24 July 2024

ಇದೆ ಭಾರತ.

ಈ ಒಂದು ದೇಶ - ಒಂದು ಭಾಷೆ - ಒಂದು ಧರ್ಮ ಅಂತ ಪೇಡುವ "ಸಂಘ"ಕಟುಕರು ಹಾಗೂ ಅವರ ಬಾಲಂಗೋಚಿ ಬ್ಲೂಜೆಪಿಯ ಭಂಡ ಭಕ್ತಾದಿಗಳಿಗೆ ಈ ನೆಲದ ಧಾರ್ಮಿಕˌ ಭಾಷಿಕ  ಹಾಗೂ ಸಾಂಸ್ಕೃತಿಕ ವೈವಿದ್ಯತೆಯ ಅರಿವೂ ಇಲ್ಲˌ ಇಲ್ಲಿನ ಹಲವು ಬಗೆಯ ವಿವಿಧತೆಯ ಬಗ್ಗೆ ಕನಿಷ್ಠ ಆದರವೂ ಅವರ ಭಯೋತ್ಪಾದಕ ಮನದಲ್ಲಿಲ್ಲ.😌 


ಕಳೆದ ಲೋಕಸಭಾ ಚುನಾವಣೆಯ ಹೊತ್ತಿಗೆ ತಾನು ಕಿತ್ತು ಗುಡ್ಡೆ ಹಾಕಿದ್ದು ಏನು? ಅಂತ ವಿವರಿಸಿ ಮತ ಯಾಚಿಸುವ ಬದಲು ಏನೂ ಘನಂದಾರಿ ಗೆಣಸು ಕೆತ್ತಿರದ ಕಾರಣಕ್ಕೆ "ತೇಜಸ್ವಿ ಯಾದವ್ ಶ್ರಾವಣದಲ್ಲಿ ಮೀನು ತಿಂದ! ಹಿಂಗಾಗಿ ನನ್ನ ಕೊಳಕು ಮೂತಿಗೆ ಮುತ್ತಿಡಿ?!" ಅಂತ ಬಡಬಡಿಸಿದ್ದ ಇಂತಹ ಮಂಡೆಬಾತ ಅಂಡೆಪಿರ್ಕಿಸ್ ಭಕ್ತಾದಿ ಪೀಡೆಗಳ ಅನೈತಿಕ ಅಪ್ಪ ಪಿಶಾಚಿ ನರೀಂದ್ರ ಬುರುಡೆದಾಸ ಮುದಿ @narendramodi ಅನ್ನೋ ನರಹಂತಕ ಮಾಡಿದ್ದೂ ಅದನ್ನೆ. ಈಗ ತನ್ನ ಸಿಂಹಾಸನ ಅಲ್ಲಾಡುವ ಹೊತ್ತು ಬಂದಿರೋವಾಗ ಸಾಬರ ವಿರುದ್ಧ ಧರ್ಮದ ಗಾಳಿ - ಗಂಧ ಅರಿಯದ ತನ್ನ ಪುಂಡ ಬೆಂಬಲಿಗರ ಪಡೆಯನ್ನ ಛೂ ಬಿಟ್ಟ ಅಯೋಗ್ಯ ಅಜಯ ಕಮಂಗಿ ಭ್ರಷ್ಟ @myogiadityanath ಅನ್ನೋ ಸೈಕೋಪಾತ್ ಮಾಡಿದ್ದುˌ ಮೂರು ರಾಜ್ಯಗಳ ಮೂರೂ ಬಿಟ್ಟ ಬ್ಲೂಜೆಪಿ ಸರಕಾರಗಳು @pushkardhami @CMOfficeUP @CMMadhyaPradesh ಉದ್ದೇಶ ಪೂರ್ವಕವಾಗಿ ನಾಜಿ಼ ಜರ್ಮನಿಯಂತೆ ಕಂಡಕಂಡ ಅಂಗಡಿಯವರೆಲ್ಲ ಬೋರ್ಡಲ್ಲಿ ಹೆಸರು ಬರೆಯಬೇಕಂತ ಒತ್ತಾಯಿಸಿ ಇವುಗಳೆ ಕರೆಯುವ ಭಾರತಮಾತೆಯ ತಾಯ್ಗಂಡರಾಗಲು ಹೊರಟಿದ್ದು ಇದಕ್ಕೆ ಸಾಕ್ಷಿ.😕


ಹಾಗಿರೋವಾಗˌ ಅಂತಹ ಮನೆಹಾಳರ ಅನ್ನ ಇಟ್ಟ ನಾಡಿನ ಜಂತಿ ಎಣಿಸುವ ಕೊಳೆತ ಮನಸ್ಥಿತಿಯ ಹಿಂ"ಬಾಲಕ"ರಿಗೆ ಪಳಯಂಗಡಿಯಲ್ಲಿರೋ ಮಾಡಾಯಿ ಕಾವು ದೇವಸ್ಥಾನವನ್ನೊಮ್ಮೆ ತೋರಿಸಬೇಕು. ಪಣಿಕ್ಕರನೆಂಬ ಕುತಂತ್ರಿ ಮಳಯಾಳಿ ಏಳು ದಶಕಗಳ ಹಿಂದೆ ಅಂದಿನ ದಕ್ಷಿಣ ಕನ್ನಡ ಜಿಲ್ಲೆಯ ದಕ್ಷಿಣ ತುದಿಯಲ್ಲಿದ್ದ ಪಯ್ಯನೂರು ಹೋಬಳಿಯಲ್ಲಿದ್ದ ಈ ತುಳುನಾಡಿನ ಭಾಗವನ್ನು ಅಂದಿನ ಮಲಬಾರು ಜಿಲ್ಲೆಗೆ ಧಾರೆ ಎಳೆದ. ವಾಸ್ತವದಲ್ಲಿ ಪಳಯಂಗಡಿ ಪೇಟೆಯ ದಕ್ಷಿಣಕ್ಕಿರುವ ತಂಬುರ ಗ್ರಾಮದಂಚಿನ ಹೊಳೆ ದಕ್ಷಿಣದ ಮಲಯಾಳಂ ನುಡಿಯ ಕೇರಳದ ಮಲಬಾರು ಹಾಗೂ ಉತ್ತರದ ತುಳುನಾಡಿನ ನೈಜ ಗಡಿಯಾಗಿತ್ತು.👍


ಹೀಗೆ ಆರಂಭದಲ್ಲಿ ಮಲಬಾರು ಜಿಲ್ಲೆ ಹಾಗೂ ಅನಂತರ ವಿಭಜನೋತ್ತರ ಮಲಬಾರು ಪ್ರದೇಶದ ಕಣ್ಣೂರು ಜಿಲ್ಲೆಯ ಭಾಗವಾಗಿದ್ದ ತುಳುವ ಕಾಸರಗೋಡು ತಾಲೂಕನ್ನ ೧೯೮೨ರಲ್ಲಿ ಹೊಸದಾಗಿ ಜಿಲ್ಲೆಯ ದರ್ಜೆಗೇರಿಸಿ ಕಣ್ಣೂರಿನಿಂದ ಪ್ರತ್ಯೇಕಿಸಿದರೂ ಸಹˌ ಈ ಪಯ್ಯನೂರು ಹೋಬಳಿಯನ್ನ ಮಾತ್ರ ಒಡೆದಾಳುವ ಕುತಂತ್ರದ ಮುಂದುವರೆದ ಭಾಗವಾಗಿ ಕಣ್ಣೂರು ತಾಲೂಕಿನ ಭಾಗವಾಗಿ ಮುಂದುವರೆಸಿ ಅನಂತರ ಸ್ವತಂತ್ರವಾಗಿ ತಾಲೂಕಿನ ದರ್ಜೆಗೆ ಏರಿಸಲಾಗಿದೆˌ ಇದು ಚಿಲ್ಲರೆ ರಾಜಕೀಯದ ಸಂಗತಿ ಅಂತ ಇಟ್ಕಳಿ.😇


ಪಳಯಂಗಡಿ ಈ ಪ್ರದೇಶದ ಪ್ರಮುಖ ಪೇಟೆ. ಇದು ಪಯ್ಯನೂರಿನಿಂದ ದಕ್ಷಿಣಕ್ಕಿದೆ. ಇಲ್ಲಿನ ಮಾಡಾಯಿಕಾವು ಭಗವತಿ ಕ್ಷೇತ್ರ ದೇವಸ್ಥಾನಕ್ಕೆ ನನ್ನ ಬೆಳಗಿನ ವಾಕಿಂಗಿನ ಭಾಗವಾಗಿ ಭೇಟಿ ಕೊಟ್ಟಿದ್ದೆ. ಇದನ್ನ ಶ್ರೀತಿರುವಾರುಕಾಟ್ಟುಕಾವು ಭಗವತಿ ಅಂಬಿಲ ಅಂತಲೂ ಕರಿತಾರೆ. ಬಹಳ ಕಾರಣಿಕದ ಕ್ಷೇತ್ರವೆಂದು ನಂಬಲಾಗುವ ಇಲ್ಲಿನ ಭಗವತಿಯ ಶೇಕಡಾ ೯೯ರಷ್ಟು ಭಕ್ತಾದಿಗಳ ಪಡೆಯು ತುಳುವ - ಕೊಡವ - ಕನ್ನಡಿಗರದ್ದೆ ಹೊರತು ಮಲಯಾಳಿಗಳದ್ದಲ್ಲ.🤔


ಪಳಯಂಗಡಿಯಲ್ಲಿ ರೈಲು ನಿಲ್ದಾಣವಿದ್ದು ಮಂಗಳೂರಿನಿಂದ ಹೊರಡುವ ಅನೇಕ ದೂರ ಹಾದಿಯ ರೈಲುಗಳು ಇಲ್ಲಿ ನಿಲುಗಡೆ ನೀಡುತ್ತವೆ. ಮಂಗಳೂರಿಂದ ಒಂದೂಕಾಲು ತಾಸಿನ ದೂರದಲ್ಲಿ ಪಳಯಂಗಡಿ ಇದೆ. ರೈಲ್ವೆ ನಿಲ್ದಾಣದ ಹೊರಗೆ ಬಂದರೆ ಮೂರು ಕಿಲೋಮೀಟರ್ ಅಂತರದಲ್ಲಿರುವ ಬಸ್ ನಿಲ್ದಾಣದತ್ತ ಸಾಗುವ ಬಸ್ಗಳು ಧಾರಾಳವಾಗಿ ಸಿಗುತ್ತವೆ. ಅಲ್ಲಿಂದ ಮುಂದೆ ಪಯ್ಯನೂರು ಸಾಗುವ ಬಸ್ ಹಿಡಿದರೆ ಮಾಡಾಯಿ ಕಾವು ಕೇವಲ ಎರಡು ಕಿಲೋಮೀಟರ್ ದೂರದಲ್ಲಿದೆ. ಪಳಯಂಗಡಿವರೆಗೆ ರೈಲಲ್ಲಿ ಹೋಗಿದ್ದ ನಾನು ಇರಚಲು ಮಳೆಯಲ್ಲಿ ರೈಲ್ವೆ ನಿಲ್ದಾಣದಿಂದಲೆ ನಡೆಯತ್ತಾ ಮಾಡಾಯಿಕಾವು ಹೋಗಿ ಮುಟ್ಟಿದ್ದೆ.👌



ಮಾಟ - ಮಂತ್ರಗಳ ಬಾಧಿತರಿಗೆ ಅಭಯಧಾಮವಾಗಿರುವ ಮಾಡಾಯಿಕಾವಿನ ಭಗವತಿ ಸನ್ನಿಧಿಯಲ್ಲಿ ನಿತ್ಯವೂ ಕೋಳಿ ಮಾಂಸವನ್ನೆ ಇಲ್ಲಿನ ದೇವಿಗೆ ನೈವೇದ್ಯವಾಗಿ ಅರ್ಪಿಸಿˌ ಅನಂತರ ಕಾಳುಮೆಣಸು ಗುದ್ದಿ ಹಾಕಿ - ನೆನೆಸಿದ ಹೆಸರುಕಾಳು ಬೆರೆಸಿ - ಹುರಿದ ಈರುಳ್ಳಿ ಹಾಗೂ ಕರಿಬೇವು - ಹೆಸರುಬೇಳೆ ಒಗ್ಗರಿಸಿದ ಸಣ್ಣಗೆ ಕತ್ತರಿಸಿದ ಕೋಳಿಮಾಂಸವನ್ನ ಉಪ್ಪು-ಅರಿಶಣದ ಜೊತೆಗೆ ಒಟ್ಟುಮಾಡಿ ಹಬೆಯಲ್ಲಿ ಬೇಯಿಸಿದ ಪಲ್ಯದಂತಹ ಈ ಖಾದ್ಯವನ್ನ ಹಾಗೂ ಪಿಡಿಚೆ ಬೆಲ್ಲದ ಹುಗ್ಗಿಯನ್ನ ತಲಾ ನೂರು ರೂಪಾಯಿಗಳಿಗೆ ಪ್ರಸಾದವಾಗಿ ಬರುವ ಭಕ್ತಾದಿಗಳಿಗೆ ಮಾರಲಾಗುತ್ತದೆ.✋



ಅಂದಹಾಗೆˌ ದೇವಸ್ಥಾನದ ಪಾಕಶಾಲೆಯಲ್ಲಿ ಈ ಖಾದ್ಯದ ತಯಾರಿ ಮಾಡುವವರು ಸ್ಥಾನಿಕ ಬ್ರಾಹ್ಮಣರು. ಅದನ್ನ ನೈವೇದ್ಯಕ್ಕಿಡುವವರು ಶಿವಳ್ಳಿಯವರು. ಹೊರಗೆ ಕೌಂಟರಿನಲ್ಲಿ ನೈವೇದ್ಯ ನೆರವೇರಿದ ನಂತರ ಮಾರುವವರು ನಂಬೂದರಿಗಳು. ಅಲ್ಲಿಗೆ ಈ ಬ್ಲೂಜೆಪಿಯ ಆಹಾರ ರಾಜಕೀಯದ ಬಡಾಯಿ ಪುಕುಳಿ ಬಾಯಿ ಇಲ್ಲದ್ದು ಅನ್ನೋದಕ್ಕೆ ಈ ಮಾಡಾಯಿಕಾವು ಭಗವತಿಯ ಸನ್ನಿದಿ ಸಾಕ್ಷಿಯಾಗಿ ನಿಂತಿದೆ. ಹೀಗಾಗಿˌ ಈ ದೇಶ ಒಂದೂ ಅಲ್ಲ ( ಇದು ದೇಶವಲ್ಲ ಒಕ್ಕೂಟ ಇದರ ಭಾಗವಾಗಿರುವ ರಾಜ್ಯಗಳೆಲ್ಭ ದೇಶಗಳೆ.) - ಹಿಂದೂಧರ್ಮ ಏಕಾಚರಣೆಯದೂ ಅಲ್ಲ ( ಇಲ್ಲಿ ಕಡಲ ಮೀನು ಮೆಲ್ಲುವ ಸಾರಸ್ವತರೂ - ಕುರಿ ಮಾಂಸ ಬಯಸಿ ಬೇಯಿಸಿ ತಿನ್ನುವ ಕಾಶ್ಮೀರಿ ಪಂಡಿತರೂ - ಕುಕ್ಕುಟ ಮಾಂಸವಿಲ್ಲದೆ ಊಟ ಮುಗಿಸದ ಮೈಥಿಲಿ ಬ್ರಾಹ್ಮಣರೂ - ಗಂಗೆಯೊಡಲ ಸಿಹಿ ನೀರಿನ ಮತ್ಸ್ಯ ಪ್ರಿಯರಾದ ಬಂಗಾಳಿ ಬ್ರಾಹ್ಮಣರೂ ಇದ್ದಾರೆ.) - ಇಲ್ಲಿ ಯಾವುದೆ ಒಂದು ರಾಷ್ಟ್ರಭಾಷೆ ಅಂತಿಲ್ಲ ( ಭಾರತದ ಸಂವಿಧಾನದ ಎಂಟನೆ ಶೆಡ್ಯೂಲಿನಲ್ಲಿನಲ್ಲಿರೋ ಎಲ್ಲವೂ ರಾಷ್ಟ್ರಭಾಷೆಗಳೆˌ ಇಲ್ಲದವೂ ಸಾಂಸ್ಕೃತಿಕವಾಗಿ ಮಾನ್ಯವಾದವುಗಳೆ.). ಒಟ್ಟಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಎನ್ನುವ ಕಿಡಿಗೇಡಿಗಳ ಕೂಟವೆ ಈ ದೇಶಕ್ಕಂಟಿರುವ ಒಂದು ಪೀಡೆ ಹಾಗೂ ಮೆತ್ತಿರವ ಕಳಂಕ. ಮತ್ತಿದು ಅರ್ಥವಾದಷ್ಟು ಬೇಗ ನಮ್ಮ - ನಿಮ್ಮ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು.🙏

No comments: