೆ ಅಪರಾಧವನ್ನ ಎಸಗಿರಲಿಲ್ಲ.



ಆ ಹಂತದಲ್ಲಿ ಅವರ ಕರುಣಾಜನಕ ಸ್ಥಿತಿ ನೋಡಲಾಗದೆ ಅಬ್ದುಲ್ ಇಬ್ನ್ ಒಬೈ ಅಲ್ಲಿಗೆ ಬಂದು ಮಹಮದನಲ್ಲಿ ಅವರೆಲ್ಲರ ಪರವಾಗಿ ಕ್ಷಮಾಯಾಚನೆಯ ಪ್ರಸ್ತಾವನೆಯನ್ನ ಮುಂದಿಟ್ಟ. ಅವರನ್ನ ಕ್ಷಮಿಸುವುದು ಪುಣ್ಯಕಾರ್ಯ ಅದಕ್ಕಾಗಿ ನಾನು ಒತ್ತೆ ಹಣ ಕೊಡಲು ತಯ್ಯಾರಿದ್ದೇನೆ ಎಂದಾತ ಹೇಳಿದ. ಯಹೂದಿಗಳೊಂದಿಗೆ ತಲೆಮಾರುಗಳಿಂದ ತಾವು ಮದೀನಾ ವಾಸಿಗಳು ಹೊಂದಿದ್ದ ಸ್ನೇಹ ಸಂಬಂಧ ಹೀಗೆ ಕೊನೆಯಾಗುವುದು ಅವನ ಪಾಲಿಗೆ ಸಹಿಸಲಸಾಧ್ಯವಾಗಿತ್ತು. ಅಬ್ದುಲ್ಲಾ ಹೀಗಾಗಿಯೆ ಹಟ ಬಿಡದೆ ಮಹಮದನ ಕೈಹಿಡಿದು ಬೇಡಿ ಅಂಗಲಾಚಿದ. ಯುದ್ಧದ ಹೊತ್ತಲ್ಲಿ ಅವನ ಪಡೆ ಸೇರಿ ಅವನಿಗೆ ಸಯಾಯ ಮಾಡಿದ ಯಹೂದಿಗಳ ನಡೆಯನ್ನವನಿಗೆ ನೆನಪಿಸಿದ. ಅವರು ಕ್ಷಮಾರ್ಹರು ಎಂದು ಪರಿಪರಿಯಾಗಿ ಅಂಗಲಾಚಿ ವಿನಂತಿಸಿದ. ಇದೀಗ ಕೊನೆಯದಾಗಿ ನುಡಿದ ಮಾತಿಗೆ ಮಹಮದ್ ಮಣಿಯಬೇಕಾಯಿತು. ಆಗವನು ಅಬ್ದುಲ್ಲಾನ ಮಾತಿಗೆ ಒಲಿದ.


ಆದರೆ ಯಹೂದಿಗಳಿಗೆ ಪ್ರಾಣ ಭಿಕ್ಷೆ ನೀಡಿ ಬಿಡುಗಡೆ ಮಾಡಿದರೂ ಅವರೆಲ್ಲರನ್ನೂ ಮುಲಾಜಿಲ್ಲದೆ ಮದೀನಾ ನಗರದಿಂದ ಗಡಿಪಾರು ಮಾಡಲಾಯಿತು. ಹಾಗೆ ಮನೆ ಮಠ ಕಳೆದುಕೊಂಡ ಯಹೂದಿಗಳು ಅಲ್ಲಿಂದ ಠಿಕಾಣಿ ಕಿತ್ತು ತಮ್ಮ ಅನಾದಿ ಕಾಲದ ಆಸ್ತಿ ಪಾಸ್ತಿಗಳನ್ನೆಲ್ಲ ಇದ್ದಂತೆಯೆ ಬಿಟ್ಟು ಸಿರಿಯಾದ ಗಡಿಯತ್ತ ನಿರಾಶ್ರಿತರಾಗಿ ಸಾಗಿ ಹೋದರು. ಪ್ರಾಣವೊಂದನ್ನ ಬಿಟ್ಟು ಇನ್ನೇನನ್ನೂ ಅಲ್ಲಿಂದ ಕೊಂಡೊಯ್ಯಲು ಅವರಿಗೆ ಅನುಮತಿ ನೀಡಲಿಲ್ಲ ಮಹಮದ್. ಆದರೆ ಅವರೆಲ್ಲರೂ ಸೊನೆಗಾರರಾಗಿದ್ದರಿಂದ ಕೇವಲ ವಾಸವಿದ್ದ ಮನೆ ಹಾಗೂ ಸ್ವಲ್ಪಮಟ್ಟಿನ ಚಿನ್ನ ಬೆಳ್ಳಿ, ಅದನ್ನ ಅಭರಣ ಮಾಡುವ ಸಲಕರಣೆಗಳು ಮಾತ್ರ ಮುಸಲ್ಮಾನರ ಕೈವಶವಾಯಿತು. ಅವರ್ಯಾರೂ ರೈತಾಪಿಗಳಲ್ಲದೆ ಇದ್ದುದ್ದರಿಂದ ಭೂಮಿಯ ಒಡೆತನವನ್ನವರು ಹೊಂದಿರಲಿಲ್ಲ. ಹೀಗಾಗಿ ಹೊಲ, ತೋಟ ಹಾಗೂ ಜಾನುವಾರುಗಳು ಸಿಗುವ ಸಾಧ್ಯತೆಗಳಿರಲಿಲ್ಲ.


ಹೀಗಾದ ನಂತರ ಯಹೂದಿ ಸಮುದಾಯದೊಳಗೆ ಮಹಮದನ ಯೋಜನೆಗಳ ಬಗ್ಗೆ ಶಂಕೆ ಹಾಗೂ ಭಯ ಮೂಡ ತೊಡಗಿತು. ಅವರೆಲ್ಲಾ ಈ ನೂತನ ಧರ್ಮ ಇಸ್ಲಾಮಿನ ಅಟ್ಟಹಾಸ ಕಂಡು ಅದುರಿ ಹೋದರು. ಕೇವಲ ನಿರಾಶ್ರಿತನಾಗಿ ಆಶ್ರಯ ಅರಸಿಕೊಂಡು ಬಂದು ಈಗ ತಮ್ಮ ಸಮಾಜವನ್ನೆ ನಿಯಂತ್ರಿಸುವ ಮಟ್ಟಿಗೆ ಪ್ರಭಾವಿಯಾದ ಮಹಮದನ ಬಗ್ಗೆ ಸ್ವತಃ ಮದೀನಾದ ಗಣ್ಯರು ಆತಂಕಿತರಾದರು. ಸಾಲದ್ದಕ್ಕೆ ಬದರ್ ಯುದ್ಧದ ಸಂದರ್ಭದಲ್ಲಿ ಯಹೂದಿಗಳೊಂದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನ ಈ ಘಟನೆಯ ನಂತರ ಏಕಪಕ್ಷೀಯವಾಗಿ ಅಳಿಸಿಹಾಕಲಾಗಿದೆ ಎನ್ನುವ ಮಹಮದನ ಬಂಟ ಓಬೈದನ ಬಹಿರಂಗ ಹೇಳಿಕೆ ಯಹೂದಿ ಸಮುದಾಯದಲ್ಲಿ ದುಗುಡವನ್ನು ಹೆಚ್ಚಿಸಿದವು.


ಇತ್ತ ದಾಂಪತ್ಯ ಸುಖ ತೊರೆವ ಪ್ರತಿಜ್ಞೆ ಮಾಡಿಯೂ ಏನೂ ಮಾಡದೆ ಕೆಂಗೆಟ್ಟಿದ್ದ ಮೆಕ್ಕಾದ ಖುರೈಷಿ ನಾಯಕ ಅಬು ಸಫ್ಯಾನ್ ಇನ್ನಷ್ಟು ಕಾಲ ಈ ಸ್ವಯಂ ಹೇರಿಕೆಯ ಒತ್ತಾಯದ ಬ್ರಹ್ಮಚರ್ಯ ಸಹಿಸಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ! ಹೀಗಾಗಿ ಕ್ರಿಸ್ತಶಕ ೬೨೪ರ ಏಪ್ರಿಲ್ ತಿಂಗಳಿನಲ್ಲಿ ತನಗೂ, ತಮ್ಮವರಿಗೂ ಆದ ಸೋಲು ಹಾಗೂ ಅವಮಾನದ ಸೇಡು ತೀರಿಸಿಕೊಳ್ಳಲು ಇನ್ನೂರು ಯೋಧರ ಸೇನಾ ತುಕುಡಿಯೊಂದನ್ನ ತೆಗೆದುಕೊಂಡು ಆತ ಮದೀನಾದತ್ತ ಚಲಿಸಿದ. ಮದೀನ ಬಳಿಯ ಬೆನ್ ಅನ್ ಅದಿರ್ ಎನ್ನುವ ಯಹೂದಿ ಬುಡಕಟ್ಟಿನವರಿಗೆ ಸೇರಿದ ಜಾಗದಲ್ಲಾತ ಠಿಕಾಣಿ ಹೂಡಿದ. ಆದರೆ ಮಹಮದನ ಹೆದರಿಕೆ ಇದ್ದ ಅವರ ಮುಖಂಡ ಅಲ್ಲಿ ತಂಗಲು ಈ ಸೈನ್ಯಕ್ಕೆ ಸಮ್ಮತಿ ನೀಡಲಿಲ್ಲ. ಇದರಿಂದ ಬೇಸತ್ತ ಸಫ್ಯಾನ್ ಅಲ್ಲಿಯೂ ನಿಲ್ಲಲಾಗದೆ ಹೊರಟು ಹತಾಶೆಯಿಂದ ಮದೀನಾದ ಹೊರವಲಯದಲ್ಲಿದ್ದ ಕೆಲವು ಖರ್ಜೂರದ ತೋಟಗಳ ಹಾಗೂ ಮನೆಗಳ ಮೇಲೆ ಧಾಳಿ ನಡೆಸಿದ. ಅವನ ಈ ಧಾಳಿಯಲ್ಲಿ ಬದರ್ ಯುದ್ಧದಲ್ಲಿ ಪಾಲ್ಗೊಂಡಿದ್ದ ಕೆಲವು ಮುಸಲ್ಮಾನ ಯೋಧರು ಸಿಕ್ಕಿ ಸತ್ತರು. ಹೀಗಾದರೂ ತನ್ನ ಸೇಡು ತೀರಿ ಪ್ರತಿಜ್ಞೆ ಪೂರೈಸಿದೆ ಎಂದು ಹೇಳಿಕೊಳ್ಳುತ್ತಾ ಆತ ಮೆಕ್ಕಾದ ಹಾದಿ ಹಿಡಿದ. ಇತ್ತ ಮದೀನ ನಗರ ಮಧ್ಯದಲ್ಲಿದ್ದ ಮಹಮದನಿಗೆ ಈ ಏಕಾಏಕಿ ಧಾಳಿಯ ಸುದ್ದಿ ತಿಳಿಯುತ್ತಲೆ ಆತ ಅವರ ಖುರೈಷಿ ಪಡೆಯನ್ನ ಬೆನ್ನಟ್ಟಿದ. ಆದರೆ ಆ ವೇಳೆಗಾಗಲೆ ಅದು ಬಹಳ ದೂರ ಸಾಗಿ ಹೋಗಿತ್ತು. ಇನ್ನೂ ಅವರನ್ನ ಬೆನ್ನಟ್ಟಿ ಸಾಗುವುದು ಸಲ್ಲದ ಅಪಾಯವನ್ನ ಮೈಮೇಲೆ ಎಳೆದುಕೊಂಡಂತಾಗುವ ಸಂಭವವಿತ್ತು. ಹೀಗಾಗಿ ಮಹಮದ್ ಬರಿಗೈಯಲ್ಲಿ ಮದೀನಾಕ್ಕೆ ಹಿಂದಿರುಗಬೇಕಾಯಿತು.



( ಇನ್ನೂ ಇದೆ.)

No comments: