28 November 2022

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೩ 👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೩ 👊"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೩ 👊


ಮಾತು ಬಲು ಹಗುರ ಮೌನ ತೂಕದ್ದು ಅಂತ ಅವನಿಗನಿಸಲು ಕಾರಣಗಳಿವೆ. ಗಲಾಟೆˌ ಅನಗತ್ಯ ಹರಟೆˌ ಪಟ್ಟಾಂಗಗಳೆಂದರೆ ಅವನಿಗೆ ಅಲರ್ಜಿ. ಮೌನವಾಗಿ ನಮ್ಮ ಆತ್ಮದ ಜೊತೆ ನಾವೆ ಮಾತನಾಡಿಕೊಳ್ಳುವ ಸಮಯ ಬಲು ಅಮೂಲ್ಯ ಅನ್ನೋದು ಅವನ ನಂಬಿಕೆ. ತಮ್ಮ ತಮ್ಮ ಆತ್ಮದ ಜೊತೆಗೆ ಸಂವಹಿಸುವಾಗ ಸಾಮಾನ್ಯವಾಗಿ ಯಾರೂ ಸುಳ್ಳಾಡುವುದಿಲ್ಲ. ಪ್ರಾಮಾಣಿಕವಾದ ಸತ್ಯವಾದ ನುಡಿಗಳಷ್ಟೆ ಅದಲು ಬದಲಾಗುವ ಪವಿತ್ರ ಹೊತ್ತದು. ಅಲ್ಲೂ ಅಪದ್ಧವನ್ನಾಡುವ ಅಧಮರು ಆತ್ಮವಂಚಕರು ಅಷ್ಟೆ.


ಇತ್ತೀಚೆಗೆ ಪ್ರಕ್ಷುಬ್ಧಗೊಂಡಿರುವ ಮನಸಿನ ಭಾರ ಹೊತ್ತು ಸಮುದ್ರಕ್ಕೆ ಮುಖ ಮಾಡಿ ದೂರ ಸಾಗರದ ಎದೆ ಮೇಲೆ ಅತ್ತಿತ್ತ ಸರಿಯುವ ಅದೇನನ್ನೋ ದಿಟ್ಟಿಸುತ್ತಾ ಧ್ಯಾನಸ್ಥನಾಗುವ ಸುಖವೆ ಪರಮಸುಖ ಅನ್ನಿಸಿದೆ ಅವನಿಗೆ. ಈ ಏಕಾಂತದ ರುಚಿ ಮನಸಿಗೆ ಹತ್ತಿದ ಹಾಗೆ ದಿನಾ ಸಂಜೆ ಹೀಗೆ ವ್ಯಸನಿಯಂತೆ ಒಬ್ಬಂಟಿಯಾಗಿ ಕಡಲ ತಡಿಗೆ ಬಂದು ಕೂರುವ ಗೀಳನ್ನ ಅಂಟಿಸಿಕೊಂಡಿದ್ದಾನವನು.


ಉಕ್ಕಿ ಬರುವ ಕಡಲಲೆಗಳು ಪ್ರೀತಿಗೂ ವಿರಹಕ್ಕೂ ಏಕಕಾಲದಲ್ಲಿ ದ್ಯೋತಕ ಅಂತೆನಿಸಿˌ ಒಂದೆ ಭಾವದಲ್ಲಿ ವೈರುಧ್ಯದ ರೂಪಕಗಳನ್ನ ಹೊತ್ತುಕೊಂಡಿರುವ ಸಾಗರದ ತೆರೆಗಳ ಮೇಲೆ ಅದೇಕೋ ಅವನಿಗೆ ಅವ್ಯಕ್ತ ಮತ್ಸರ ಮೂಡುತ್ತದೆ. ನದಿಯ ವಿರಹದ ನಡೆಗೆ ಮುಕ್ತಿ ಕಾಣಿಸುವ ಕೊನೆಯ ಆಸರೆಯೆ ಆಗಿದ್ದರೂ ಸಹ ಸಾಗರದ ಅಪ್ಪುಗೆಗೆ ಧಾವಿಸಿ ಹರಿದುಬರುವ ನದಿ ತನ್ನೊಳಗಿನ ಸಿಹಿಯನೆಲ್ಲ ಕಡಲ ತೋಳುಗಳಿಗೆ ಧಾರೆಯೆರೆದು ತಾನು ಮಾತ್ರ ತನ್ನ ಅಸ್ತಿತ್ವವನ್ನೆ ಕಳೆದುಕೊಂಡು ಶಾಶ್ವತವಾಗಿ ಉಪ್ಪುಪ್ಪಾಗುತ್ತದೆ. ಹಿಂದಿರುಗಿ ಸಿಹಿಯಾಗಲಾರದ ಸ್ಥಿತಿಗೆ ಹೋಗಿ ತಲುಪುತ್ತದೆ. ಉಪ್ಪು ಬಾಳಿನ ರುಚಿ ಹೆಚ್ಚಿಸಲು ಮುಖ್ಯ ನಿಜ. ಆದರದುˌ ಚಿಟಿಕೆಯಷ್ಟಿದಿದ್ದರೆ ಸಾಕೆ ಸಾಕು. ಅದು ಬಿಟ್ಟು ಬದುಕಿನುದ್ದ ಉಪ್ಪನ್ನೆ ಎರೆದುಕೊಂಡರೆ ವಾಕರಿಕೆ ಬಂದು ಸಾಯಬೇಕಷ್ಟೆ!


ಕಡಲ ನೀರಿಂಗಿಸಿ ಉಪ್ಪು ಮಾಡುವ ಕಸುಬಿನ ಕೂಲಿಗಳ ಕಾಲಿಗೆ ಅದ್ಯಾವ ಪರಿ ಲವಣದ ಶೇಷ ಅಂಟಿಕೊಂಡಿರುತ್ತದೆ ಅಂದರೆˌ ಉಪ್ಪು ಮಾಡುವವ ಸತ್ತರೆ ಅದೆಷ್ಟೆ ಸುಟ್ಟರೂ ಹೆಣದ ಕಾಲು ಮಾತ್ರ ಸಂಪೂರ್ಣ ಬೆಂದು ಸುಟ್ಟು ಬೂದಿಯಾಗಲಾರದು. ಅದೊಂತರಾ ಅರೆಬರೆ ಸುಟ್ಟು ಹೋಗುವ ಶಾಪಗ್ರಸ್ಥ ಬದುಕು. ಈಗ ಜೀವಂತಿಕೆಯ ಬದುಕಿನ ಹತ್ತಿರ ಮೂರು ಮೂರು ಸಲ ಹೋಗಿ ಅದರ ಉಪ್ಪಿನ ರಾಶಿಯಲ್ಲಿ ಮೊಣಕಾಲಷ್ಟೆ ಅಲ್ಲ ಕುತ್ತಿಗೆಯವರೆಗೂ ಹೂತು ಹೋಗಿಯೂ ಮೂರರಲ್ಲಿ ಕನಿಷ್ಠ ಒಂದನ್ನೂ ದಕ್ಕಿಸಿಕೊಳ್ಳಲಾರದ ದುಃಖದಲ್ಲಿರುವ ಅವನ ಸ್ಥಿತಿಯೂ ಉಪ್ಪು ಮಾಡುವ ಕೂಲಿಯ ತರಹದ್ದೆ ಆಗಿ ಹೋಗಿತ್ತು. ಉಪ್ಪು ಮಾಡುವವ ಸತ್ತಾಗ ಸುಟ್ಟರೆ ಅವನ ಕಾಲಷ್ಟೆ ಸುಡದೆ ಉಳಿಯುತ್ತೆ ಅಂತಂದುಕೊಂಡರೆˌ ಕಂಠ ಮಟ್ಟದವರೆಗೆ ಪ್ರೀತಿಯ ಉಪ್ಪ ರಾಶಿಯಲ್ಲಿ ಸೋತು ಹೂತು ಹೋಗಿದ್ದ ಇವನ್ನನ್ನೇನಾದರೂ ಸತ್ತಾಗ ಸುಟ್ಟರೆ  ಭಾವನೆಗಳಿಗೆ ಸಂಚು ಹೂಡಿ ಬಲಿಯಾಗಿಸಿದ ಮೆದುಳಿರೋ ತಲೆಯ ಹೊರತು ಬಾಕಿ ಇನ್ಯಾವ ಅಂಗಾಂಗಗಳೂ ಸುಟ್ಚು ಬೂದಿಯಾಗಲಾರವೇನೋ ಬಹುಶಃ.

******

ಕಾಙಂನಗಾಡಿನ ಚಳಿಗಾಲದ ಸಂಜೆಗಳಿಗೆ ಅದರದ್ದೆ ಆದ ಒಂದು ಮಾಧುರ್ಯವಿದೆ. ಕಡಲ ತಡಿಯಲ್ಲಿರುವ ಕಾರಣ ಸಾಗರದ ಬೆಚ್ಚನೆ ಹವೆಯ ಆಹ್ಲಾದˌ ಪೂರ್ವದ ಕಡೆಗೆ ಊರಿನ ಪಕ್ಕದಲ್ಲೆ ಆರಂಭವಾಗಿ ಕೊಡಗಿನ ದಕ್ಷಿಣ ಭಾಗದೆಡೆಗೆ ಏರುತ್ತಾ ಸಾಗುವ ಪಶ್ಚಿಮಘಟ್ಟದ ಶಿಖರಗಳಿಂದ ರಾಚಿ ಬರುವ ಶೀತಗಾಳಿಯನ್ನ ತನ್ನ ತೆಕ್ಕೆಯೊಳಗೆ ಎಳೆದುಕೊಂಡು ಊರನ್ನ ಬೆಚ್ಚಗಿರಿಸುತ್ತದೆ. ಅಂತಹ ಸುಖಶೀತೋಷ್ಣ ವಾತಾವರಣದಲ್ಲಿಯೂ ಚಳಿ ಚಳಿ ಅನ್ನುತ್ತಾ ಬಿದ್ಢ ತೆಂಗಿನ ಮಡಿಲನ್ನ ಸೀಳಿ ರಾಶಿ ಹಾಕಿಕೊಂಡು ಹೊತ್ತಿಸಿರೋ ರಾಶಿಯ ಬೆಂಕಿಯ ಮುಂದೆ ಚಳಿ ಕಾಯಿಸಕೊಳ್ಳುತ್ತಿರೋ ತರುಣರೂ ಮುದುಕರೂ ಅಲ್ಲಲ್ಲಿ ಕಡಲತಡಿಯುದ್ಧ ಕಾಣ ಸಿಗುತ್ತಾರೆ.

ಬೆಂಗಳೂರಿನಂತಹ ಗಿರಿಧಾಮ ನಗರಿಯ ಚಳಿಗೆ ಹೊಂದಿಕೊಂಡಿದ್ದ ದೇಹ ಪ್ರಕೃತಿಯ ಅವನಿಗೆ ಅಲ್ಲಿನ ಹತ್ತರಲ್ಲೊಂದು ಭಾಗವೂ ಶೀತ ಕಾಣದ ಈ ಊರಿನ ಜನ ಅಷ್ಟಕ್ಕೆ ನಡುಕ ನಟಿಸೋದುˌ ಹೀಗೆ ಬೆಂಕಿ ಕಾಯಿಸಿಕೊಳ್ಳುವ ದೊಂಬರಾಟ ಮಾಡೋದೂ ನೋಡುವಾಗ ತಮಾಷೆ ಅನ್ನಿಸುತ್ತೆ.

ಕಾಙಂನಗಾಡಿಗೆ ಬಂದವ ಪೇಟೆಯಿಂದ ಕೊಂಚ ದೂರವಿರುವ ಅಲ್ಲೆ ಒಂದು ಹೊಟೇಲಿನಲ್ಲಿ ವಾರದ ಲೆಕ್ಕದಲ್ಲಿ ಮುಂಗಡ ಪಾವತಿಸಿ ಕೋಣೆ ಹಿಡಿದ. ಬೆಳಗ್ಯೆ ಎದ್ದವನೆ ಕಟ್ಟಡದ ಕೆಳಗಿರೋ ಕ್ಯಾಂಟೀನಿನಲ್ಲಿ ಚಾ ಹೀರಿ ಹೊರಟರೆ ಇಂತಲ್ಲಿಗೆ ಅಂತಿಲ್ಲ. ಕಾಲು ಕೊಂಡೊಯ್ದ ಕಡೆಗೆ ಅಂದಿನ ಪಯಣ ಖಾತ್ರಿ. ಕುಶಾಲನಗರದ ಕಡಲ ತಡಿˌ ನಿತ್ಯಾನಂದಾಶ್ರಮˌ ಸಮೀಪದ ಹೊಸದುರ್ಗ ಕೋಟೆˌ ದೂರದ ಬೇಕಲ ಕೋಟೆˌ ಆನಂದಾಶ್ರಮˌ ಗುರುವನ ಹೀಗೆ ಸಿಕ್ಕಸಿಕ್ಕಲೆಲ್ಲಾ ಅಲೆಮಾರಿಯಂತೆ ಅಲೆದುˌ ಹಸಿದಲ್ಲಿ ಉಂಡು ಮರಳಿ ಕೋಣೆಗೆ ಹಿಂದಿರುಗುವಾಗ ಕಾಲುಗಳ ವೇದನೆ ಸುಸ್ತಿನ ಸೂಚನೆಕೊಡುತ್ತಿತ್ತು. ಮಿಂದು ಬರಿಮೈಯಲ್ಲಿ ಮಂಚಕ್ಕೆ ಮೈ ಚೆಲ್ಲಿದರೆ ಭಯಂಕರ ಸೊಳ್ಳೆ ಕಾಟದ ಮಧ್ಯೆಯೂ ಕನಸುಗಳೂ ಕಾಡದಷ್ಟು ಗಾಢ ನಿದ್ದೆ ಆವರಿಸಿಕೊಂಡು ನಡು ರಾತ್ರಿಯಲೆಲ್ಲೋ ಇದ್ದಕ್ಕಿದ್ದಂತೆ ಎಚ್ಚರವಾಗಿ ಇನ್ನೂ ಉರಿಯುತ್ತಿರೋ ದೀಪˌ ತಿರುಗುತ್ತಿರೋ ಪಂಖದ ರೆಕ್ಕೆಗಳ ಕರಕರ ಸದ್ದಿನ ಮಧ್ಯ ಏಕಾಂಗಿಯಾಗಿ ತಾನು ಸ್ವಪ್ನಹೀನನಾಗಿ ಮಲಗಿರೋ ಸ್ಥಿತಿಯ ಅರಿವಾಗಿ ಭಯವಾಗುತ್ತಿತ್ತು.

ಕನಸಿಲ್ಲದ ಕರಾಳ ರಾತ್ರಿಯ ಈ ನಿಶಾಚರ ನಿದ್ರೆ ತಾನು ಸಂವೇದನಾರಹಿತನಾಗಿ ಬದಲಾಗುತ್ತಿರುವುದರ ಪೂರ್ವ ಸೂಚನೆಯೋ? ಇಂಚಿಂಚೂ ನಿತ್ಯ ತನ್ನೊಳಗಿನ ನಿಜವಾದ ತಾನು ಕರಗಿ ಇನ್ನಿಲ್ಲವಾಗುತ್ತಿರುವುದರ ನಿಶಾನಿ ಇದಿರಬಹುದೋ! ತಾನು ನಿಜವಾಗಿಯೂ ಜೀವಂತವಾಗಿದ್ದೇನೆಯೋ? ಇಲ್ಲಾ ಅದೆಂದೋ ಸತ್ತ ಆತ್ಮದ ಬೇತಾಳನನ್ನ ಹೆಗಲ ಮೇಲೆ ಹೊತ್ತ ತ್ರಿವಿಕ್ರಮನಂತೆ ಮೌನವಾಗಿ ಜೀವಚ್ಛವವಾಗಿ ತನ್ನ ಹಣದ ಭಾರವನ್ನ ತಾನೆ ಹೊತ್ತು ಸಾಗುತ್ತಿದ್ದೇನೆಯೋ? ಅನ್ನೋ ಗೊಂದಲ ಅವನೊಳಗೆ ಒಮ್ಮೊಮ್ಮೆ ಹುಟ್ಚಿ ಹೊತ್ತಲ್ಲದ ಹೊತ್ತಲ್ಲಿ ಬೆಚ್ಚಿಬೀಳುತ್ತಿದ್ದ.

ಹೀಗೆ ತನ್ನೊಳಗೆ ತಾನು ಮಗ್ನನಾಗಿ ಯೋಚಿಸುತ್ತಾ ಸಾಗುತ್ತಿದ್ದವನ ಆಲೋಚನಾ ಸರಣಿ ಪಕ್ಕದಲ್ಲೆ ಹಾದು ಹೋಗಿದ್ದ ಹಳಿಗಳ ಮೇಲೆ ವೇಗವಾಗಿ ಸಶಬ್ಧ ಸಹಿತ ಹಾದು ಹೋದ ರೈಲಿನ ಗದ್ದಲದಿಂದ ತುಂಡರಿಸಿಹೋಯಿತು. ಕ್ಷಣಾರ್ಧದಲ್ಲಿ ತನ್ನದೆ ಆಲೋಚನಾ ಲಹರಿಯ ತ್ರಿಶಂಕು ಸ್ವರ್ಗದಿಂದ ವಾಸ್ತವ ಪ್ರಪಂಚದ ನಾರುವ ನರಕಕ್ಕೆ ದೊಪ್ಪನೆ ಜಾರಿಬಿದ್ದ ಹಾಗಾಗಿತ್ತು ಅವನ ಸ್ಥಿತಿ.

*****

ನರ ಮನುಷ್ಯನಾಗಿ ಹುಟ್ಟಿದ ಮೇಲೆ ಪ್ರತಿಯೊಬ್ಬರಿಗೂ ಏನಾದರೊಂದು ಚಟವಿರಬೇಕಂತೆ! ಹಾಗಿಲ್ಲದಿದ್ದರೆ ಮನುಷ್ಯರಾಗಿ ಹುಟ್ಟಿದ್ದೂ ವ್ಯರ್ಥ ಅನ್ನುವ ಅರ್ಥದಲ್ಲಿ ಅವರಿವರು ಮಾತಾಡಿದ್ದನ್ನ ಕೇಳಿದ್ದ. ಹಾಗಂತ ಇವನಿಗ್ಯಾವುದೆ ಚಟಗಳಿಲ್ಲ ಅಂತಲ್ಲ. ಅವನ ಜಾಯಮಾನಕ್ಕೂ ಮೂರು ಚಟಗಳಂಟಿವೆ. ಪ್ರವೃತ್ತಿಯೆ ಆಗಿದ್ದರೂ ಸಹ ವೃತ್ತಿಗಿಂತ ಹೆಚ್ಚು ಸಂಗೀತಾಸಕ್ತಿ ಇವನಿಗಿರುವ ಮೊದಲ ಚಟ. ಸಂಗೀತ ಅಂದರೆ ಶಾಸ್ತ್ರೀಯವೋ ಅಶಾಸ್ತ್ರೀಯವೋ ಅನ್ನೋದಕ್ಕಿಂತ ಜಾಸ್ತಿ ಶೃತಿ-ಲಯ-ತಾಳಬದ್ಧವಾಗಿದೆಯ? ಹಾಡುತ್ತಿರುವ ಸಾಹಿತ್ಯ ಅದ್ಯಾವುದಾದರೂ ಭಾಷೆಯಲ್ಲಿರಲಿ ಪರವಾಗಿಲ್ಲ. ಆದರೆ ಅರ್ಥಗರ್ಭಿತವಾಗಿದೆಯ? ಅನ್ನೋದಷ್ಟೆ ಅವನಿಗೆ ಆದ್ಯತೆ.

ಇನ್ನು ಭಯಂಕರ ತಿಂಡಿಪೋತ. ಚಿಕ್ಕಂದಿನಲ್ಲಿ ಸಹಜವಾಗಿರುವ ರಂಗು ರಂಗಿನ ಕಣ್ಸೆಳೆಯುವ ಗಾತ್ರದ ತಿಂಡಿ ತಿನಿಸಗಳನ್ನ ಮೆಲ್ಲುವ ತಿಂಡಿಪೋತತನ ಇನ್ನೂ ಎರಡು ಕೋಣನಷ್ಟು ಪ್ರಾಯವಾದರೂ ಇನಿತೂ ಕಡಿಮೆಯಾಗಿರಲಿಲ್ಲ. ಆದರೆ ತಾನೆ ತಯಾರಿ ಕಲಿತು ಮಾಡುವ ಹಾಗೂ ಜಲಚರಗಳೆ ಮುಖ್ಯವಾಗಿರುವ ಪಾಕ ವೈವಿಧ್ಯಗಳಿಗಷ್ಟೆ ಅವನ ಜಿಹ್ವಾ ಚಾಪಲ್ಯಕ್ಕೆ ಗಡಿ. ಅನೇಕ ರಾತ್ರಿ ಕೇವಲ ಹುರಿದ ಮೀನುˌ ಸಿಗಡಿ ಚಟ್ನಿˌ ತೊರಕೆ ಪಲ್ಯ ತಿಂದು ಊಟ ಮುಗಿಸಿದ್ದಾನೆ.

ಇನ್ನು ಕಟ್ಟ ಕಡೆಯದು ಎಲ್ಲಾ ಬಗೆಯ ವಾಹನಗಳ ಚಾಲನೆ ಕಲಿತು ನಡೆಸುವ ಚಟ.

( ಇನ್ನೂ ಇದೆ.)


ಮಾತು ಬಲು ಹಗುರ ಮೌನ ತೂಕದ್ದು ಅಂತ ಅವನಿಗನಿಸಲು ಕಾರಣಗಳಿವೆ. ಗಲಾಟೆˌ ಅನಗತ್ಯ ಹರಟೆˌ ಪಟ್ಟಾಂಗಗಳೆಂದರೆ ಅವನಿಗೆ ಅಲರ್ಜಿ. ಮೌನವಾಗಿ ನಮ್ಮ ಆತ್ಮದ ಜೊತೆ ನಾವೆ ಮಾತನಾಡಿಕೊಳ್ಳುವ ಸಮಯ ಬಲು ಅಮೂಲ್ಯ ಅನ್ನೋದು ಅವನ ನಂಬಿಕೆ. ತಮ್ಮ ತಮ್ಮ ಆತ್ಮದ ಜೊತೆಗೆ ಸಂವಹಿಸುವಾಗ ಸಾಮಾನ್ಯವಾಗಿ ಯಾರೂ ಸುಳ್ಳಾಡುವುದಿಲ್ಲ. ಪ್ರಾಮಾಣಿಕವಾದ ಸತ್ಯವಾದ ನುಡಿಗಳಷ್ಟೆ ಅದಲು ಬದಲಾಗುವ ಪವಿತ್ರ ಹೊತ್ತದು. ಅಲ್ಲೂ ಅಪದ್ಧವನ್ನಾಡುವ ಅಧಮರು ಆತ್ಮವಂಚಕರು ಅಷ್ಟೆ.


ಇತ್ತೀಚೆಗೆ ಪ್ರಕ್ಷುಬ್ಧಗೊಂಡಿರುವ ಮನಸಿನ ಭಾರ ಹೊತ್ತು ಸಮುದ್ರಕ್ಕೆ ಮುಖ ಮಾಡಿ ದೂರ ಸಾಗರದ ಎದೆ ಮೇಲೆ ಅತ್ತಿತ್ತ ಸರಿಯುವ ಅದೇನನ್ನೋ ದಿಟ್ಟಿಸುತ್ತಾ ಧ್ಯಾನಸ್ಥನಾಗುವ ಸುಖವೆ ಪರಮಸುಖ ಅನ್ನಿಸಿದೆ ಅವನಿಗೆ. ಈ ಏಕಾಂತದ ರುಚಿ ಮನಸಿಗೆ ಹತ್ತಿದ ಹಾಗೆ ದಿನಾ ಸಂಜೆ ಹೀಗೆ ವ್ಯಸನಿಯಂತೆ ಒಬ್ಬಂಟಿಯಾಗಿ ಕಡಲ ತಡಿಗೆ ಬಂದು ಕೂರುವ ಗೀಳನ್ನ ಅಂಟಿಸಿಕೊಂಡಿದ್ದಾನವನು.


ಉಕ್ಕಿ ಬರುವ ಕಡಲಲೆಗಳು ಪ್ರೀತಿಗೂ ವಿರಹಕ್ಕೂ ಏಕಕಾಲದಲ್ಲಿ ದ್ಯೋತಕ ಅಂತೆನಿಸಿˌ ಒಂದೆ ಭಾವದಲ್ಲಿ ವೈರುಧ್ಯದ ರೂಪಕಗಳನ್ನ ಹೊತ್ತುಕೊಂಡಿರುವ ಸಾಗರದ ತೆರೆಗಳ ಮೇಲೆ ಅದೇಕೋ ಅವನಿಗೆ ಅವ್ಯಕ್ತ ಮತ್ಸರ ಮೂಡುತ್ತದೆ. ನದಿಯ ವಿರಹದ ನಡೆಗೆ ಮುಕ್ತಿ ಕಾಣಿಸುವ ಕೊನೆಯ ಆಸರೆಯೆ ಆಗಿದ್ದರೂ ಸಹ ಸಾಗರದ ಅಪ್ಪುಗೆಗೆ ಧಾವಿಸಿ ಹರಿದುಬರುವ ನದಿ ತನ್ನೊಳಗಿನ ಸಿಹಿಯನೆಲ್ಲ ಕಡಲ ತೋಳುಗಳಿಗೆ ಧಾರೆಯೆರೆದು ತಾನು ಮಾತ್ರ ತನ್ನ ಅಸ್ತಿತ್ವವನ್ನೆ ಕಳೆದುಕೊಂಡು ಶಾಶ್ವತವಾಗಿ ಉಪ್ಪುಪ್ಪಾಗುತ್ತದೆ. ಹಿಂದಿರುಗಿ ಸಿಹಿಯಾಗಲಾರದ ಸ್ಥಿತಿಗೆ ಹೋಗಿ ತಲುಪುತ್ತದೆ. ಉಪ್ಪು ಬಾಳಿನ ರುಚಿ ಹೆಚ್ಚಿಸಲು ಮುಖ್ಯ ನಿಜ. ಆದರದುˌ ಚಿಟಿಕೆಯಷ್ಟಿದಿದ್ದರೆ ಸಾಕೆ ಸಾಕು. ಅದು ಬಿಟ್ಟು ಬದುಕಿನುದ್ದ ಉಪ್ಪನ್ನೆ ಎರೆದುಕೊಂಡರೆ ವಾಕರಿಕೆ ಬಂದು ಸಾಯಬೇಕಷ್ಟೆ!


ಕಡಲ ನೀರಿಂಗಿಸಿ ಉಪ್ಪು ಮಾಡುವ ಕಸುಬಿನ ಕೂಲಿಗಳ ಕಾಲಿಗೆ ಅದ್ಯಾವ ಪರಿ ಲವಣದ ಶೇಷ ಅಂಟಿಕೊಂಡಿರುತ್ತದೆ ಅಂದರೆˌ ಉಪ್ಪು ಮಾಡುವವ ಸತ್ತರೆ ಅದೆಷ್ಟೆ ಸುಟ್ಟರೂ ಹೆಣದ ಕಾಲು ಮಾತ್ರ ಸಂಪೂರ್ಣ ಬೆಂದು ಸುಟ್ಟು ಬೂದಿಯಾಗಲಾರದು. ಅದೊಂತರಾ ಅರೆಬರೆ ಸುಟ್ಟು ಹೋಗುವ ಶಾಪಗ್ರಸ್ಥ ಬದುಕು. ಈಗ ಜೀವಂತಿಕೆಯ ಬದುಕಿನ ಹತ್ತಿರ ಮೂರು ಮೂರು ಸಲ ಹೋಗಿ ಅದರ ಉಪ್ಪಿನ ರಾಶಿಯಲ್ಲಿ ಮೊಣಕಾಲಷ್ಟೆ ಅಲ್ಲ ಕುತ್ತಿಗೆಯವರೆಗೂ ಹೂತು ಹೋಗಿಯೂ ಮೂರರಲ್ಲಿ ಕನಿಷ್ಠ ಒಂದನ್ನೂ ದಕ್ಕಿಸಿಕೊಳ್ಳಲಾರದ ದುಃಖದಲ್ಲಿರುವ ಅವನ ಸ್ಥಿತಿಯೂ ಉಪ್ಪು ಮಾಡುವ ಕೂಲಿಯ ತರಹದ್ದೆ ಆಗಿ ಹೋಗಿತ್ತು. ಉಪ್ಪು ಮಾಡುವವ ಸತ್ತಾಗ ಸುಟ್ಟರೆ ಅವನ ಕಾಲಷ್ಟೆ ಸುಡದೆ ಉಳಿಯುತ್ತೆ ಅಂತಂದುಕೊಂಡರೆˌ ಕಂಠ ಮಟ್ಟದವರೆಗೆ ಪ್ರೀತಿಯ ಉಪ್ಪ ರಾಶಿಯಲ್ಲಿ ಸೋತು ಹೂತು ಹೋಗಿದ್ದ ಇವನ್ನನ್ನೇನಾದರೂ ಸತ್ತಾಗ ಸುಟ್ಟರೆ  ಭಾವನೆಗಳಿಗೆ ಸಂಚು ಹೂಡಿ ಬಲಿಯಾಗಿಸಿದ ಮೆದುಳಿರೋ ತಲೆಯ ಹೊರತು ಬಾಕಿ ಇನ್ಯಾವ ಅಂಗಾಂಗಗಳೂ ಸುಟ್ಚು ಬೂದಿಯಾಗಲಾರವೇನೋ ಬಹುಶಃ.

******

ಕಾಙಂನಗಾಡಿನ ಚಳಿಗಾಲದ ಸಂಜೆಗಳಿಗೆ ಅದರದ್ದೆ ಆದ ಒಂದು ಮಾಧುರ್ಯವಿದೆ. ಕಡಲ ತಡಿಯಲ್ಲಿರುವ ಕಾರಣ ಸಾಗರದ ಬೆಚ್ಚನೆ ಹವೆಯ ಆಹ್ಲಾದˌ ಪೂರ್ವದ ಕಡೆಗೆ ಊರಿನ ಪಕ್ಕದಲ್ಲೆ ಆರಂಭವಾಗಿ ಕೊಡಗಿನ ದಕ್ಷಿಣ ಭಾಗದೆಡೆಗೆ ಏರುತ್ತಾ ಸಾಗುವ ಪಶ್ಚಿಮಘಟ್ಟದ ಶಿಖರಗಳಿಂದ ರಾಚಿ ಬರುವ ಶೀತಗಾಳಿಯನ್ನ ತನ್ನ ತೆಕ್ಕೆಯೊಳಗೆ ಎಳೆದುಕೊಂಡು ಊರನ್ನ ಬೆಚ್ಚಗಿರಿಸುತ್ತದೆ. ಅಂತಹ ಸುಖಶೀತೋಷ್ಣ ವಾತಾವರಣದಲ್ಲಿಯೂ ಚಳಿ ಚಳಿ ಅನ್ನುತ್ತಾ ಬಿದ್ಢ ತೆಂಗಿನ ಮಡಿಲನ್ನ ಸೀಳಿ ರಾಶಿ ಹಾಕಿಕೊಂಡು ಹೊತ್ತಿಸಿರೋ ರಾಶಿಯ ಬೆಂಕಿಯ ಮುಂದೆ ಚಳಿ ಕಾಯಿಸಕೊಳ್ಳುತ್ತಿರೋ ತರುಣರೂ ಮುದುಕರೂ ಅಲ್ಲಲ್ಲಿ ಕಡಲತಡಿಯುದ್ಧ ಕಾಣ ಸಿಗುತ್ತಾರೆ.

ಬೆಂಗಳೂರಿನಂತಹ ಗಿರಿಧಾಮ ನಗರಿಯ ಚಳಿಗೆ ಹೊಂದಿಕೊಂಡಿದ್ದ ದೇಹ ಪ್ರಕೃತಿಯ ಅವನಿಗೆ ಅಲ್ಲಿನ ಹತ್ತರಲ್ಲೊಂದು ಭಾಗವೂ ಶೀತ ಕಾಣದ ಈ ಊರಿನ ಜನ ಅಷ್ಟಕ್ಕೆ ನಡುಕ ನಟಿಸೋದುˌ ಹೀಗೆ ಬೆಂಕಿ ಕಾಯಿಸಿಕೊಳ್ಳುವ ದೊಂಬರಾಟ ಮಾಡೋದೂ ನೋಡುವಾಗ ತಮಾಷೆ ಅನ್ನಿಸುತ್ತೆ.

ಕಾಙಂನಗಾಡಿಗೆ ಬಂದವ ಪೇಟೆಯಿಂದ ಕೊಂಚ ದೂರವಿರುವ ಅಲ್ಲೆ ಒಂದು ಹೊಟೇಲಿನಲ್ಲಿ ವಾರದ ಲೆಕ್ಕದಲ್ಲಿ ಮುಂಗಡ ಪಾವತಿಸಿ ಕೋಣೆ ಹಿಡಿದ. ಬೆಳಗ್ಯೆ ಎದ್ದವನೆ ಕಟ್ಟಡದ ಕೆಳಗಿರೋ ಕ್ಯಾಂಟೀನಿನಲ್ಲಿ ಚಾ ಹೀರಿ ಹೊರಟರೆ ಇಂತಲ್ಲಿಗೆ ಅಂತಿಲ್ಲ. ಕಾಲು ಕೊಂಡೊಯ್ದ ಕಡೆಗೆ ಅಂದಿನ ಪಯಣ ಖಾತ್ರಿ. ಕುಶಾಲನಗರದ ಕಡಲ ತಡಿˌ ನಿತ್ಯಾನಂದಾಶ್ರಮˌ ಸಮೀಪದ ಹೊಸದುರ್ಗ ಕೋಟೆˌ ದೂರದ ಬೇಕಲ ಕೋಟೆˌ ಆನಂದಾಶ್ರಮˌ ಗುರುವನ ಹೀಗೆ ಸಿಕ್ಕಸಿಕ್ಕಲೆಲ್ಲಾ ಅಲೆಮಾರಿಯಂತೆ ಅಲೆದುˌ ಹಸಿದಲ್ಲಿ ಉಂಡು ಮರಳಿ ಕೋಣೆಗೆ ಹಿಂದಿರುಗುವಾಗ ಕಾಲುಗಳ ವೇದನೆ ಸುಸ್ತಿನ ಸೂಚನೆಕೊಡುತ್ತಿತ್ತು. ಮಿಂದು ಬರಿಮೈಯಲ್ಲಿ ಮಂಚಕ್ಕೆ ಮೈ ಚೆಲ್ಲಿದರೆ ಭಯಂಕರ ಸೊಳ್ಳೆ ಕಾಟದ ಮಧ್ಯೆಯೂ ಕನಸುಗಳೂ ಕಾಡದಷ್ಟು ಗಾಢ ನಿದ್ದೆ ಆವರಿಸಿಕೊಂಡು ನಡು ರಾತ್ರಿಯಲೆಲ್ಲೋ ಇದ್ದಕ್ಕಿದ್ದಂತೆ ಎಚ್ಚರವಾಗಿ ಇನ್ನೂ ಉರಿಯುತ್ತಿರೋ ದೀಪˌ ತಿರುಗುತ್ತಿರೋ ಪಂಖದ ರೆಕ್ಕೆಗಳ ಕರಕರ ಸದ್ದಿನ ಮಧ್ಯ ಏಕಾಂಗಿಯಾಗಿ ತಾನು ಸ್ವಪ್ನಹೀನನಾಗಿ ಮಲಗಿರೋ ಸ್ಥಿತಿಯ ಅರಿವಾಗಿ ಭಯವಾಗುತ್ತಿತ್ತು.

ಕನಸಿಲ್ಲದ ಕರಾಳ ರಾತ್ರಿಯ ಈ ನಿಶಾಚರ ನಿದ್ರೆ ತಾನು ಸಂವೇದನಾರಹಿತನಾಗಿ ಬದಲಾಗುತ್ತಿರುವುದರ ಪೂರ್ವ ಸೂಚನೆಯೋ? ಇಂಚಿಂಚೂ ನಿತ್ಯ ತನ್ನೊಳಗಿನ ನಿಜವಾದ ತಾನು ಕರಗಿ ಇನ್ನಿಲ್ಲವಾಗುತ್ತಿರುವುದರ ನಿಶಾನಿ ಇದಿರಬಹುದೋ! ತಾನು ನಿಜವಾಗಿಯೂ ಜೀವಂತವಾಗಿದ್ದೇನೆಯೋ? ಇಲ್ಲಾ ಅದೆಂದೋ ಸತ್ತ ಆತ್ಮದ ಬೇತಾಳನನ್ನ ಹೆಗಲ ಮೇಲೆ ಹೊತ್ತ ತ್ರಿವಿಕ್ರಮನಂತೆ ಮೌನವಾಗಿ ಜೀವಚ್ಛವವಾಗಿ ತನ್ನ ಹಣದ ಭಾರವನ್ನ ತಾನೆ ಹೊತ್ತು ಸಾಗುತ್ತಿದ್ದೇನೆಯೋ? ಅನ್ನೋ ಗೊಂದಲ ಅವನೊಳಗೆ ಒಮ್ಮೊಮ್ಮೆ ಹುಟ್ಚಿ ಹೊತ್ತಲ್ಲದ ಹೊತ್ತಲ್ಲಿ ಬೆಚ್ಚಿಬೀಳುತ್ತಿದ್ದ.

ಹೀಗೆ ತನ್ನೊಳಗೆ ತಾನು ಮಗ್ನನಾಗಿ ಯೋಚಿಸುತ್ತಾ ಸಾಗುತ್ತಿದ್ದವನ ಆಲೋಚನಾ ಸರಣಿ ಪಕ್ಕದಲ್ಲೆ ಹಾದು ಹೋಗಿದ್ದ ಹಳಿಗಳ ಮೇಲೆ ವೇಗವಾಗಿ ಸಶಬ್ಧ ಸಹಿತ ಹಾದು ಹೋದ ರೈಲಿನ ಗದ್ದಲದಿಂದ ತುಂಡರಿಸಿಹೋಯಿತು. ಕ್ಷಣಾರ್ಧದಲ್ಲಿ ತನ್ನದೆ ಆಲೋಚನಾ ಲಹರಿಯ ತ್ರಿಶಂಕು ಸ್ವರ್ಗದಿಂದ ವಾಸ್ತವ ಪ್ರಪಂಚದ ನಾರುವ ನರಕಕ್ಕೆ ದೊಪ್ಪನೆ ಜಾರಿಬಿದ್ದ ಹಾಗಾಗಿತ್ತು ಅವನ ಸ್ಥಿತಿ.

*****

ನರ ಮನುಷ್ಯನಾಗಿ ಹುಟ್ಟಿದ ಮೇಲೆ ಪ್ರತಿಯೊಬ್ಬರಿಗೂ ಏನಾದರೊಂದು ಚಟವಿರಬೇಕಂತೆ! ಹಾಗಿಲ್ಲದಿದ್ದರೆ ಮನುಷ್ಯರಾಗಿ ಹುಟ್ಟಿದ್ದೂ ವ್ಯರ್ಥ ಅನ್ನುವ ಅರ್ಥದಲ್ಲಿ ಅವರಿವರು ಮಾತಾಡಿದ್ದನ್ನ ಕೇಳಿದ್ದ. ಹಾಗಂತ ಇವನಿಗ್ಯಾವುದೆ ಚಟಗಳಿಲ್ಲ ಅಂತಲ್ಲ. ಅವನ ಜಾಯಮಾನಕ್ಕೂ ಮೂರು ಚಟಗಳಂಟಿವೆ. ಪ್ರವೃತ್ತಿಯೆ ಆಗಿದ್ದರೂ ಸಹ ವೃತ್ತಿಗಿಂತ ಹೆಚ್ಚು ಸಂಗೀತಾಸಕ್ತಿ ಇವನಿಗಿರುವ ಮೊದಲ ಚಟ. ಸಂಗೀತ ಅಂದರೆ ಶಾಸ್ತ್ರೀಯವೋ ಅಶಾಸ್ತ್ರೀಯವೋ ಅನ್ನೋದಕ್ಕಿಂತ ಜಾಸ್ತಿ ಶೃತಿ-ಲಯ-ತಾಳಬದ್ಧವಾಗಿದೆಯ? ಹಾಡುತ್ತಿರುವ ಸಾಹಿತ್ಯ ಅದ್ಯಾವುದಾದರೂ ಭಾಷೆಯಲ್ಲಿರಲಿ ಪರವಾಗಿಲ್ಲ. ಆದರೆ ಅರ್ಥಗರ್ಭಿತವಾಗಿದೆಯ? ಅನ್ನೋದಷ್ಟೆ ಅವನಿಗೆ ಆದ್ಯತೆ.

ಇನ್ನು ಭಯಂಕರ ತಿಂಡಿಪೋತ. ಚಿಕ್ಕಂದಿನಲ್ಲಿ ಸಹಜವಾಗಿರುವ ರಂಗು ರಂಗಿನ ಕಣ್ಸೆಳೆಯುವ ಗಾತ್ರದ ತಿಂಡಿ ತಿನಿಸಗಳನ್ನ ಮೆಲ್ಲುವ ತಿಂಡಿಪೋತತನ ಇನ್ನೂ ಎರಡು ಕೋಣನಷ್ಟು ಪ್ರಾಯವಾದರೂ ಇನಿತೂ ಕಡಿಮೆಯಾಗಿರಲಿಲ್ಲ. ಆದರೆ ತಾನೆ ತಯಾರಿ ಕಲಿತು ಮಾಡುವ ಹಾಗೂ ಜಲಚರಗಳೆ ಮುಖ್ಯವಾಗಿರುವ ಪಾಕ ವೈವಿಧ್ಯಗಳಿಗಷ್ಟೆ ಅವನ ಜಿಹ್ವಾ ಚಾಪಲ್ಯಕ್ಕೆ ಗಡಿ. ಅನೇಕ ರಾತ್ರಿ ಕೇವಲ ಹುರಿದ ಮೀನುˌ ಸಿಗಡಿ ಚಟ್ನಿˌ ತೊರಕೆ ಪಲ್ಯ ತಿಂದು ಊಟ ಮುಗಿಸಿದ್ದಾನೆ.

ಇನ್ನು ಕಟ್ಟ ಕಡೆಯದು ಎಲ್ಲಾ ಬಗೆಯ ವಾಹನಗಳ ಚಾಲನೆ ಕಲಿತು ನಡೆಸುವ ಚಟ.

( ಇನ್ನೂ ಇದೆ.)

No comments: