18 October 2008

ಹೀಗೆ ಬದಲಾಯ್ತು....

ಎಲ್ಲಾ ಯಾತ್ರೆಗಳಿಗೂ ಒಂದು ಕಾರ್ಯಸಾಧನೆಯ ಉದ್ದೇಶ ಇರಲೇಬೇಕಂತಿಲ್ಲ ಎನ್ನುವುದು ನನ್ನ ಆಲೋಚನಾ ಬುನಾದಿ.ಹುಟ್ಟು ಅಲೆಮಾರಿಯ ಮನಸಿರುವ ನನ್ನ ಈ ವಾದ ನಿನ್ನೊಂದಿಗಿನ ಪ್ರೇಮ ನಿವೇದನೆಯಲ್ಲೂ ಬದಲಾಗಿಲ್ಲ ಎಂದರೆ ಆಶ್ಚರ್ಯ ಪಡಬೇಕಿಲ್ಲ.ನನ್ನ ಜೀವಮಾನದಲ್ಲಿ ಜೀವಕ್ಕಿಂತಲೂ ಹೆಚ್ಚಾಗಿ ಪ್ರೀತಿಸಿದ್ದು ಕೇವಲ ಮೂವರನ್ನು.
ಅಮ್ಮ ಮೊದಲನೆಯವರು,,ನನಗೀಗಲೂ ನೆನಪಿದೆ ಹೆತ್ತತಾಯಿಗಿಂತ ಹೆಚ್ಚಾಗಿ ನಾನು ಅಂಟಿಕೊಂಡಿರುತ್ತಿದ್ದುದು ಅಮ್ಮನಿಗೇನೆ,aವರ ಸೀರೆಯ ಹಿತವಾದ ವಾಸನೆ ಇಲ್ಲದಿದ್ದರೆ ನನಗೆ ನಿದ್ದೆ ಬರುತ್ತಿರಲಿಲ್ಲ.ಅನಂತರ ಹೆಚ್ಚು ಹತ್ತಿರವಾದವನು ರುದ್ರಪ್ರಸಾದ್ ಅವನು ನಂಗೆ ಕೇವಲ ಗೆಳೆಯ ಮಾತ್ರನಲ್ಲ ಜೀವದ ಬಂಧು,ಆತ್ಮಸಖ.ನನ್ನ ಬಗ್ಗೆ ನನಗಿಂತ ಹೆಚ್ಚು ಕಳಕಳಿ ಇರುವ ಒಬ್ಬನೇ ಒಬ್ಬ ಅವನು.ಅವನ ಬಗ್ಗೆ ಇನ್ನೊಮ್ಮೆ ಹೇಳುತ್ತೇನೆ.
ಇನ್ನು ನೀನು ಮನಕೆ ಜೀವಕೆ ಹತ್ತಿರವಾದವಳು.ದೂರವೇ ಇದ್ದರೂ...ಏನನೂ ಹೇಳದಿದ್ದರೂ ನನ್ನೊಳಗೆ ಆವರಿಸಿರುವವಳು.ನನ್ನ ಪಾಲಿಗೆ ನೀನು ಪಾರಿಜಾತ,ದೇವಲೋಕದ ಆ ಸುಮದಂತೆ ಕಾರಣವೆ ಇಲ್ಲದೆ ಕನಸಾಗಿ ಕಾಡುವವಳು.ಅಸಲಿಗೆ ನಾನು ನನ್ನ ಪುರಾಣ ಹೇಳದೆ ನೀನೆ ಅದನ್ನು ಅರಿತುಕೊಂಡರೆ ಚೆನ್ನ.ಆದರೆ ನಿನಗೆ ಹೇಳುವ ನೆಪದಲ್ಲಿ ನಾನು ಹಳೆಯ ನೆನಪಿನ ಹೊಳೆಯಲ್ಲಿ ಈಜುವಂತಾಗಿದೆ...ಕೊರೆತವೆನ್ದೆನಿಸಿದರೂ ಪ್ಲೀಸ್ ಸಹಿಸಿಕೋ!
ಆಗಷ್ಟೆ ನಾನು ಶಾಲೆಗೆ ಸೇರಿ ಒಂದುವರ್ಷ ಕಳೆದಿತ್ತು.ರಾಮಾಯಣದ ಜನಪ್ರಿಯತೆಯ ದಿನಗಳವು.ಅಪ್ಪಿ ತಪ್ಪಿ ಟಿ ವಿ ಇಟ್ಟುಕೊಂಡಿರುವವರ ಮನೆಯಲ್ಲಿ ಜನಜಾತ್ರೆ.ಭಾನುವಾರ ಬಂದರೆ ಊರೆಲ್ಲ ಕರ್ಫ್ಯೂ ಹಾಕಿದಂತೆ ನಿರ್ಜನವಾಗುತ್ತಿದ್ದ ಅಧ್ಭುತ ಕಾಲವದು.ಆಗ ಎಲ್ಲರಂತೆ ನಾನೂ ಅದರ ದಾಸಾನುದಾಸ.ಅಂತಹ ಒಂದು ದಿನದಲ್ಲೇ ನಮ್ಮ ಮನೆಗೊಬ್ಬ ಹೊಸ ಅತಿಥಿ ಬಂದರು.
ದಪ್ಪ ದಪ್ಪ ಮೀಸೆಯ ದೈತ್ಯ ಆಕ್ರತಿಗೆ ಹೆದರಿ ನಾನಂತೂ ಅವರ ಹತ್ತಿರವೂ ಸುಳಿಯಲಿಲ್ಲ.ಯಥಾಪ್ರಕಾರ ಅಮ್ಮನ ಸೇರಗಿನಲ್ಲಿಅದಾಗಿ ಕೊಂಡೆ ಆ ಮನುಷ್ಯನನ್ನ ದಿಟ್ಟಿಸಿ ಮುಖ ಮುಚ್ಚಿಕೊಂಡೆ.ಮನೆಯಲ್ಲಿ ಎಲ್ಲರೂ ಅವರೊಂದಿಗೆ ಸಲುಗೆಯಿಂದಿದ್ದರು,ನನ್ನ ಹೆತ್ತಮ್ಮನ ಮುಖವಂತೂ ವಿಪರೀತ ಅರಳಿತ್ತು! ಎಲ್ಲರೂ ನನ್ನನ್ನು ಅವರ ಬಳಿ ಹೋಗುವಂತೆ ಪುಸಲಾಯಿಸುವವರೇ! ಒಲ್ಲದ ಕುರಿಮರಿಯನ್ನು ಹುಲಿಬೋನಿಗೆ ತಳ್ಳುವಂತೆ ಕಡೆಗೂ ಅವರ ಕೈಗೆ ಬಲಿಪಶುವಾಗಿ ಒಪ್ಪಿಸಲ್ಪಟ್ಟೆ.ಆಗ ಆ ವ್ಯಕ್ತಿ chuchhutidda ತನ್ನ ಮೀಸೆಯಿಂದ ನನ್ನ muddisutta ನನ್ನ kiviyalli usurida maatugalu nanaginnoo nenapive.''ಏಕೆ hedarodu? ನಾನು ನಿನ್ನ pappanalva?!"

No comments: