24 July 2013

ಸಿದ್ಧರಾಮನ "ಹುಂಡಿ"ಗೊಂದು ಮನವಿ.....




'ಅಮೇರಿಕಾಗೆ ಅದ್ಯಾರನ್ನೋ "ಬರಾಕ್" ಬುಡಬ್ಯಾಡಿ' ಅಂತ ಅದುನ್ನೇನೋ ಜಾಗತಿಕ ಸಮಸ್ಯೆ ಅನ್ನೋ ಹಂಗೆ ಕಂಠ ಹರಕೊಂಡು ಕಿರುಚುತ್ತಾ ಅಂಗಿ ಹರಕೊಂಡು ಓಬಮ್ಮನ ಪೋಜು ಕೊಡುತ್ತಿರುವ ರಾಜಕಾರಣಿಗಳಿಗೆ ನಮ್ಮ ರಸ್ತೆಗಳಿಗೆ ಅಮರಿಕೊಂಡಿರೋ ಖಾಯಿಲೆ ಕಾಣಿಸೋದು ಯಾವಾಗ?
"ನನ್ನ ಕಾರಿನ ಚಕ್ರದಡಿಗೆ ನಾಯಿ ಕುನ್ನಿ ಬಂದ್ರೆ ಬೇಜಾರಾಗ್ದಿರ್ತದಾ?" ಅನ್ನುವ ಶ್ವಾನಪ್ರೇಮಿ ಮ್ಯಾಡಿ ಬಟ್ ನಾಟ್ ಇಂದ್ರಾ ಉರುಫ್ "ನರಿ"ಇಂದ್ರ ಇಂತಾ ರಸ್ತೆಲೆಲ್ಲಾದರೂ ಕಾರಲ್ಲಿ ಓಡ್ಯಾಡಿದ ದಾಖಲೆಗಳಿವೆಯ?

ಕಂಡ ಕಂಡವರಿಗೆ "ಕೈ" ಕೊಡುವ ಕೆಟ್ಟದಾದ ಹಳೆಯ ಚಾಳಿಯಿರುವ ಪಕ್ಸದವರ ಸರಕಾರದಲ್ಲಿ, ಪಿತೃಪಕ್ಷದ ಕಾಗೆಗಳಂತೆ ಮೇಯ್ದು ಕೊಬ್ಬಿ ಸೊಕ್ಕಿರುವ ಕೆಸರಿನ ಹೂ ಪಕ್ಸದ ಪುರಪಿತೃಗಳ ದರ್ಬಾರು ಕಾಣುತ್ತಿರೋ ಟೋಪನ್ ಕಿಸ್ನಣ್ಣನ "ಸಿಂಗಾಪುರ"ದಲ್ಲಿ ಇಲ್ಲದಿರೋ ರೋಡಿಗೆ ರೋಡು ಟ್ಯಾಕ್ಸು ಕಟ್ಟಿ ಕಟ್ಟಿ ಹೈರಾಣಾಗೋ ಕರ್ಮಕ್ಕೆ ಕೊನೆಯಾವಾಗಣ್ಣ?

"ಅನ್ನಭಾಗ್ಯ" ಕರುಣಿಸಿದ್ದಕ್ಕೆ ಸ್ಯಾನೆ ತ್ಯಾಂಕ್ಸ್ ಕಣಣ್ಣೋ, ರುಪಾಯ್ಗೆ ಸೇರು ಸಿಕ್ಕ ಅಕ್ಕಿಲಿ ಮಾಡಿ ತಿಂದ ಅನ್ನ ಅರುಗೊ ಮೊದಲೆ ಬೇಧಿಯಾಗಿ ಓಯ್ತದೆ ಇಂಥಾ ಓಂಪುರಿ ಕೆನ್ನೆ ತರಾ ಇರೋ ರಸ್ತೆಗಳ ಮ್ಯಾಲೆ ಒಂದ್ಸಲ ಓಡ್ಯಾಡಿದ್ರೆ. ಬ್ಯಾಗ ಇನ್ನದ್ರೂ "ರಸ್ತೆ ಭಾಗ್ಯ"ನೂ ಕರುಣಿಸಿ ಪುಣ್ಯ ಕಟ್ಕಳ್ಳಪ್ಪ ಅಣ್ಣಾ ಸಿದ್ರಾಮಣ್ನ...


ಸಗಣಿ ಸಾರಿಸಿದ ಹಂಗೆ ಟಾರು ಬಳಿದು ಸ"ಗಣಿ"ಯ ರುಚಿಕಂಡ ಆಳುವ ಖದೀಮರು ನಿತ್ಯ ನಮ್ಮೂರಿನ ರಾಜರಸ್ತೆಗಳ  ಮುಂಡಾಮೋಚುತ್ತಿದ್ದರೂ ಯಾರೂ ಕೇಳೋರೆ ಇಲ್ಲವಾಯ್ತಲ್ಲೋ ಸಿವನೆ.

No comments: