11 September 2010

ಮರೆತ ಮೇಲೆ...

ಕಣ್ಣೀರ ಮಳೆ ಹರಿಸುವುದರಿಂದ ಅದೃಷ್ಟ ಬದಲಾಗುವಂತಿದ್ದರೆ,
ಈ ಪ್ರಪಂಚದಲ್ಲಿ ಸ್ಮಶಾನಗಳೇ ಇರುತ್ತಿರಲಿಲ್ಲ...
ಅಲ್ಲಿ ಯಾವುದೆ ಕನಸುಗಳು ಸಮಾಧಿಗಿಳಿಯುತ್ತಿರಲಿಲ್ಲ/
ಈ ಎರಡು ಕೈಗಳಷ್ಟೇ ನನ್ನವು...
ಅದರ ಮೇಲೆ ಮೂಡಿರುವ ರೇಖೆಗಳಲ್ಲಿ ದುರಾದೃಷ್ಟವ ಕೊರೆದಿರೊ ವಿಧಿ,
ನೀನು...ನಿನ್ನ ನೆನಪು//


ಕಳೆದು ಹೋದ ಒಲವನ್ನ ಮತ್ತೆ ಮತ್ತೆ ನೆನಪಿಸಿಕೊಳ್ಳುವಾಗ,
ಒಂದೊ ಮದಿರೆಯಿಂದ ಗಂಟಲು ಹಸಿಯಾಗಿರಬೇಕು....
ಇಲ್ಲವೆ ನಿದಿರೆ ಮರೆತ ಕಣ್ಣುಗಳು ಪಸೆಯಾಗಿರಬೇಕು/
ಮೊದಲನೆಯದರಲ್ಲಿ ನನಗೆ ಆಸಕ್ತಿಯಿಲ್ಲ,
ಎರಡನೆಯದರಿಂದ ನನಗೆ ಮುಕ್ತಿಯೆ ಇಲ್ಲ//

No comments: