01 September 2010

ಒಲುಮೆಯ ಭಿಕ್ಷೆ ನಿರೀಕ್ಷೆ...

ಬರಡಾದ ಭಾವದ ಬಯಲಲ್ಲಿ ಮತ್ತೆ ಪ್ರೇಮದ ಹಸಿರು ಚಿಗುರಲಾರದು,
ಬತ್ತಿದ ಮನದ ಬಾವಿಯಲ್ಲಿ ಒಲವ ಒರತೆ ಪುನಃ ಸೆಲೆ ಒಡೆಯಲಾರದು/
ನೀನೆ ಮರಳಿ ಕಾಡಿದರೂ ಒಡೆದ ಮನಸ ಕನ್ನಡಿ ಮತ್ತೆ ಕೂಡಲಾರದು,
ಇನ್ನೇನಿದ್ದರೂ ಎದೆಯೊಳಗೆ ನೆನಪಿನ ಜಾತ್ರೆ...
ಅದರ ಮೆರವಣಿಗೆಯಲ್ಲಿ ಒಲವ ತಿರುಕ ನಾನು ಹಿಡಿದು ಸಾಗುವೆನು ಭಿಕ್ಷಾಪಾತ್ರೆ//

No comments: