ಮೋಹದ ಕಿಡಿ ಭಾವದ ಅರಗಿಗೆ ತಾಕಿ ಹೊತ್ತಿ ಉರಿದಾಗಲೂ ನನಗೆ ಅರ್ಥವಾಗಿರಲಿಲ್ಲ, 
ನಿನ್ನದೇ ನೆನಪು ಮೂರು ಹೊತ್ತು ಕಾಡಲಾರಂಭಿಸಿದಾಗಲೂ...ಮನಸ ಆಸೆ ಉಸುರೋದು ಶರ್ತವಾಗಿರಲಿಲ್ಲ/ 
ಆದರೆ ನೀನೊಮ್ಮೆ ಬಾಳಲಿ ಬಂದ ಮೇಲೆ... ನಿನ್ನೊಲವ ಸಾಕ್ಷಾತ್ಕಾರದಲಿ ನಾನು ಪರಿಶುದ್ಧನಾದೆ, 
ನಿನ್ನೆದೆ ಬೋಧಿ ಮರದಡಿ ಕೂತು ಬುದ್ಧನಾದೆ// 
ಆಸೆಯೇ ಇಲ್ಲದೆ ಬರಿಬತ್ತಲಾಗಿಸಿದ್ದೆ ಮನಸನೆಲ್ಲ, 
ನೀ ಬಂದೆ ನೋಡು...ಕನಸ ನೀ ತಂದೆ ನೋಡು/ 
ನಿನ್ನೊಲವ ಜಾಲದಲಿ ಜೀವದ ಹಂಗು ಬಿಟ್ಟು ಕಾದುವ ಕಲಿಯಾದೆ, 
ಜಗದ ಮೋಹವನೆಲ್ಲ ನಿನಗಾಗಿ ಬಿಟ್ಟ ಬಾಹುಬಲಿಯಾದೆ//
10 August 2010
Subscribe to:
Post Comments (Atom)
 
 
No comments:
Post a Comment