31 July 2010

ತಲೆ ಇದ್ದವರಿಗೆ ಮಾತ್ರ!

ಪ್ರತಾಪ



ಸರಿಯಾದ ಮಾಹಿತಿಯಿಲ್ಲದೆ ಕಂಡ ಕಂಡಲ್ಲೆಲ್ಲ ನನ್ನದೆಲ್ಲಿಡಲಿ ಅಂತ ಓಡಿ ಬರ್ತೀರಲ್ರಿ...ಹೌದೂ ನೀವು ಹೊಟ್ಟೆಗೆ ಏನ್ ತಿಂತೀರಿ? ರಸ್ತೆ ಬದಿಗೆ ವಿಸರ್ಜನೆಗೆ ಕೂತವ ಕೋಳಿಯೊಂದು ಕಾರಿಗೆ ಅಡ್ಡಸಿಕ್ಕು ಸತ್ತಾಗ ನ್ಯಾಯ ಹೇಳಲು ;ಇನ್ನೂ ಮುಗಿಸುವ ಮುನ್ನವೇ ಅರ್ಧದಲ್ಲಿ ಎದ್ದು ಅವಸರವಸರವಾಗಿ ಚಡ್ಡಿಯ ಲಾಡಿ ಬಿಗಿದು ಕೊಳ್ಳುತ್ತಾ,, ಓಡಿ ಬಂದು ಅಧಿಕಪ್ರಸಂಗಿಯ ಫೋಜು ಕೊಟ್ಟರೆ ಅಕ್ಕ-ಪಕ್ಕ ನಿಂತವರು ಹೇಸಿಕೊಂಡು ಮೂಗು ಮುಚ್ಚಿಕೊಳ್ಳುತ್ತಾರೆಯೇ ಹೊರತು ಚಬ್ಭೇಶ್ (!) ಎಂದು ಬಂದು ನಿಮ್ಮ ಅಂಡು ತಟ್ಟಲಾರರು ಅಲ್ವ?




ಪತ್ರಿಕೆಯೊಂದರ ಅಂಕಣ ಬರೆಯುವ ಅವಕಾಶ ನಿಮಗಿದೆ ಸಂತೋಷ,ಅಲ್ಲಿ ನೀವು ಬರೆಯುವ ಪ್ರತಿ ವಿಚಾರವೂ ನಿಮ್ಮ ವಯಕ್ತಿಕ ವಿಚಾರಧಾರೆ,ಅದೂ ಓಕೆ.ಹಾಗಂತ ನೀವು ಸಿಕ್ಕ ಸಿಕ್ಕ ಹಾಗೆ ಕೆರೆಯುತ್ತ ಹೋದರೆ ಪತ್ರಿಕೆಯನ್ನು ದುಡ್ಡು ಕೊಟ್ಟುಕೊಂಡು ಓದುವ ಪ್ರಾಮಾಣಿಕ ಓದುಗರಾದ ನಮ್ಮಂತವರಿಗೆ ಕಿರಿಕಿರಿ ಆಗದೆ ಇರುತ್ತದೆಯೇ? ಅಲ್ಲಾರೀ ಸೊಹ್ರಾಬುದ್ದೀನ್ ಬಗ್ಗೆ ಬರೀತೀರಿ ಅವನೊಬ್ಬ ಲುಚ್ಚ- ಉಗ್ರಗಾಮಿ- ದೇಶದ್ರೋಹಿ ಅಂತ ಚಿತ್ರಿಸ್ತೀರಿ ನಿಮ್ಮ ಬಳಿ ಅದಕ್ಕೆ ಇರುವ ಆಧಾರಗಳೇನು ಸ್ವಾಮೀ? ಕೇವಲ ಪೊಲೀಸ್ ಹೇಳಿಕೆಗಳಲ್ಲಿ ಅದೆಷ್ಟು ತಥ್ಯವಿದೆ ಅನ್ನೋದನ್ನ ಕಳೆದ ವಾರದಿಂದ ಟೈಮ್ಸ್ ನೌ,ಸಿಎನ್ಎನ್ ವಾಹಿನಿಗಳ ಕುಟುಕು ಕಾರ್ಯಾಚರಣೆಗಳು ಬಯಲು ಮಾಡಿವೆ,ಗುಜರಾತ್ ಸರಕಾರ ಅಲ್ಲಿನ ಆಡಳಿತಾರೂಢ ಪಕ್ಷ ತಮ್ಮ ಹೀನಚಾಳಿಗಳಿಂದ ಮುಖ ಮುಚ್ಚಿಕೊಳ್ಳಲು ಪರದಾಡುತ್ತಿರುವುದು ಟೀವಿ ಪರದೆಯ ಮೇಲೆ ಬಯಲಾಗಿ, ಅಲ್ಲಿನ ಮುಖ್ಯಮಂತ್ರಿ ಸೇರಿದಂತೆ ಅಮಿತ್ ಷಾವರೆಗೆ ಎಲ್ಲರೂ ಲೋಕದ ಮುಂದೆ ಬೆತ್ತಲಾಗುತ್ತಿದ್ದರೂ ಭಂಡತನದಿಂದ ಅವರನ್ನು ಮೀರಿಸುವಂತೆ ತಾವೂ ಬೆತ್ತಲಾಗುತ್ತಿದ್ದೀರಿ.ತಮ್ಮದು ಹಳೆ ಖಾಯಿಲೆ ಆದ್ದರಿಂದ ಚಿಕಿತ್ಸೆ ಅನಿವಾರ್ಯವಾಗಿದೆ,ಹೀಗಾಗಿ ಈ ಪ್ರತಿಕ್ರಿಯೆ.ಇಷ್ಟಕ್ಕೆ ತಮ್ಮ ಸುಟ್ಟ ಲೇಖನವನ್ನ ಬಹಳ ಗಂಭೀರವಾಗಿ ತೆಗೆದುಕೊಳ್ಳಲಾಗಿದೆ ಎಂಬ ಭ್ರಮೆಗೆ ಬೀಳಬೇಡಿ ಪ್ಲೀಸ್.





ಮೊದಲು ಪ್ರಕರಣದ ಹಿನ್ನೆಲೆ ಸರಿಯಾಗಿ ತಿಳಿದುಕೊಳ್ಳಿ. ಆಮೇಲೆ ಆವೇಶದಿಂದ ಬರೆಯುವಿರಂತೆ.. ಸೊಹ್ರಾಬುದ್ದೀನ್ ವಂಚಕ-ಅಪಾಯಕಾರಿ ವ್ಯಕ್ತಿ ಅಂತ ಸರ್ಟಿಫಿಕೆಟ್ ಕೊಟ್ಟವರು ಗುಜರಾತ್ ಪೊಲೀಸರೇ ಹೊರತು ಇನ್ಯಾರೂ ಅಲ್ಲ.ಅಲ್ಲಿನ ರಾಜಕಾರಣಿಗಳ ಹರಾಮಿ ಕಮಾಯಿಗಳನ್ನ ದೊಡ್ಡ ದ್ವನಿಯಲ್ಲಿ ಬಹಿರಂಗ ಪಡಿಸುತ್ತಿದ್ದ ಸಾಮಾಜಿಕ ಕಾರ್ಯಕರ್ತ ಆಗಿದ್ದವನನ್ನ ಕುಖ್ಯಾತ ದೇಶದ್ರೋಹಿ ಸಂಘಟನೆಗಳ ಸದಸ್ಯನೆಂದು ಬಿಂಬಿಸಲಾಯಿತು,ಏಕೆ? ದುಷ್ಟ ರಾಜಕಾರಣಿಗಳ ಹುಳುಕು ಮುಚ್ಚಿಕೊಳ್ಳೋಕೆ.ಸಾಮಾಜಿಕ ಕಾರ್ಯಕರ್ತರನ್ನ ಮುಖ್ಯಮಂತ್ರಿಗಳ ಹತ್ಯೆಯ ಸಂಚಿನಡಿ ಬಂಧಿಸೋದು ಅಲ್ಲಿನ ಜನಪ್ರಿಯ ಚಾಳಿ.ಸರಿ ಆ ಕೇಸನ್ನೂ ಹೆಟ್ಟಲಾಯಿತು. ಅದು ವಿಫಲ ಪ್ರಯತ್ನವಾದಾಗ ಅವನನ್ನೂ,ಎರಡು ದಿನದ ಅಂತರದಲ್ಲಿ ಅವನ ಹೆಂಡತಿ ಕೌಸರ್ ಬೀಯನ್ನು,೨೦೦೬ರ ದಶಂಬರ್ ನಲ್ಲಿ ಸರಿ ಸುಮಾರು ವರ್ಷದ ನಂತರ ಸೊಹ್ರಾಬ್-ಕೌಸರ್ ನಕಲಿ ಎನ್ಕೌಂಟರ್ ಪ್ರಕರಣದ ಪ್ರಮುಖ ಸಾಕ್ಷಿ ತುಳಸಿರಾಮ್ ಪ್ರಜಾಪತಿಯನ್ನೂ ಹೀಗೆಯೇ ಗುಂಡಿಟ್ಟು ಕೊಲ್ಲಲ್ಲಯಿತು (ಆದ್ರೆ ಇವ್ಯಾವುದೂ ನಿಮ್ಮ ವಾದಕ್ಕೆ ಪೂರಕ ವಾಗಿಲ್ಲದ್ದರಿಂದ ನಿಮಗೆ ಮರೆತು ಹೋಗಿದೆ! ಅಥವಾ ನಿಮಗೆ ಇದೆಲ್ಲ ಗೊತ್ತೇ ಇಲ್ಲ!) . ಇನ್ನು ಮಹಾರಾಷ್ಟ್ರ,ಮಧ್ಯಪ್ರದೇಶ,ಆಂಧ್ರಪ್ರದೇಶಗಳಲ್ಲಿ ಅವನ ಮೇಲೆ ದಾಖಲಾದ ಮೊಕದ್ದಮೆಗಳ ಕುರಿತು....ಇವೆಲ್ಲ ಮೊಕದ್ದಮೆಗಳು ಗುಜರಾತ್ ಪೋಲೀಸರ ಸ್ವಯಂ ಪ್ರೇರಿತ ಅಪಾದನೆಗಳ ಕಾಳಜಿಯಿಂದ ದಾಖಲಾದವೇ ಹೊರತು ಸದರಿ ರಾಜ್ಯಗಳ ಪೋಲೀಸರ ಗುಪ್ತಚರ ಮಾಹಿತಿಯಿಂದಲ್ಲ.ಅಸಲಿಗೆ ಅಂತಹ ಪ್ರಕರಣಗಳು ಸೃಷ್ಟಿಸಲ್ಪಟ್ಟ planted ಪ್ರಕರಣಗಳಾಗಿದ್ದವು.ಅಲ್ಲಿ ಮುಟ್ಟುಗೋಲು ಹಾಕಲಾದ ಶಸ್ತ್ರಾಸ್ತ್ರಗಳು ಯೋಜಿತ ಕುತಂತ್ರದ ಭಾಗವೇ ಆಗಿದ್ದವು.ಇದನ್ನು ಹೇಳುತ್ತಿರೋದು ನಾನಲ್ಲ,ಗುಜರಾತ್ ಸರಕಾರದ ಸಿಓಡಿ ೨೦೦೬ರ ಡಿಸೆಂಬರ್ನಲ್ಲಿ ಅಲ್ಲಿನ ಸರಕಾರಕ್ಕೆ ಸಲ್ಲಿಸಿದ್ದ ೧೦೦೦ ಪುಟಗಳ ಆಂತರಿಕ ಗುಪ್ತಚರ ವರದಿಯಿಂದ ಎತ್ತಿಕೊಂಡದ್ದು. ಯಾರುತಾನೆ ತನ್ನ ಕಾಲ ಮೇಲೆ ತಾನೇ ಕಲ್ಲು ಎತ್ತಿ ಹಾಕಿಕೊಳ್ಳುತ್ತಾರೆ? ಯಥಾ ಪ್ರಕಾರ ಸರಕಾರ ತನ್ನ ಅಂಡಿನ ಅಡಿಗೆ ಆ ವರದಿಯನ್ನು ತಳ್ಳಿ ಹಾಕಿತು.ಈಗ ಸುಪ್ರೀಂ ಕೋರ್ಟ್ನ ಮಧ್ಯಪ್ರವೇಶ ಆದ ನಂತರ ಅಂದರೆ ಎಪ್ರಿಲ್ ೨೦೦೭ರ ನಂತರ ಈ ವರದಿಗೆ ಮತ್ತೆ ಜೀವ ಬಂತು,೨೪ ಎಪ್ರಿಲ್ ೨೦೦೭ಕ್ಕೆ ಗುಜರಾತ್ ಐಜಿಪಿ ರಾಜ್ ಕುಮಾರ್ ಪಾಂಡಿಯನ್,ಆಗಿನ ಅಲ್ಲಿನ ಪೊಲೀಸ್ ಉಪಮಹಾನಿರ್ದೇಶಕ ಡಿ ಜಿ ಬಂಜಾರ ಹಾಗು ಐಪಿಎಸ್ನಲ್ಲಿ ರಾಜಸ್ತಾನ ಕೇಡರ್ ನ ಅಧಿಕಾರಿಯಾಗಿರುವ ಎಂ ಎನ್ ದಿನೇಶ್ ದಸ್ತಗಿರಿಯಾದರು.ಇಂದಿಗೂ ವಿಚಾರಣಾಧೀನ ಕೈದಿಗಳ ಗೆಟಪ್ಪಿನಲ್ಲಿ ಅವರು ಅಹಮದಾಬಾದ್ ಕೇಂದ್ರೀಯ ಕಾರಾಗೃಹದ ರೊಟ್ಟಿ ಮುರಿಯುತ್ತಿದ್ದಾರೆ,ಸದರಿ ಸಿಓಡಿ ವರದಿ ಪತ್ರಕರ್ತರಿಗೆ ಲಭ್ಯವಾಗಿದೆ ನಿಜವಾದ ಪತ್ರಿಕೋದ್ಯಮದ ದರ್ದು ನಿಮಗಿದ್ದರೆ ಸಂಪಾದಿಸಿಕೊಳ್ಳಿ.




ಇನ್ನು ರಸ್ತೆಯಲ್ಲಿ ನಡೆದ ಸಮಾವೇಶಗಳಲ್ಲಿ ಮೋದಿ ಸೊಹ್ರಾಬುದ್ದೀನ್ ಒಬ್ಬ ದೇಶದ್ರೋಹಿ ಅವನನ್ನು ಏನು ಮಾಡಬೇಕು? ಅಂದಾಗ ಜನ ಸಮೂಹ ಗುಂಡಿಟ್ಟು ಕೊಲ್ಲಬೇಕು ಅಂತ ಕಿರುಚಿದರು ಹೀಗಾಗಿ ಅದನ್ನೇ ಅವರು ಮಾಡಿದರು ಅಂತ ತಲೆಯೊಳಗೆ ಸಿಮೆಂಟು ತುಂಬಿ ಕೊಂಡವರಂತೆ ನಿರ್ಲಜ್ಜರಾಗಿ ಬರೆಯುತ್ತೀರಿ,,,ಅಲ್ರಿ ನಾಳೆ ಮೂರುರಸ್ತೆ ಸೇರುವಲ್ಲಿ ತಲೆ ತಿರುಕನೊಬ್ಬ ಗಾಂಚಲಿ ಹೆಚ್ಚಾದ ಸಮಾಜದ್ರೋಹಿ ಪ್ರತಾಪನನ್ನ ಏನು ಮಾಡಬೇಕು ? ಅಂತ ಕೇಳಿ...ಅಲ್ಲಿ ನೆರೆದ ತಲೆಮಾಸಿದ ಜನ ಸಮೂಹ ಗುಂಡಿಟ್ಟು ಕೊಲ್ಲಿರಿ ಎಂದರೆ ಹಾಗೆ ಮಾಡೋಣವೇನ್ರಿ? ಹೀಗಿದ್ದರೆ ನಮಗೆ ಐಪಿಸಿ ಯಾಕೆ ಬೇಕು?,ನಾವೆ ರೂಪಿಸಿ ಕೊಂಡಿರೋ ಕಾನೂನು ಕಟ್ಟಳೆಗಳು ಯಾಕೆತಾನೆ ಬೇಕು? ನೀವು ಮುಲ್ಲಾಗಳ ತರಹ ಹೀಗೆ ಫಾರ್ಮಾನು ಹೊರಡಿಸುತ್ತಿರಿ ;ನಾವು ಕಂಡಲ್ಲಿ ಗುಂಡನ್ನ ಸಿಡಿ ಸಿಡಿಸಿ ಸಮಾಜ ಉದ್ದಾರ ಮಾಡ್ತೇವೆ!


ಇನ್ನು ಸಿಬಿಐ ಯಾ ದುರ್ಬಳಕೆ, ಕಾಲಕಾಲಕ್ಕೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಎಲ್ಲ ಪಕ್ಷಗಳು ಮಾಡಿಕೊಂಡು ಬಂದದ್ದು ಅದನ್ನೇ.ಅಲ್ಲಿ ಪಕ್ಷ ಭೇದ ಸಲ್ಲ.ಸುಪ್ರೀಂ ಕೋರ್ಟ್ ಮರ್ಜಿಯಂತೆ ನಡೆಯುತ್ತಿರೋ ವಿಚಾರಣೆಗೆ ಕೇಂದ್ರದತ್ತ ಬೊಟ್ಟು ಮಾಡಿ ವಿಷಯಾಂತರ ಮಾಡಿದ್ದೀರಿ.ರಾಜೀವ್ ಶುಕ್ಲ,ಚಂದನ್ ಮಿತ್ರ,ತರುಣ್ ವಿಜಯ್,ತೇಜಸ್ವಿನಿ ಶ್ರೀರಮೇಶ್ ರಂತಹ ಹುದ್ದೆಗೆ ಜೋಲ್ಲುಸುರಿಸೋ ಪತ್ರಕರ್ತರ ಎಲ್ಲ ಲಕ್ಷಣಗಳೂ ತಮ್ಮಲ್ಲಿ ಗೋಚರಿಸುತ್ತಿವೆ.ದಯವಿಟ್ಟು ಜೊಲ್ಲು ಒರೆಸಿಕೊಳ್ಳಿ.ಇದನ್ನು ರಾಜಕೀಯ ಪ್ರೇರಿತ ಅಂತ ಬಿಂಬಿಸಿ ಪವಿತ್ರ ನ್ಯಾಯಸ್ಥಾನದ ಮರ್ಯಾದೆ ಕಳೆಯುವ ಅಲ್ಪತನಕ್ಕೆ ಇಳಿಯಬೇಡಿ. ಅಷ್ಟಕ್ಕೂ ಈ ವರದಿ ತಯಾರಾದದ್ದು ಗುಜರಾತ್ ಸರಕಾರದ ನಿಯಂತ್ರಣದಡಿ ಇರುವ ಸಿಓಡಿಯಿಂದ ಅನ್ನೋದನ್ನ ನೆನಪಿಡಿ.


ಮೂಲಭೂತವಾದ ಯಾರಿಂದ ನಡೆದರೂ ಅದು ಅಕ್ಷಮ್ಯವೇ.ದೀನ್ದಾರ್ ಅಂಜುಮನ್-ಸಿಮಿ-ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ ದಂತಹ ಛದ್ಮವೇಷದಲ್ಲಿ ಮುಸ್ಲಿಂ ಮುಲ್ಲಾಗಳು ಅದೇ ಕೋಮಿನ ಕಮಂಗಿಗಳ ಕೈಯಲ್ಲಿ ಮಾಡಿಸುತ್ತಿರೋ ಭಯೋತ್ಪಾದನೆಗೂ...ಅಭಿನವ್ ಭಾರತ-ಭಜರಂಗದಳ ಹೆಸರಲ್ಲಿ ಹಿಂದೂ ಹದ್ದುಗಳು ಮಾಡಿಸುತ್ತಿರೋ ಗಲಭೆಗಳಿಗೂ ವ್ಯತ್ಯಾಸವೇನಿಲ್ಲ.ಎರಡೂ ದೇಶ ದ್ರೋಹವೇ.ನೀವೇನು ಬಿಜೆಪಿಯ ಭಗತ್ ಸಿಂಗರೇ? ಬಿಟ್ಟಿ ಸಿಕ್ಕ ಜಾಗದಲ್ಲಿ ಕಂಡಕಂಡಲ್ಲಿ ಕಾಲೆತ್ತುವ ಶ್ವಾನದ ಹಾಗೆ ಪ್ರತಾಪ ಕೊಚ್ಚಿಕೊಂಡ ಮಾತ್ರಕ್ಕೆ ಗ್ರಾಮ ಸಿಂಹ ಭಗತ್ ಸಿಂಹನಾಗೋದು ಸಾಧ್ಯವೇ ಸಾರ್? ಇದನ್ನು ಓದಿ ಇನ್ನೊಮ್ಮೆ ಅಂಗಿ ಹರಿದುಕೊಳ್ಳಬೇಡಿ ಮತ್ತೆ.ಎಷ್ಟೂ ಅಂತ ನಿಮ್ಮನ್ನ ಬರಿ ಬೆತ್ತಲೆ ನೋಡೋದು?...ಥೂ...ಅಸಹ್ಯ...

2 comments:

ನಾಗರಾಜ್ .ಕೆ (NRK) said...

ನಿಮ್ಮ ಬರಹ ತುಂಬಾ ಹರಿತವಾಗಿದೆ ಮತ್ತು ಧಾಖಲಿಸಿರುವ ವಿಷಯ ಸಂಗ್ರಹಣೆಯಿಂದ ಅದಕ್ಕೆ ಸ್ಪಷ್ಟತೆ ಸಿಕ್ಕಿದೆ.
ಬರೆಯುವ ಅವಕಾಶ ಇದೆಯೆಂದು ಯಾರೇ ಆಗಲಿ ಜಡ್ಜ್ ಮೆಂಟ್ ಕೊಡುವಂತಹ ಉದ್ದಟತನ ತೋರಿಸಬಾರದು.
ಒಂದು ವಿಷಯಕ್ಕೆ ಇನ್ನೊಂದು ಆಯಾಮ ಕೊಡುವ ಪ್ರಯತ್ನ ಖಂಡಿತವಾಗಿ ಇಲ್ಲಿ ಕಾಣಸಿಗುತ್ತೆ.
ಈ ಬರಹ ಯಾರಿಗೆ ಮುಟ್ಟ ಬೇಕೋ ಅವರಿಗೆ ಮುಟ್ಟಿದರೆ ಚೆನ್ನ, ಆದಷ್ಟು ಬೇಗ ಹಾಗಗಾಲಿ.
ಆತ ಕೂಡ ಒಳ್ಳೆಯ ಅಂಕಣಕಾರ ಆದರೆ ಕೆಲವು ವಿಷಯಗಳ ಬಗ್ಗೆ ಸೂಕ್ಷ್ಮವಾಗಿ ವರ್ತಿಸುವಲ್ಲಿ ವಿಫಲವಾಗ್ತಾನೆ.
ಓದಿ ಸ್ವಲ್ಪ ವಿಚಾರ ಮಾಡಿದೆ.
ಥ್ಯಾಂಕ್ಸ್, move on . . .

Anagha Kirana ಅನಘ ಕಿರಣ said...

ಮುಟ್ಟ ಬೇಕಿದ್ದ ವ್ಯಕ್ತಿಗೆ ನೇರವಾಗಿ ಮಿಂಚಂಚೆ ಕಳಿಸಿದ್ದೇನೆ,ಆದರೆ ಆತ ತಿದ್ದಿಕೊಳ್ಳುತ್ತಾರೆ ಎಂಬ ಭರವಸೆ ಖಂಡಿತ ನನಗಿಲ್ಲ.ಹೀನ ಸುಳಿ ಬೋಳಿಸಿದರೂ ಹೋಗದು....you know!