17 July 2010

ಭಂಡಗೆಟ್ಟವರು...

ರಾಜಕಾರಣಿಗಳಿಂದ ಹಲವಾರು ಸರಕಾರಿ ಯೋಜನೆಗಳ ಸಮರ್ಪಣೆ ಕುರಿತ ಜಾಹಿರಾತುಗಳನ್ನ ದಿನನಿತ್ಯ ಮಾಧ್ಯಮಗಳಲ್ಲಿ ನೋಡುತ್ತಿರುತ್ತೇವೆ ಅಥವಾ ಓದುತ್ತಿರುತ್ತೇವೆ.ಇದೆಷ್ಟು ಅಸಂಬದ್ಧ ಅಂತ ಒಮ್ಮೆಯಾದರೂ ಯೋಚಿಸಿದ್ದೇವ? ಅಲ್ಲ ಸರಕಾರಿ ಹಣದಿಂದ ಜನತೆಯ ಉಪಯೋಗಕ್ಕಾಗಿ ವಿನಿಯೋಗವಾಗಿ ಸಿದ್ದವಾಗುವ ಯೋಜನೆಯನ್ನು ದೇಶಕ್ಕೆ ಸಮರ್ಪಿಸಲು ಅದೇನು ಅವರ ಅಪ್ಪನ ಆಸ್ತಿಯ? ನಮ್ಮೆಲ್ಲರಿಗೆ ಸಮಾಜದ ಸ್ವಾಸ್ಥ್ಯ ನಿರ್ವಹಣೆ,ನಮ್ಮ ಕೆಲಸದ ಒತ್ತಡದ ನಡುವೆ ಸಾಧ್ಯ ಆಗೋದಿಲ್ಲ ಆನ್ನುವ ಕಾರಣಕ್ಕೆ ಚುನಾವಣಾ ವ್ಯವಸ್ಥೆಯ ಮೂಲಕ ನಮ್ಮ ಪ್ರತಿನಿಧಿಯಾಗಿ ಆರಿಸಿ ಕಳಿಸುವ ಈ ಭಂಡ ನನ್ನ ಮಕ್ಕಳ ಜವಾಬ್ದಾರಿಯೇ ನಮ್ಮ ಹಿತಕ್ಕಾಗಿ ಅಂದರೆ ಶ್ರೀಸಾಮಾನ್ಯನ ಹಿತಕ್ಕಾಗಿ ದುಡಿಯೋದೆ ಆಗಿರುವಾಗ (ಆ ದುಡಿಮೆಗೆ ಅವರಿಗೆ ಕೈತುಂಬಾ ಸಂಬಳವೂ..ಜೇಬು ತುಂಬಾ ಗಿಂಬಳವೂ ಗಿಟ್ಟುತ್ತದೆ ಅನ್ನೋದು ಬೇರೆ ಮಾತು) ಮಾಡಿದ ಕರ್ತವ್ಯವನ್ನು ಸಾಧನೆ ಅನ್ನುವ ಹಾಗೆ ಬಿಂಬಿಸಿಕೊಳ್ಳುತ್ತಾ ಕಂಡ ಕಂಡ ಮೋರಿಯ ಮೇಲೆ...ಮೂರು ಮಾರ್ಗ ಕೂಡುವ ಕಡೆ ತಮ್ಮ ಅಸಹ್ಯ ಭಂಗಿಯ ಫ್ಲೆಕ್ಸ್ ಹಾಕಿಕೊಂಡು ಶೋಕಿ ಮಾಡುವ ಇವರ ನಾಚಿಕೆಗೆಟ್ಟ ಬಾಳಿಗೆ ಉಗಿಯುವ ನೈತಿಕತೆ ನಮಗ್ಯಾರಿಗೂ ಇಲ್ಲವ?

No comments: