09 September 2010

ನೀನಿಲ್ಲ.

ನಿನ್ನ ತಟ್ಟದ ನನ್ನ ಕವನಗಳು ಬರಿ ಬರಡು,
ನಿನ್ನ ತಲುಪದ ನನ್ನ ಕನಸುಗಳು ನಿಚ್ಚಳ ಕುರುಡು/
ಭಾವನೆಗಳ ಜಡಿಮಳೆ ನನ್ನೊಳಗೆ ಸುರಿದರೇನು ಸುಖ...
ಅದರಲ್ಲಿ ನೀ ತೋಯದ ಮೇಲೆ,
ಮಾತುಗಳ ಮಂಟಪ ಅದೆಷ್ಟೇ ಚಂದವಾದರೂ ಏನು ಹಿತ....
ನೀನದರಲ್ಲಿ ಬಂದು ಕೂರದ ಮೇಲೆ//


ಬಾನಿನ ನೀಲಿಯೆಲ್ಲ ಕರಗಿದರೂನು,
ನಡು ಸಾಗರದ ಹಸಿರು ಹೇಳ ಹೆಸರಿಲ್ಲದಾದರೂನು/
ಬೆಳ್ಳಿ ಮೋಡಗಳೆಲ್ಲ ಮುನಿದು ಕಡು ಕಪ್ಪಾದರೂನು,
ಎದೆಯ ತುಂಬಿದ ಭಾವದ ಅಣೆಕಟ್ಟೆ ಇನ್ನೂ ಒಡೆದಿಲ್ಲ....
ನಿರೀಕ್ಷೆ ಬಾವಿಯ ಸೆಳೆಯ ಕಣ್ಣು ಇನ್ನೂ ಬತ್ತಿಲ್ಲ//