19 July 2010

ಮತ್ತದೇ ಏಕಾಂತ...

ಮತ್ತೆ ಸುರಿದ ಬೆಳದಿಂಗಳು ನನ್ನ ಮನವ ತಣಿಸಲಿಲ್ಲ,
ಮುತ್ತ ಸುರಿದ ಬಾನಂಚಿನ ಮೋಡಗಳು ಬರಗೆಟ್ಟ ನನ್ನೆದೆಯ ಆರ್ದ್ರಗೊಳಿಸಲಿಲ್ಲ/
ನಿನ್ನ ನೆನಪಿನ ಬೀಜ ಅಂದು ನೀನು ಬಿತ್ತಿ ಹೋಗಿದ್ದು,
ಇಂದು ಭೀಕರ ಜಾಲಿಮರವಾಗಿ...
ಈಕಾರಿರುಳಲ್ಲಿ ಗಾಳಿ ಬೀಸಿದಾಗೆಲ್ಲ ನನ್ನನು ಚುಚ್ಚುತಿದೆ...ಭಾವಗಳ ಗೀರುತಿದೆ//

No comments: